ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಮುತಾಲಿಕ್ ಪ್ರಕರಣ ಸಿಬಿಐಗೆ ವಹಿಸಿ : ಅಗ್ನಿ ಶ್ರೀಧರ್
ಶ್ರೀರಾಮಸೇನೆಯ ಈ ಪ್ರಕರಣ ರಾಷ್ಟ್ರ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಆದರೆ, ಕರ್ನಾಟಕದಲ್ಲಿ ಇದರ ತೀವ್ರ ತೆಯೇ ಇಲ್ಲದಿರುವುದು ಅತ್ಯಂತ ಬೇಸರದ ಸಂಗತಿ. ಈ ಕೆಲಸವನ್ನು ಮುಸ್ಲಿಮರಸಂಘಟನೆಯೊಂದು ಮಾಡಿದ್ದರೆ, ಅದರ ತೀವ್ರತೆ ಹೇಗಿರುತ್ತಿತ್ತು? ಎಂದು ಕರುನಾಡ ಸೇನೆ ಕಾರ್ಯಾಧ್ಯಕ್ಷ ಅಗ್ನಿ ಶ್ರೀಧರ್ ಪತ್ರಿಕಾಗೋಷ್ಠಿಯಲ್ಲಿ ಶನಿವಾರ ಪ್ರಶ್ನಿಸಿದರು. ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸದ ಸಂಘ ಪರಿವಾರಗಳು ಮುತಾಲಿಕ್ಗೂ, ನಮಗೂ ಸಂಬಂಧವಿಲ್ಲ ಎನ್ನುತ್ತಿವೆ ಎಂದು ಆರೋಪಿಸಿದರು.
ಪ್ರಮೋದ್ ಮುತಾಲಿಕ್ ಹಾಗೂ ಈ ಪ್ರಕರಣದಲ್ಲಿ ಭಾಗಿಯಾದವರನ್ನು ಕೂಡಲೇ ಬಂಧಿಸಬೇಕು. ಈ ಪ್ರಕರಣವನ್ನು ಸಿಬಿಐಗೆ ಒಪ್ಪಿಸಬೇಕು ಮತ್ತು ಶ್ರೀರಾಮಸೇನೆ ಯನ್ನು ನಿಷೇಧಿಸಬೇಕು. ಇಲ್ಲದಿದ್ದರೆ ಮೇ18ರ ನಂತರ ಗಾಂಧಿ ಪ್ರತಿಮೆ ಎದುರು ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು. ಸಂಚಾಲಕ ತಲಕಾಡು ಚಿಕ್ಕರಂಗೇಗೌಡ ಮಾತನಾಡಿ, ಮಾತೆತ್ತಿದರೆ ಅಪರಾಧಿಗಳನ್ನು ಗಲ್ಲಿಗೇರಿಸಬೇಕು ಎನ್ನುವ ಮುತಾಲಿಕ್ ಅವರನ್ನು ಈಗ ಏನು ಮಾಡಬೇಕು ಎಂದು ಪ್ರಶ್ನಿಸಿದರು.
Comments
ಅಗ್ನಿ ಶ್ರೀಧರ್ ಪ್ರಮೋದ್ ಮುತಾಲಿಕ್ ಶ್ರೀರಾಮಸೇನೆ ಹಿಂದೂ ತೆಹಲ್ಕಾ ಮುಸ್ಲಿಂ ಕೋಮುಗಲಭೆ ಬೆಂಗಳೂರು pramod muthalik tehalka sri ram sene hindu muslim communal riots bangalore
Story first published: Sunday, May 16, 2010, 12:59 [IST]