ನಾವು ಸುಲಿಗೆಕೋರರಾ? ದರೋಡೆಕೋರರಾ?

ಅಕ್ರಮ ಸಂಪಾದನೆ ಮತ್ತು ನಿರುದ್ಯೋಗ ರಾಜಕಾರಣಗಳ ಜೊತೆಗೆ ಗುರುತಿಸಿಕೊಂಡಿರುವ ಬಲ್ಡೋಟ ಎಂಬ ವ್ಯಕ್ತಿಯ ಪ್ರಚೋದನೆಯಿಂದ ಈ ಬೆಳವಣಿಗೆಗಳು ನಡೆದಿವೆ ಎಂಬುದು ಇಡೀ ಲೋಕಕ್ಕೇ ಗೊತ್ತಿದೆ. ಸಾರ್ವಜನಿಕ ಬದುಕಿನಲ್ಲಿರುವ ನಾನು ನನ್ನ ಮುಂದಿನ ಉತ್ತಮ ರಾಜಕೀಯ ಭವಿಷ್ಯವನ್ನು ಸಹಿಸಲಾಗದ ಮೈನ್ಸ್ ವೀರಪ್ಪನೆಂದು ಹೆಸರು ಪಡೆದ ವ್ಯಕ್ತಿಯಿಂದ ಆರ್ಥಿಕ ಸಹಾಯ ಪಡೆದ ನಿರುದ್ಯೋಗಿ ರಾಜಕಾರಣಿಗಳು ನನ್ನ, ನನ್ನ ಸಹೋದರರ ಹಾಗೂ ನನ್ನ ಗಣಿಗಾರಿಕೆ ಸಂಸ್ಥೆಗಳ ಮೇಲೆ ಇಲ್ಲ ಸಲ್ಲದ ಆರೋಪ ಮಾಡುವುದನ್ನೆ ಉದ್ಯೋಗವಾಗಿಸಿಕೊಂಡಿದ್ದಾರೆ.
ಈಗಿನ ಆಂಧ್ರಪ್ರದೇಶ ಸರ್ಕಾರ ರಾಜಕೀಯ ಕಾರಣಗಳಿಂದ ಕಾನೂನು ಬಾಹಿರವಾಗಿ ನಮ್ಮ ಕಂಪನಿ ಗಣಿಗಾರಿಕೆಯನ್ನು ಸ್ಥಗಿತಗೊಳಿಸಿದ್ದು, ಅದನ್ನು ಆಂಧ್ರದ ಉಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಲಾಗಿ, ವಿಚಾರಣೆ ನಡೆದು, ಗಣಿಗಾರಿಕೆ ನಿಷೇಧದ ಆಂಧ್ರ ರಾಜ್ಯ ಸರ್ಕಾರದ ಆದೇಶವನ್ನು ಉಚ್ಚ ನ್ಯಾಯಾಲಯ ರದ್ದುಗೊಳಿಸಿದೆ. ಆ ಕುರಿತು ಆಂಧ್ರ ಸರ್ಕಾರ ಸರ್ವೋಚ್ಚನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿರುವುದು ತಮಗೆಲ್ಲ ತಿಳಿದ ವಿಷಯ.
ಮಾನ್ಯ ಸರ್ವೋಚ್ಚನ್ಯಾಯಾಲಯವು ನಿರಾಧಾರ ಆರೋಪಗಳನ್ನು ಕೊನೆಗಾಣಿಸಿ ನ್ಯಾಯ ಒದಗಿಸಲು ಅನಂತಪುರ ಜಿಲ್ಲೆಯ 6 ಗಣಿ ಗುತ್ತಿಗೆ ಪ್ರದೇಶಗಳನ್ನು ಸರ್ವೆ ನಡೆಸಲು ಹಲವಾರು ಇಲಾಖೆಯ ಅಧಿಕಾರಿಗಳನ್ನು ಒಳಗೊಂಡ ಸಮಿತಿಯನ್ನು ರಚಿಸಿರುವುದೂ ತಮಗೆ ಗೊತ್ತಿರುವ ವಿಷಯ. ಆ ಸಮಿತಿಯು ಅತ್ಯಾಧುನಿಕ ಉಪಕರಣಗಳನ್ನು ಬಳಿಸಿ ನಮ್ಮ ಓಎಂಸಿಯ 3 ಗಣಿ ಗುತ್ತಿಗೆ ಪ್ರದೇಶಗಳನ್ನು ಮತ್ತು ನಮ್ಮ ಪಾಲುದಾರಿಕೆ ಒಂದು ಸಂಸ್ಥೆಯನ್ನು ಮತ್ತು ಇತರ ಎಸ್.ಕೆ. ಮೋದಿಯವರ (ಬಿ.ಐ.ಓಪಿ) ಹಾಗೂ ವೈ.ಎಂ. & ಸನ್ಸ್ ಅವರಿಗೆ ಸೇರಿದ 2 ಗುತ್ತಿಗೆ ಪ್ರದೇಶಗಳನ್ನು ಸರ್ವೆ ನಡೆಸಿವೆ. ಎಲ್ಲರಿಗೂ ತಿಳಿದ ಹಾಗೆ ನಮಗೆ ಓಬಳಾಪುರಂ ಗ್ರಾಮದಲ್ಲಿ 3 ಗಣಿ ಗುತ್ತಿಗೆ ಹಾಗೂ ಅಲ್ಲಿಂದ 5 ಕಿ.ಮಿ.ಅಂತರದ ಮಲಪನಗುಡಿ ಗ್ರಾಮದಲ್ಲಿ ಇನ್ನೊಂದು ಗಣಿ ಗುತ್ತಿಗೆ ಇದೆ.
ಮಾನ್ಯ ಸರ್ವೋಚ್ಚ ನ್ಯಾಯಾಲಯ ನೇಮಿಸಿದ ಸಮಿತಿಯು ಸರ್ವೆಯನ್ನು ನಡೆಸಿ ದಿನಾಂಕ 06.04.2010 ರಂದು ಒಂದು ವರದಿಯನ್ನು, ದಿನಾಂಕ 20.04.2010 ರಂದು ಇನ್ನೊಂದು ವರದಿಯನ್ನು ಸಮಿತಿ ನ್ಯಾಯಾಲಯಕ್ಕೆ ಸಲ್ಲಿಸಿದೆ. ಮಾನ್ಯ ಸರ್ವೋಚ್ಚನ್ಯಾಯಲಯ ನೇಮಿಸಿದ ಸಮಿತಿ ಸಲ್ಲಿಸಿರುವ ವರದಿಯಲ್ಲಿ ಕೆಲವು ಅಂಕಿ ಅಂಶಗಳನ್ನು ಕೆಳಗೆ ಸಲ್ಲಿಸಲಾಗಿದೆ.
ಅಂಕಿ ಅಂಶಗಳೇ ಮಾತನಾಡಲಿ
ಮಂ.ಪ್ರ : 25.98 ಹೆಕ್ಟೇರ್, ಗ್ರಾ. : ಓಬಳಾಪುರಂ, ಸ್ವಾ.ಪ್ರ: 25 ಹೆಕ್ಟೇರ್, ಕೊ.ಇ.ಪ್ರ : 0.98 ಹೆಕ್ಟೇರ್
ಮಂ.ಪ್ರ : 6.5 ಹೆಕ್ಟೇರ್, ಗ್ರಾ. : ಓಬಳಾಪುರಂ, ಸ್ವಾ.ಪ್ರ: 6.3 ಹೆಕ್ಟೇರ್, ಕೊ.ಇ.ಪ್ರ :0.2 ಹೆಕ್ಟೇರ್
ಮಂ.ಪ್ರ : 39.5 ಹೆಕ್ಟೇರ್, ಗ್ರಾ. : ಓಬಳಾಪುರಂ, ಸ್ವಾ.ಪ್ರ: 38.5 ಹೆಕ್ಟೇರ್, ಕೊ.ಇ.ಪ್ರ : 1 ಹೆಕ್ಟೇರ್
ಮಂ.ಪ್ರ : 68.5 ಹೆಕ್ಟೇರ್, ಗ್ರಾ. : ಓಬಳಾಪುರಂ, ಸ್ವಾ.ಪ್ರ: 68.4 ಹೆಕ್ಟೇರ್, ಕೊ.ಇ.ಪ್ರ : 0.1 ಹೆಕ್ಟೇರ್
ಮಂ.ಪ್ರ : ಮಂಜೂರಾದ ಪ್ರದೇಶ
ಗ್ರಾ. : ಗ್ರಾಮ
ಸ್ವಾ.ಪ್ರ : ಸ್ವಾಧೀನದಲ್ಲಿರುವ ಪ್ರದೇಶ
ಕೊ.ಇ.ಪ್ರ : ಮಂಜೂರಾದ ಪ್ರದೇಶಕ್ಕಿಂತ ಕೊರತೆ ಇರುವ ಪ್ರದೇಶ
ಈ ಮೇಲೆ ತೋರಿಸಿದ ವಿವರಗಳನ್ನು ನೋಡಿದಾಗ ಓ.ಎಂ.ಸಿ ಹಾಗೂ ಅನಂತಪುರ ಮೈನಿಂಗ್ ಕಾರ್ಪೋರೇಷನ್ ಸಂಸ್ಥೆ ತನಗೆ ಮಂಜೂರಾದ ಪ್ರದೇಶಕ್ಕಿಂತ ಹೆಚ್ಚಿನ ಪ್ರದೇಶದಲ್ಲಿ ಗಣಿಗಾರಿಕೆ ಮಾಡಿಲ್ಲ ಅಥವಾ ಅತಿಕ್ರಮಣ ನಡೆದಿಲ್ಲ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ. ಆದಾಗ್ಯೂ ನಮ್ಮ ಕಂಪನಿ ಅತಿಕ್ರಮಣ ಹಾಗೂ ಆಕ್ರಮ ಗಣಿಗಾರಿಕೆಯಲ್ಲಿ ತೊಡಗಿಲ್ಲ ಎಂದು ಹೇಳಲು ಆಂಧ್ರ ಸರ್ಕಾರದಲ್ಲಿ 9 ವರದಿಗಳಿವೆ.
ಸರ್ವೆ ಆಫ್ ಇಂಡಿಯಾ ವರದಿಯ ಮುಖ್ಯಾಂಶಗಳು »
-
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
ಜಿಮ್ನಲ್ಲಿ ಭೇಟಿ, ಸಾಫ್ಟ್ವೇರ್ ಕಂಪನಿ ಕೆಲಸ: 7,500 ರೂ. ಸಂಬಳ ಪಡೆಯುತ್ತಿದ್ದ ಅಶ್ವಿನಿ ಅಪ್ಪು ಮನಗೆದ್ದಿದ್ದು ಹೇಗೆ? -
Vehicle Loan: ವಾಹನ ಮಾಲೀಕರಿಗೆ ಗುಡ್ನ್ಯೂಸ್: ಸಾಲ ಪ್ರಕ್ರಿಯೆ, ಆರ್ಸಿ ಅಪ್ಡೇಟ್ಗೆ ಇನ್ಮುಂದೆ ಆನ್ಲೈನ್ ವ್ಯವಸ್ಥೆ -
Horoscope March 11: ಈ ರಾಶಿಯವರಿಗೆ ಸಿಗಲಿವೆ ಹೊಸ ಅವಕಾಶಗಳು, ಬುದಕಿನಲ್ಲಿ ಯಶಸ್ಸು; ಇಂದಿನ ದಿನ ಭವಿಷ್ಯ -
KEA PGNEET: ಕೆಇಎಯಿಂದ ಮತ್ತೊಂದು ಸುತ್ತಿನ ಸೀಟು ಹಂಚಿಕೆ; 783 ವೈದ್ಯಕೀಯ ಸೀಟುಗಳು ಬಾಕಿ -
ವಾಸ್ತು: ದಕ್ಷಿಣ ಗೇಟು ಶುಭವೋ ಅಥವಾ ಅಶುಭವೋ, ಉತ್ತರ ದ್ವಾರದ ವಾಸ್ತು ರಹಸ್ಯಗಳೇನು ಇಲ್ಲಿದೆ ಸಂಪೂರ್ಣ ಮಾಹಿತಿ -
ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಅಸ್ತು: 13 ವರ್ಷಗಳಿಂದ ಹಾಸಿಗೆ ಹಿಡಿದಿದ್ದ ಮಗನಿಗೆ ಮುಕ್ತಿ ನೀಡಲು ಕೋರಿದ್ದ ಪೋಷಕರು -
ಮತ್ತೆ ಶುರುವಾಗುತ್ತಾ ವರ್ಕ್ ಫ್ರಂ ಹೋಮ್? ಇಂಧನ ಕೊರತೆ ಬೆನ್ನಲ್ಲೇ ಹಲವು ದೇಶಗಳಲ್ಲಿ ಕಚೇರಿಗಳಿಗೆ ನಿರ್ಬಂಧ -
ಬೇಸಿಗೆಯಲ್ಲಿ ನೀವು ಚಿಲ್ಡ್ ಬಿಯರ್ ಕುಡಿಯುತ್ತೀರಾ, ಬಾಟಲ್ ಕೆಳಗಿಟ್ಟು ಇದನ್ನು ಓದಿ -
ಅರಬ್ ದೇಶಗಳ ಬ್ಯಾಕಿಂಗ್ ಸೇವೆ ಮೇಲೆ ಇರಾನ್ ಸೇನೆ ದಾಳಿ ಸಾಧ್ಯತೆ ಹಿನ್ನೆಲೆ ಕಟ್ಟೆಚ್ಚರ | Operation Roaring Lion












Click it and Unblock the Notifications