ಮುಂಬೈ:ಮತ್ತೆ ಗಗನಕ್ಕೇರಿದ ಗೃಹ ದರಗಳು

ಇಲ್ಲಿ 2007-08 ರಲ್ಲಿ ದರಗಳು 16 ರಿಂದ 17 ಸಾವಿರ ರೂಪಾಯಿಗಳಿಗೆ ಕುಸಿದಿದ್ದು, ಶೀಘ್ರ ಚೇತರಿಕೆ ಡೆವಲಪರ್ ಗಳೂ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಈ ದರ ಏರಿಕೆಯ ಕುರಿತು ರಿಸರ್ವ್ ಬ್ಯಾಂಕು ಕೂಡ ಟಿಪ್ಪಣಿ ಮಾಡಿದ್ದು ದರಗಳು ಆರ್ಥಿಕ ಬಿಕ್ಕಟ್ಟಿನ ಹಿಂದಿನ ದರಕ್ಕಿಂತ ಹೆಚ್ಚಿವೆ ಎಂದು ಹೇಳಿದೆ.
ಮಹಾಲಕ್ಮಿ ಪ್ರದೇಶದ ಸಮೀಪವಿರುವ ಲೋಧಾ ಬೆಲ್ಲಿಸಿಮೊದ ಫ್ಲ್ಯಾಟ್ ಗಳ ದರ ಚದರ ಅಡಿಗೆ ಈಗ 23 ರಿಂದ 24 ಸಾವಿರ ರೂಪಾಯಿಗಳವರೆಗೆ ಮಾರಾಟವಾಗುತ್ತಿದ್ದು ಇದು ಅತೀ ಹೆಚ್ಚಿನ ದರಕ್ಕಿಂತಲೂ ಶೇ.10 ರಷ್ಟು ಅಧಿಕವಾಗಿದೆ. ರಹೇಜ ವಿವಾರಿಯಾ ಅಪಾರ್ಟ್ ಮೆಂಟ್ ಗಳ ದರ ಚದರ ಅಡಿಗೆ 28 ಸಾವಿರ ರೂಪಾಯಿಗಳಿಗೆ ಮಾರಾಟವಾಗುತ್ತಿದೆ. ಆರ್ಥಿಕ ಬಿಕ್ಕಟ್ಟಿನ ಸಂದರ್ಭದಲ್ಲಿ ಇಲ್ಲಿನ ದರಗಳು ಶೇ.40 ರಷ್ಟು ಕುಸಿತ ದಾಖಲಿಸಿದ್ದವು.
ಬೇಡಿಕೆ ಹೆಚ್ಚಿದ ಹಿನ್ನೆಲೆಯಲ್ಲಿ ದೇಶಾದ್ಯಂತ ಮಹಾನಗರಗಳಲ್ಲಿ ಡೆವಲಪರ್ ಗಳು ಬೆಲೆಯನ್ನು ಹೆಚ್ಚಿಸಿದ್ದಾರೆ. 2009 ರ ದ್ವಿತೀಯ ತ್ರೈಮಾಸಿಕದಲ್ಲಿ ಗೃಹ ಖರೀದಿದದಾರರನ್ನು ಸೆಳೆಯಲು ಡೆವಲಪರ್ ಗಳು ಗೃಹದರಗಳನ್ನು ಶೇಕಡಾ 20 ರಿಂದ 30ರಷ್ಟು ಇಳಿಕೆ ಮಾಡಿದ್ದರು. ಇದೀಗ ಪುನಃ ಗೃಹ ದರಗಳನ್ನು ಶೇ.40 ರಷ್ಟು ಹೆಚ್ಚಿಸಲಾಗಿದ್ದು, ಮಾರಾಟ ಶೇ 20 ರಿಂದ 25 ರಷ್ಟು ಕುಸಿದಿದ್ದರೂ ಡೆವಲಪರ್ ಗಳು ದರ ಕಡಿಮೆ ಮಾಡಿಲ್ಲ.
ಕಳೆದ ಮಾರ್ಚ್ ನಲ್ಲಿ ಗೃಹ ಮಾರಾಟದಲ್ಲಿ ಬೆಳವಣಿಗೆ ಆಗದಿದ್ದರೂ ದರಗಳು ಕಡಿಮೆಯಾಗದ ಕುರಿತು ತೀವ್ರ ಆಶ್ಚರ್ಯ ವ್ಯಕ್ತಪಡಿಸಿದ ಉದ್ಯಮಿಯೊಬ್ಬರು ಮುಂದೆ ಇದು ಗುಳ್ಳೆಯಾಗಿ ಒಡೆಯಲಿದೆ ಎಂದು ಖಚಿತವಾಗಿ ಹೇಳುತ್ತಾರೆ. ಸರ್ಕಾರೀ ಮೂಲಗಳ ಪ್ರಕಾರ ಡೆವಲಪರ್ ಗಳು ಮುಂಬೈನಲ್ಲಿ 75 ಸಾವಿರ ಕೋಟಿ ರೂಪಾಯಿಗಳ ಸಾಲ ಪಡೆದಿದ್ದು ಈ ವರ್ಷ ಸಾಲ ಹಾಗೂ ಬಡ್ಡಿಯನ್ನಾಗಿ 25,000 ಕೋಟಿ ರೂಪಾಯಿಗಳನ್ನು ಪಾವತಿ ಮಾಡಬೇಕಾಗುತ್ತದೆ.
ಮುಂಬೈ ಪೂರ್ವ ಮತ್ತು ಪಶ್ಚಿಮ ಸಬ್ ಅರ್ಬ್ ಪ್ರದೇಶಗಳನ್ನು ಸಂಪರ್ಕಿಸುವ ಜೋಗೇಶ್ವರಿ ವಿಕ್ರೋಲಿ ಲಿಂಕ್ ರಸ್ತೆಯ ಸಮೀಪ ಆಪಾರ್ಟ್ ಮೆಂಟ್ ಗಳ ದರ ಪ್ರತೀ ಚದರ ಅಡಿಗೆ 2009 ರಲ್ಲಿ 6200 ರೂಪಾಯಿ ಇದ್ದದ್ದು ಈಗ 10 ಸಾವಿರ ರೂಪಾಯಿ ತಲುಪಿದೆ. ದರಗಳು ಆರ್ಥಿಕ ಹಿಂಜರಿತಕ್ಕೂ ಮೊದಲು ಇಷ್ಟು ಇರಲಿಲ್ಲ ಎನ್ನಲಾಗಿದ್ದು ಇನ್ನು ಸದ್ಯಕ್ಕೆ ದರ ಏರಿಕೆ ಆಗುವದಿಲ್ಲ ಎಂದು ಹೇಳಲಾಗಿದೆ.
-
Bengaluru: ಬೆಂಗಳೂರಿನ ಹೋಟೆಲ್ಗಳಲ್ಲಿ ಗ್ರಾಹಕರಿಗೆ ಶಾಕ್: ಸಾಂಬಾರ್ ಬದಲು ಬೇರೆ ಆಯ್ಕೆ - ಪೋಸ್ಟ್ ವೈರಲ್, ಡಿಸಿ ಹೇಳಿದ್ದೇನು -
Sulekere: ಮಂಡ್ಯದಲ್ಲಿ ಸೂಳೇಕೆರೆ ಮರುನಾಮಕರಣ ಚರ್ಚೆ: ಇತಿಹಾಸಕ್ಕೆ ಮಸಿ ಬಳಿಯಬೇಡಿ ಎಂದ ಜಗದೀಶ್ ಕೊಪ್ಪ -
B Khata: ಬಿ ಖಾತಾದಿಂದ ಎ ಖಾತಾ ಪರಿವರ್ತನೆ ಸವಾಲುಗಳು: ವೆಚ್ಚ, ಪ್ರಕ್ರಿಯೆ ಸ್ವಂತ ವಿವರ ಹಂಚಿಕೊಂಡ ಆಸ್ತಿದಾರ ಶ್ರೀನಿವಾಸ ಮಠ -
Rain in Karnataka: ಬಿರು ಬಿಸಿಲಿನ ನಡುವೆ ಬೆಂಗಳೂರು ಸೇರಿ ಕರ್ನಾಟಕದ ಈ ಜಿಲ್ಲೆಗಳಲ್ಲಿ ನಾಲ್ಕು ದಿನ ಮಳೆ: ಐಎಂಡಿ ರಿಪೋರ್ಟ್ -
ವಿಶ್ವಕಪ್ ಕಿರೀಟದ ಹಿಂದೆ ದೈವಬಲ: ಕರಾವಳಿಯ ಅಳಿಯ ಸೂರ್ಯಕುಮಾರ್ ಯಾದವ್ ನಡೆಗೆ ಮೆಚ್ಚುಗೆಗಳ ಸುರಿಮಳೆ -
New Airport: 3 ಜಿಲ್ಲೆ ಜನರ ಅನುಕೂಲಕ್ಕಾಗಿ ಸರ್ಕಾರದ ಮಾಸ್ಟರ್ ಪ್ಲ್ಯಾನ್: ಬಳ್ಳಾರಿ ಬಳಿ ಹೊಸ ಏರ್ಪೋರ್ಟ್ -
KSRTC: ಸಾರಿಗೆ ಲೋಕಕ್ಕೆ 'ಪಲ್ಲಕ್ಕಿ' ಮೆರುಗು: ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ 115 ಹೊಸ ಬಸ್ಗಳ ಲೋಕಾರ್ಪಣೆ -
ಬೆಂಗಳೂರಲ್ಲಿ ಗ್ಯಾಸ್ ಏಜೆನ್ಸಿಗಳ ಭರ್ಜರಿ ದಂಧೆ: ಸಿಲಿಂಡರ್ ಸಿಗದೇ ಗ್ರಾಹಕರು ಕಂಗಾಲು; ಕಾಳಸಂತೆಯಲ್ಲಿ ₹3,000ಕ್ಕೆ ಮಾರಾಟ -
LPG Gas: ಎಲ್ಪಿಜಿ ನಿಯಮಗಳಲ್ಲಿ ಭಾರೀ ಬದಲಾವಣೆ; ಗ್ರಾಹಕರು ದೂರು ನೀಡಲು ಸಹಾಯವಾಣಿ ಸಂಖ್ಯೆಗಳ ಬಿಡುಗಡೆ -
Gold Rate March 13: ಸತತ 3ನೇ ದಿನವೂ ಚಿನ್ನ - ಬೆಳ್ಳಿ ಬೆಲೆ ಭರ್ಜರಿ ಕುಸಿತ, ಎಷ್ಟಾಗಿದೆ ಇಂದಿನ ಬಂಗಾರದ ಬೆಲೆ -
Resort: ಕರ್ನಾಟಕದಲ್ಲಿ ಶುರುವಾಯ್ತು ರೆಸಾರ್ಟ್ ರಾಜಕೀಯ: ‘ಅವರು ನಮ್ಮ ಅತಿಥಿಗಳು’ ಎಂದ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ -
Horoscope March 13: ಈ ರಾಶಿಯವರ ಬದುಕಲ್ಲಿ ಸಕಾರಾತ್ಮಕ ಬೆಳವಣಿಗೆ, ಅಧಿಕ ಲಾಭ; ದಿನ ಭವಿಷ್ಯ












Click it and Unblock the Notifications