ಬೆಂಗಳೂರಿನಲ್ಲಿ ಶೀಘ್ರ ಹಜ್ ಭವನ: ವಕ್ಫ್ ಸಚಿವ
ಬೆಂಗಳೂರು,
ಏ.24: ಥಣಿಸಂದ್ರದಲ್ಲಿ ಹಜ್ ಭವನ ನಿರ್ಮಿಸಲಾಗುತ್ತದೆ ಎಂದು ಹಜ್, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಮುಮ್ತಾಜ್ ಅಲಿ ಖಾನ್ ತಿಳಿಸಿದ್ದಾರೆ. ಹಜ್ ಭವನದ ನಿರ್ಮಾಣಕ್ಕಾಗಿ ಬೆಂಗಳೂರಿನ ಥಣಿಸಂದ್ರದಲ್ಲಿ ರು.4 ಕೋಟಿ ವೆಚ್ಚದ ಭೂಮಿ ಖರೀದಿಸಲಾಗಿದೆ ಎಂದು ಅವರು ವಿವರ ನೀಡಿದರು. id="toptextpromo">ಸುದ್ದಿಗಾರೊಂದಿಗೆ
ಮಾತನಾಡುತ್ತಿದ್ದ ಸಚಿವರು, ದರ್ಗಾಗೆ ಸೇರಿದ ಭೂಮಿಯನ್ನು ಖರೀದಿಸಲಾಗುತ್ತಿದ್ದು ಶೀಘ್ರದಲ್ಲೇ ಹಜ್ ಭವನ ನಿರ್ಮಾಣಕ್ಕೆ ಶಂಕುಸ್ಥಾಪನೆ ಮಾಡಲಾಗುತ್ತದೆ. ಹಜ್ ಯಾತ್ರೆಗೆ ಹೊರಡುವ ಮುಸ್ಲಿಂ ಬಾಂಧವರ ಅಗತ್ಯಗಳನ್ನು ಈ ಭವನ ಪೂರೈಸಲಿದೆ ಎಂದರು. id='are-slot-1' class='oiad oi-axt oiadv'> id='top-searched-articles'>ರಾಜ್ಯದಲ್ಲಿ
ಗೋಹತ್ಯೆ ನಿಷೇಧದಿಂದ ಉಂಟಾಗಿರುವ ನಿರುದ್ಯೋಗ ಸಮಸ್ಯೆಗೆ ಪರ್ಯಾಯ ಉದ್ಯೋಗಗಳನ್ನು ಹುಡುಕಲಾಗುತ್ತಿದೆ. ಗೋಹತ್ಯೆ ನಿಷೇಧದಿಂದ ನಿರುದ್ಯೋಗಿಗಳಾಗಿರುವವರಿಗೆ ಪರ್ಯಾಯ ವ್ಯವಸ್ಥೆ ಮಾಡಲಾಗುತ್ತದೆ ಎಂದು ಸಚಿವರು ತಿಳಿಸಿದರು.











Click it and Unblock the Notifications