ಪದವಿಧರರಿಗಾಗಿ ಅತಿದೊಡ್ಡ ಉದ್ಯೋಗ ಮೇಳ

ಏಪ್ರಿಲ್ 19ರಿಂದ ಆರಂಭವಾಗಿರುವ ನೌಕರಿ ಮೇಳ ಏಪ್ರಿಲ್ 24ರವರೆಗೆ ಇರಲಿದ್ದು, ಉದ್ಯೋಗ ಅರಸುತ್ತಿರುವ ಪದವಿಧರರು ಭಾಗವಹಿಸಬಹುದಾಗಿದೆ. ಇಂಜಿನಿಯರುಗಳಿಗೆ ಮಾತ್ರವಲ್ಲ ಪದವಿಧರರಿಗೆ ಕೂಡ ಅನೇಕ ಉದ್ಯೋಗಾವಕಾಶಗಳು ಹೇರಳವಾಗಿವೆ ಎಂಬುದಕ್ಕೆ ಈ ಉದ್ಯೋಗ ಮೇಳವೇ ಸಾಕ್ಷಿ.
ಈ ಕ್ಯಾಂಪಸ್ ಸಂದರ್ಶನದಲ್ಲಿ ಬಿಎ, ಬಿಎಸ್ ಸಿ, ಬಿಕಾಂ, ಬಿಬಿಎಂ, ಬಿಎಚ್ಎಂ ಮತ್ತಿತರ ತಾಂತ್ರಿಕ ಮತ್ತು ತಾಂತ್ರಿಕೇತರ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಟೆಲಿಕಾಂ, ಐಟಿ, ಬಿಪಿಓ, ಬ್ಯಾಂಕಿಂಗ್, ಹಣಕಾಸು, ಫಾರ್ಮಾ ಮತ್ತು ರಿಟೇಲ್ ಕ್ಷೇತ್ರಗಳಲ್ಲಿ ನಿರತವಾಗಿರುವ ಕಂಪನಿಗಳು ಉದ್ಯೋಗಿಗಳ ಬೇಟೆಗೆ ನಿರತವಾಗಿವೆ.
ಇನ್ಫೋಸಿಸ್, ಆರೇಕಲ್, ಯುರೇಕಾ ಫೋರ್ಬ್ಸ್, ಕಾರ್ವಿ ಸ್ಟಾಕ್ ಬ್ರೋಕರಿಂಗ್, ಪ್ರೆಸ್ಟೀಜ್ ಕನ್ ಸ್ಟ್ರಕ್ಶನ್, ಕಾಫಿ ಡೇ, ಬಿಗ್ ಎಫ್ಎಂ, ರಿಲಾಯನ್ಸ್ ಕಮ್ಯುನಿಕೇಶನ್ಸ್, ರಿಲಾಯನ್ಸ್ ಇನಫ್ರಾಸ್ಟ್ರಕ್ಚರ್ಸ್ ನಂಥ ಕಂಪನಿಗಳು ಪದವಿಧರರ ನೇಮಕಕ್ಕೆ ಮುಂದಾಗಿವೆ. ಅರ್ಜಿ ಗುಜರಾಯಿಸಿದ ಪ್ರತಿ ಅಭ್ಯರ್ಥಿಗೂ ಸಂದರ್ಶನದ ಅವಕಾಶ ದೊರೆಯಲಿದೆ. ಉದ್ಯೋಗಾರ್ಥಿಗಳು ನೂರು ರು. ಪಾವತಿಸಿ ನೊಂದಾಯಿಸಿಕೊಳ್ಳಬಹುದು. ಆಯ್ಕೆಯಾದ ಅರ್ಹರಿಗೆ ಏಳು ಸಾವಿರದಿಂದ ಇಪ್ಪತ್ತೈದು ಸಾವಿರದವರೆಗೆ ಸಂಬಳ ದೊರೆಯುವ ಅವಕಾಶವಿದೆ.
ಕ್ಯಾಂಪಸ್ ಸಂದರ್ಶನ ನಡೆಯುವ ಸ್ಥಳ (ಬೆಂಗಳೂರಿನಲ್ಲಿ ಮಾತ್ರ)
* ಟಿ ಜಾನ್ ಆಚಾರ್ಯ ಬಿ ಸ್ಕೂಲ್
* ಮಹಾರಾಣಿ ಲಕ್ಷ್ಮಿ ಅಮ್ಮಣ್ಮಿ ಮಹಿಳಾ ಕಾಲೇಜು
* ಎಸ್ಆರ್ಎನ್
* ಆದರ್ಶ ಪ್ರಸಿಡೆನ್ಸಿ ಕಾಲೇಜು
* ಎಐಎಮ್ಎಸ್ ಕಾಲೇಜು
-
Rameshwaram Cafe: ರಾಮೇಶ್ವರಂ ಕೆಫೆ ಪಾರ್ಸಲ್ - ಬ್ಯಾಗ್ ತುಂಬಾ ದುಬಾರಿ ಕಣ್ರೀ: ಸೋಷಿಯಲ್ ಮೀಡಿಯಾ ವೈರಲ್ ಪೋಸ್ಟ್ -
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
Bengaluru Property Tax: ಆಸ್ತಿ ತೆರಿಗೆ ಸ್ವೀಕಾರಕ್ಕಾಗಿ ರಾತ್ರಿ 10ಗಂಟೆವರೆಗೆ ಪಾಲಿಕೆ ಕಚೇರಿ ಓಪನ್ -
Arecanut Price: ದಾವಣಗೆರೆ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಧಾರಣೆ ಭರ್ಜರಿ ಏರಿಕೆ: ಇಲ್ಲಿದೆ ಮಾರ್ಚ್ 30ರ ದರಪಟ್ಟಿ -
Hardik Pandya: ಕೇವಲ 35 ದಿನಗಳಲ್ಲಿ ಕೋಟಿ.. ಕೋಟಿ ಖರ್ಚು ಮಾಡಿದ ಹಾರ್ದಿಕ್ ಪಾಂಡ್ಯ; ಇಲ್ಲಿದೆ ಪಟ್ಟಿ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ












Click it and Unblock the Notifications