ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭ್ರಷ್ಟಾಚಾರ ನಿವಾರಣೆಗೆ ಮಾಹಿತಿ ಹಕ್ಕು ಅಸ್ತ್ರ

By Mahesh
|
Google Oneindia Kannada News

Judge NB Kulakarni , NSS Camp, Savanur
ಸವಣೂರ,ಏ.12 : ಮಾಹಿತಿ ಹಕ್ಕು ನಿಯಮ ಆಡಳಿತ ವ್ಯವಸ್ಥೆಯಲ್ಲಿ ಹಲವಾರು ಬದಲಾವಣೆಗಳಿಗೆ ಕಾರಣವಾಗಿದ್ದು, ಸರಕಾರದ ಯೋಜನೆಗಳು ಹಾಗೂ ಕಾರ್ಯಕ್ರಮಗಳಲ್ಲಿ ಪಾರದರ್ಶಕತೆ ಮೂಡಿಸಿ, ಭ್ರಷ್ಟಾಚಾರವನ್ನೂ ನಿಯಂತ್ರಿಸಲು ಸಹಕಾರಿಯಾಗಿದೆ ಎಂದು ನಗರದ ನ್ಯಾಯಾಧೀಶರಾದ ಎಮ್.ಬಿ ಕುಲಕರ್ಣಿ ಅಭಿಪ್ರಾಯ ವ್ಯಕ್ತಪಡಿಸಿದರು.

ಸವಣೂರಿನ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವತಿಯಿಂದ ದತ್ತುಗ್ರಾಮ ಕಾರಡಗಿಯಲ್ಲಿ ಏರ್ಪಡಿಸಲಾಗಿದ್ದ ಎನ್.ಎಸ್.ಎಸ್ ಶಿಬಿರದಲ್ಲಿ ಕಾನೂನು ಮಾಹಿತಿ ನೀಡಿದ ಅವರು, ದೇಶದ ಸಾರ್ವಭೌಮತೆಗೆ ಧಕ್ಕೆ ತರುವ ವಿಚಾರಗಳನ್ನು ಹೊರತು ಪಡಿಸಿ, ಉಳಿದೆಲ್ಲ ವಿಷಯಗಳ ಬಗ್ಗೆ ಅಧಿಕೃತ ಮಾಹಿತಿಯನ್ನು ಪಡೆಯುವ ಹಕ್ಕು ಈ ಅಧಿನಿಯಮದ ಅಡಿ ಇದೆ ಎಂದರು.

ಕಾನೂನು ಮಾಹಿತಿ ಶಿಬಿರದಲ್ಲಿ ಪಾಲ್ಗೊಂಡಿದ್ದ ನ್ಯಾಯವಾದಿ ವಿ.ಬಿ ತುರಕಾಣಿ, ಭಾರತೀಯ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಪಡಿಸಲು ಈ ಅಧಿನಿಯಮ ಸಹಾಯಕಾರಿ ಎಂದರು. ಅಂಗದಾನದ ಬಗ್ಗೆ ಇರುವ ಕಾನೂನಿನ ಅಭಿಪ್ರಾಯಗಳನ್ನು ವಿವರಿಸಿದರು. ಉಪನ್ಯಾಸಕರಾದ ಗಂಗಯ್ಯ, ಡಾ. ಸಿ.ಬಿ ನಂದನ್, ಕಾರ್ಯಕ್ರಮಾಧಿಕಾರಿ ಡಾ. ಎಮ್.ಸಿ ರಾಠೋಡ್, ಆರ್.ಎಸ್ ನಾಯಕ್ ಉಪಸ್ಥಿತರಿದ್ದರು. ಶಿಬಿರಾರ್ಥಿಗಳು ನಿರ್ವಹಿಸಿದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X