ಭ್ರಷ್ಟಾಚಾರ ನಿವಾರಣೆಗೆ ಮಾಹಿತಿ ಹಕ್ಕು ಅಸ್ತ್ರ

ಸವಣೂರಿನ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವತಿಯಿಂದ ದತ್ತುಗ್ರಾಮ ಕಾರಡಗಿಯಲ್ಲಿ ಏರ್ಪಡಿಸಲಾಗಿದ್ದ ಎನ್.ಎಸ್.ಎಸ್ ಶಿಬಿರದಲ್ಲಿ ಕಾನೂನು ಮಾಹಿತಿ ನೀಡಿದ ಅವರು, ದೇಶದ ಸಾರ್ವಭೌಮತೆಗೆ ಧಕ್ಕೆ ತರುವ ವಿಚಾರಗಳನ್ನು ಹೊರತು ಪಡಿಸಿ, ಉಳಿದೆಲ್ಲ ವಿಷಯಗಳ ಬಗ್ಗೆ ಅಧಿಕೃತ ಮಾಹಿತಿಯನ್ನು ಪಡೆಯುವ ಹಕ್ಕು ಈ ಅಧಿನಿಯಮದ ಅಡಿ ಇದೆ ಎಂದರು.
ಕಾನೂನು ಮಾಹಿತಿ ಶಿಬಿರದಲ್ಲಿ ಪಾಲ್ಗೊಂಡಿದ್ದ ನ್ಯಾಯವಾದಿ ವಿ.ಬಿ ತುರಕಾಣಿ, ಭಾರತೀಯ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಪಡಿಸಲು ಈ ಅಧಿನಿಯಮ ಸಹಾಯಕಾರಿ ಎಂದರು. ಅಂಗದಾನದ ಬಗ್ಗೆ ಇರುವ ಕಾನೂನಿನ ಅಭಿಪ್ರಾಯಗಳನ್ನು ವಿವರಿಸಿದರು. ಉಪನ್ಯಾಸಕರಾದ ಗಂಗಯ್ಯ, ಡಾ. ಸಿ.ಬಿ ನಂದನ್, ಕಾರ್ಯಕ್ರಮಾಧಿಕಾರಿ ಡಾ. ಎಮ್.ಸಿ ರಾಠೋಡ್, ಆರ್.ಎಸ್ ನಾಯಕ್ ಉಪಸ್ಥಿತರಿದ್ದರು. ಶಿಬಿರಾರ್ಥಿಗಳು ನಿರ್ವಹಿಸಿದರು.











Click it and Unblock the Notifications