ದೆಹಲಿ ಕನ್ನಡಶಾಲೆ ಚುನಾವಣಾ ಫಲಿತಾಂಶ

ಗೌರವ ಉಪಾಧ್ಯಕ್ಷರಾಗಿ ಡಾ. ಅಹಲ್ಯಾ ಚಿಂತಾಮಣಿ (191 ಮತಗಳು) ಮತ್ತು ಕೆ. ಈಶ್ವರ ಭಟ್ (193 ಮತಗಳು) ಅವರು ಆಯ್ಕೆಯಾದರೆ, ಗೌರವ ಕಾರ್ಯದರ್ಶಿಯಾಗಿ ಅಂಜನಿಗೌಡ (221 ಮತಗಳು) ಮತ್ತು ಖಜಾಂಚಿಯಾಗಿ ಬಸವರಾಜ್ ಮೇಟಿ (201 ಮತಗಳು) ಅವರು ಆಯ್ಕೆಯಾದರು. ಅವರುಗಳು ಕ್ರಮವಾಗಿ ಚಿದಾನಂದಮೂರ್ತಿ, ಲಕ್ಷ್ಮಣ ಮಲ್ಯ, ಎಸ್.ಎಸ್. ಕುಲಕರ್ಣಿ ಮತ್ತು ಕೆ.ಆರ್. ರಾಮಮೂರ್ತಿ ಅವರನ್ನು ಸೋಲಿಸಿದರು.
ಅತ್ಯಂತ ತುರುಸಿನ ಸ್ಪರ್ಧೆಯಲ್ಲಿ ನೇರ ಹಣಾಹಣಿ ನಡೆದು ಗೆಲುವಿನ ಅಂತರ ಕಡಿಮೆಯಾಯಿತು. ಜವಳಿ ಅವರ ವಿರುದ್ಧ ಲಿಂಗರಾಜು ಅವರು ಕೇವಲ ನಾಲ್ಕು ಮತಗಳಿಂದ ಜಯಗಳಿಸಿದರೆ, ಡಾ. ಅಹಲ್ಯಾ ಅವರು ಚಿದಾನಂದಮೂರ್ತಿ ಅವರ ವಿರುದ್ಧ 9 ಮತಗಳ ಅಂತರದಿಂದ ಗೆದ್ದರು. ಈಶ್ವರ ಭಟ್ಟರು ಲಕ್ಷ್ಮಣ ಮಲ್ಯ ಅವರ ವಿರುದ್ಧ 32 ಮತಗಳ ಅಂತರದಿಂದ ಗೆದ್ದರೆ, ಕುಲಕರ್ಣಿ ಅವರ ವಿರುದ್ಧ ಅತಿ ಹೆಚ್ಚು ಅಂದರೆ 43 ಮತಗಳ ಅಂತರದಿಂದ ಅಂಜನಿಗೌಡ ಅವರು ವಿಜಯಿಯಾದರು. ರಾಮಮೂರ್ತಿ ವಿರುದ್ಧ ಮೇಟಿ ಅವರ ಗೆಲುವಿನ ಅಂತರ 11 ಮತಗಳು.
ಒಟ್ಟು 411 ಮತಗಳು ಚಲಾವಣೆಯಾಗಿದ್ದವು. ಅದರಲ್ಲಿ ಐದಕ್ಕೂ ಅಧಿಕ ಕುಲಗೆಟ್ಟ ಮತಗಳಿದ್ದವು ಎಂದು ಚುನಾವಣಾಧಿಕಾರಿಗಳು ತಿಳಿಸಿದರು. ವಿಜೇತ ಸದಸ್ಯರು: ಒಟ್ಟು 10 ಸದಸ್ಯರ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಈ ಕೆಳಕಂಡವರು ವಿಜೇತರಾಗಿದ್ದಾರೆ. ಡಾ. ಪುರುಷೋತ್ತಮ ಬಿಳಿಮಲೆ, ಸಿ.ಎಂ. ನಾಗರಾಜ್, ಬಿ.ಕೆ. ಬಸವರಾಜು, ಎನ್.ಆರ್. ಶ್ರೀನಾಥ್, ಕೆ. ರಾಧಾಕೃಷ್ಣ, ಚೆನ್ನು ಎಸ್. ಮಠದ, ಜಿ.ಎಂ. ಭಾರತಿ, ಸಿ.ಎಂ. ಮಂಜುನಾಥಶೆಟ್ಟಿ, ಶಕುಂತಲಾ ನಾಯಕ್, ಡಾ. ಎಂ.ಎಸ್ ಶಶಿಕುಮಾರ್.
ಈ ಸಮಿತಿಯು ಎರಡು ವರ್ಷಗಳ ಕಾಲ ದೆಹಲಿ ಕನ್ನಡ ಎಜುಕೇಷನ್ ಸೊಸೈಟಿಯ ಆಡಳಿತ ಮಂಡಳಿಯನ್ನು ನಡೆಸಿಕೊಂಡು ಹೋಗಲು ಅರ್ಹತೆ ಪಡೆದುಕೊಂಡಿತು. ಇದು ಕನ್ನಡ ಶಾಲೆಯ ಸುವರ್ಣ ಮಹೋತ್ಸವ ವರ್ಷವೂ ಆಗಿರುವುದರಿಂದ ಅತ್ಯಂತ ಮಹತ್ವಾಕಾಂಕ್ಷೆಯ ಯೋಜನೆಗಳನ್ನು ಹಮ್ಮಿಕೊಳ್ಳಲು ಹೊಸ ತಂಡ ಉತ್ಸುಕವಾಗಿದೆ.
-
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Gold Rate Today: ಸತತ ನಾಲ್ಕನೇ ದಿನವು ಚಿನ್ನ-ಬೆಳ್ಳಿ ದರ ಭರ್ಜರಿ ಇಳಿಕೆ, ಇಂದಿನ ದರವೆಷ್ಟು? -
ಆರ್ಸಿಬಿಗೆ ಚಾರ್ಟರ್ಡ್ ಫ್ಲೈಟ್ ಸೌಲಭ್ಯದ ಬೇಡಿಕೆ ಆರೋಪ: ಒಂದೇ ಎಮೋಜಿ ಹಾಕಿ ಕಿಂಗ್ ಕೊಹ್ಲಿ ಸಷ್ಟನೆ -
Devanahalli accident: ದೇವನಹಳ್ಳಿ ಬಳಿ ಭೀಕರ ಅಪಘಾತ: ಕಾಶಿಯಾತ್ರೆಗೆ ಹೊರಟಿದ್ದ ತಿಪಟೂರಿನ ಮೂವರು ಮಹಿಳೆಯರು ಸಾವು -
March 22 Horoscope: ಇಂದು ನಿಮ್ಮ ಧನ, ಆರೋಗ್ಯ, ಉದ್ಯೋಗದ ಭವಿಷ್ಯ ಹೇಗಿದೆ? -
ಅಮೆರಿಕ ಪಾಕಿಸ್ತಾನದ ಮೇಲೆ ದಾಳಿ ಮಾಡಿದರೆ ನಾವು ಮುಂಬೈ, ದೆಹಲಿ ಮೇಲೆ ಬಾಂಬ್ ಹಾಕ್ತೀವಿ: ಪಾಕ್ ಮಾಜಿ ರಾಯಭಾರಿ ವಿವಾದಾತ್ಮಕ ಹೇಳಿಕೆ -
ಮಾರ್ಚ್ 22ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
IPL 2026 Ticket: ಐಪಿಎಲ್ ಟಿಕೆಟ್ ಖರೀದಿ ಕುರಿತು ಬೆಂಗಳೂರು ಪೊಲೀಸರಿಂದ ಕ್ರಿಕೆಟ್ ಪ್ರೇಮಿಗಳಿಗೆ ಮಹತ್ವದ ಸಲಹೆ -
By-Election: ದಾವಣಗೆರೆ ದಕ್ಷಿಣದಲ್ಲಿ ಮೊದಲ ಬಾರಿ ಬಿಜೆಪಿ ಗೆಲುವು ನಿಶ್ಚಿತ; ಬಸವರಾಜ ಬೊಮ್ಮಾಯಿ ವಿಶ್ವಾಸ -
ಆರ್ಸಿಬಿ ವಿರುದ್ಧದ ಪಂದ್ಯಕ್ಕೂ ಮುನ್ನ ಕೇವಲ 42 ಎಸೆತಗಳಲ್ಲಿ 94 ರನ್ ಸಿಡಿಸಿದ ಅಭಿಷೇಕ್ ಶರ್ಮಾ: ಭಾರೀ ವೈರಲ್












Click it and Unblock the Notifications