ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಮಾಜಿ ಪ್ರೇಯಸಿಗೆ ಬೆಂಕಿ ಇಟ್ಟ ಎಂಎಲ್ಎ
ಸೋಮವಾರ ರಾತ್ರಿ ಶಾಸಕನ ಮನೆಯಲ್ಲಿ ಆತನ ಮಾಜಿ ಪ್ರೇಯಸಿ ಸಾವಿತ್ರಿದೇವಿ ಊಟ ಬಡಿಸುತ್ತಿದ್ದಳು. ತಮ್ಮ ನಡುವೆ ಇದ್ದ ಸಂಬಂಧದಲ್ಲಿ ಬಿರುಕು ಮೂಡಿದ ಶಂಕೆ ವ್ಯಕ್ತಪಡಿಸಿದ ಸಾವಿತ್ರಿ ದೇವಿ ಮೇಲೆ ಕೋಪಗೊಂಡ ಶಾಸಕ, ತಟ್ಟೆಯನ್ನು ಎಸೆದು ಆಕೆಯ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ, ಪರಾರಿಯಾಗಿದ್ದಾನೆ ಎನ್ನಲಾಗಿದೆ. ಈ ಬಗ್ಗೆ ಸಾವಿತ್ರಿ ದೇವಿಯ ಮಗ ಮಹೇಶ್ ಕುಮಾರ್ ಪೊಲೀಸರಿಗೆ ದೂರು ನೀಡಿದ್ದಾನೆ.
ಈ ದುರ್ಘಟನೆಯಿಂದ ತೀವ್ರ ಸುಟ್ಟ ಗಾಯಕ್ಕೊಳಗಾದ ಸಾವಿತ್ರಿ ದೇವಿಯನ್ನು ಗೋರಖಪುರದ ಬಾಬಾ ರಾಘವ ದಾಸ್ ವೈದ್ಯಕೀಯ ಕಾಲೇಜಿಗೆ ಸೇರಿಸಲಾಗಿದ್ದು, ಆಕೆ ಜೀವನ್ಮರಣ ಹೋರಾಟ ನಡೆಸುತ್ತಿದ್ದಾಳೆ. ಶಾಸಕ ಶ್ರೀಪಾಠ್ ನೇಪಾಳಕ್ಕೆ ಪರಾರಿಯಾಗಿದ್ದಾನೆಂದು ಶಂಕಿಸಲಾಗಿದೆ. ಈ ಬಗ್ಗೆ ದೂರು ಸ್ವೀಕರಿಸಲಾಗಿದ್ದು, ತನಿಖೆ ನಡೆಸುತ್ತಿದ್ದೇವೆ ಎಂದು ಗೋರಖಪುರದ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದರು.
Comments
Story first published: Thursday, March 18, 2010, 11:21 [IST]