2010ರ ಕೇಂದ್ರ ಬಜೆಟ್ ನ ಮುಖ್ಯಾಂಶಗಳು

ರೈಲ್ವೇ ಬಜೆಟ್: ರಾಜ್ಯದ ಮೇಲೆ ಮಮತಾ ಕೃಪಾಕಟಾಕ್ಷ
ವಿಡಿಯೋ: ಕೇಂದ್ರ ಬಜೆಟ್ 2010-11ನಿರೀಕ್ಷೆಗಳು
ಬಜೆಟ್ ಮುಖ್ಯಾಂಶಗಳು:
*ಪೆಟ್ರೋಲ್, ಡಿಸೇಲ್ ಬೆಲೆಗಳು ಹೆಚ್ಚಳ.
*ಆದಾಯ ತೆರಿಗೆ ರಿಟರ್ಸ್ ಸಲ್ಲಿಸಲು ಸರಳ್ 2 ಅರ್ಜಿ ನಮೂನೆ.
*ಆದಾಯ ತೆರಿಗೆ ವಿನಾಯಿತಿ ಮಿತಿ ಬದಲಿಲ್ಲ.
*1.6 ಲಕ್ಷ ರುಪಾಯಿವರೆಗೆ ತೆರಿಗೆ ಇಲ್ಲ. ತೆರಿಗೆ ಸ್ಲಾಬ್ ವಿಸ್ತರಣೆ.
*1.6 ಲಕ್ಷ ದಿಂದ 5 ಲಕ್ಷ ರುಪಾಯಿವರೆಗೆ ಶೇ. 10 ತೆರಿಗೆ.
*5 ಲಕ್ಷ ದಿಂದ 8 ಲಕ್ಷ ರುಪಾಯಿವರೆಗೆ ಶೇ. 20 ತೆರಿಗೆ.
*8 ಲಕ್ಷಕ್ಕಿಂತ ಅಧಿಕ ಆದಾಯಕ್ಕೆ ಶೇ. 30 ತೆರಿಗೆ.
*7.46 ಲಕ್ಷ ಕೋಟಿ ತೆರಿಗೆ ಸಂಗ್ರಹ ಗುರಿ.
*2010-1 ರಲ್ಲಿ ವಿತ್ತೀಯ ಕೊರತೆ 5.5 ನಿರೀಕ್ಷೆ.
*ನಕ್ಸಲ್ ಪೀಡಿತಜಿಲ್ಲೆಗಳ ಅಭಿವೃದ್ದಿಗೆ ಕ್ರಮ.
*ಈ ವರ್ಷಾಂತ್ಯಕ್ಕೆ ಗುರುತಿನ ಚೀಟಿ ವಿತರಣೆ ಆರಂಭ
*ಕಂಪನಿಗಳ ಮೇಲೆ ವಿಧಿಸುವ ಸರ್ಚಾರ್ಜ್ ಶೇ. 10 ರಿಂದ ಶೇ. 7ಕ್ಕೆ ಇಳಿಕೆ.
*ಕಂಪನಿಗಳ ಮೇಲೆ ವಿಧಿಸುವ ತೆರಿಗೆ ಶೇ. 15 ರಿಂದ 18ಕ್ಕೆ ಏರಿಕೆ.
*ರಕ್ಷಣಾ ಇಲಾಖೆಗೆ 1,47,000ಕೋಟಿ ರುಪಾಯಿ.
*ಮಹಿಳಾ ಕೃಷಿನಿಧಿ ಯೋಜನೆ 100 ಕೋಟಿ ರುಪಾಯಿ.
*ರಾಷ್ಟ್ರೀಯ ನ್ಯಾಯದಾನ ಮಿಷನ್ ಸ್ಥಾಪನೆ.
*ಅಬಕಾರಿ ಸುಂಕ ಶೇ. 8ರಿಂದ 10 ಕ್ಕೆ ಏರಿಕೆ.
*ಸಿಗರೇಟು ಮತ್ತಷ್ಟುತುಟ್ಟಿ.
*ತೈಲಕ್ಕೆ ಅಬಕಾರಿ ಸುಂಕ ಶೇ.1 ಹೆಚ್ಚಳ.
*ದೊಡ್ಡ ಕಾರು, ಸಿಮೆಂಟ್ ಮತ್ತಷ್ಟು ದುಬಾರಿ.
*2000 ಜನಸಂಖ್ಯೆ ಇರುವ ಎಲ್ಲ ಹಳ್ಳಿಗಳಿಗೂ ಬ್ಯಾಂಕ್ ಸ್ಥಾಪನೆ.
*ಅಸಂಘಟಿತ ವಲಯ ಜನರ ಸುರಕ್ಷಿತೆಗೆ ಸಂಧ್ಯಾಸುರಕ್ಷಾ ಯೋಜನೆಗೆ 1000 ಕೋಟಿ ರುಪಾಯಿ.
*ಆರೋಗ್ಯ ಇಲಾಖೆಗೆ 22, 300 ಕೋಟಿ ರುಪಾಯಿ.
*10 ಲಕ್ಷ ರುಪಾಯಿ ಗೃಹ ಸಾಲಕ್ಕೆ ಶೇ. 1 ಬಡ್ಡಿ ಸಬ್ಸಿಡಿ.
*ನೂತನ ಪಿಂಚಣಿ ಸೇರುವ ಪ್ರತಿ ಕಾರ್ಮಿಕನಿಗೆ ಖಾತೆ 1000 ಸೇರ್ಪಡೆ.
*ಇಂದಿರಾ ಆವಾಸ್ ಯೋಜನೆಗೆ 1000 ಕೋಟಿ ರುಪಾಯಿ.
*ಅಸಂಘಟಿತ ಕಾರ್ಮಿಕ ಪಿಂಚಣಿ ಮೂರು ವರ್ಷಕ್ಕೆ ವಿಸ್ತರಣೆ.
*ರಾಜೀವ ಆವಾಸ್ ಯೋಜನೆಗೆ 1,270 ಕೋಟಿ ರುಪಾಯಿ.
*ಜವಳಿ ವಲಯದಲ್ಲಿ 30 ಜನರಿಗೆ ಕೌಶಾಲಾಭಿವೃದ್ದಿ ತರಬೇತಿ.
*ರಾಷ್ಟ್ರೀಯ ಗುರುತಿನ ಚೀಟಿ ಯೋಜನೆಗೆ1900 ಕೋಟಿ ರುಪಾಯಿ.
*2010ರಲ್ಲಿ 2000 ಸಿಆರ್ ಪಿಎಫ್ ಯೋಧರ ನೇಮಕ.
*ಹೆಚ್ಚುತ್ತಿರುವ ಆಹಾರ ಧಾನ್ಯ ವಸ್ತುಗಳ ದರ ಏರಿಕೆಗೆ ಕಡಿವಾಣ.
*2 ತಿಂಗಳೊಳಗೆ ಆಹಾರ ವಸ್ತುಗಳ ಬೆಲೆ ಏರಿಕೆಗೆ ಸಂಬಂಧಿಸಿದಂತೆ ಎಲ್ಲ ಮುಖ್ಯಮಂತ್ರಿಗಳೊಂದಿಗೆ ಸಭೆ.
*ಹೊಸ ಗೊಬ್ಬರ ನೀತಿ ಏಪ್ರಿಲ್ ನಿಂದ ಜಾರಿ.
*ರೈತರಿಗೆ ನೇರ ರಸಗೊಬ್ಬರ ಸಬ್ಸಿಡಿ ನೀತಿ.
*25 ಸಾವಿರ ಕೋಟಿ ಬಂಡವಾಳ ಹಿಂಪಡೆಯಲು ಕ್ರಮ.
*2011 ರ ಏಪ್ರಿಲ್ ನಿಂದ ನೇರ ತೆರಿಗೆ ಪಾವತಿ ನೀತಿ.
*ಈ ವರ್ಷದ ಏಪ್ರಿಲ್ ವೇಳೆಗೆ 20.9 ಶತಕೋಟಿ ಡಾಲರ್ ವಿದೇಶ ಬಂಡವಾಳ ಹರಿವು.
*ಪಡಿತರ ವ್ಯವಸ್ಥೆಗೆ ಸುಧಾರಣೆ.
*ತೆರಿಗೆ ಕಾನೂನುಗಳ ಸರಳೀಕರಕ್ಕೆ ಕ್ರಮ.
*ಖಾಸಗಿಕಂಪನಿಗಳಿಗೆ ಬ್ಯಾಂಕಿಂಗ್ ಲೈಸೆನ್ಸ್.
*ಆರ್ಥಿಕ ಕುಸಿತ ತಡೆಗೆ ರಾಷ್ಟ್ರೀಯ ಸಮಿತಿ ರಚನೆ.
*ವಿದೇಶಿ ಬಂಡವಾಳ ನೀತಿ ಸರಳೀಕರಣ.
*ಕನಿಷ್ಟ ತೆರಿಗೆ ಮಿತಿ ಏರಿಕೆಗೆ ಕ್ರಮ.
*ಪಾರೀಖ್ ಸಮಿತಿ ಶಿಫಾರಸ್ ಜಾರಿಗೆ ಪರಿಶೀಲನೆ.
*ರಫ್ತು ಉತ್ತೇಜಿಸಲು ವಿಶೇಷ ಆರ್ಥಿಕ ವಲಯಕ್ಕೆ ಮತ್ತಷ್ಟು ನೆರವು.
*ಪೆಟ್ರೋಲ್ ಬೆಲೆ ಏರಿಳಿತಕ್ಕೆ ಕ್ರಮ.
*ಪಡಿತರ ದಾಸ್ತಾನು ಸಂಗ್ರಹಕ್ಕೆ ಖಾಸಗಿ ಕಂಪನಿಗಳ ಸಹಭಾಗಿತ್ವ.
*ಈ ವರ್ಷ ರೈತರಿಗೆ 3.75 ಲಕ್ಷ ಕೋಟಿ ರುಪಾಯಿ ಸಾಲ ವಿತರಣೆ ಗುರಿ.
*ಕೃಷಿ ಸಾಲ ಮರುಪಾವತಿಗೆ ಅವಧಿ 6 ತಿಂಗಳ ವಿಸ್ತರಣೆ.
*ನೀರು ಪೂರೈಕೆ 300 ಕೋಟಿ ರುಪಾಯಿ.
*ರಾಷ್ಟ್ರೀಯ ವಿಕಾಸ ಯೋಜನೆಗೆ 300 ಕೋಟಿ ರುಪಾಯಿ.
*ಮೂಲಸೌಕರ್ಯ ಅಭಿವೃದ್ಧಿಗೆ 1.75 ಲಕ್ಷ ಕೋಟಿ ರುಪಾಯಿ ಮೀಸಲು.
*60ಸಾವಿರ ಗ್ರಾಮಗಳಿಗೆ ಕುಡಿಯುವ ನೀರು ಯೋಜನೆ.
*ರೈತರ ಸಬ್ಸಿಡಿ ನೆರವು ಶೇ. 1 ರಿಂದ 2ಕ್ಕೆ ಏರಿಕೆ.
*ದೇಶಾದ್ಯಂತ 5 ಮೆಗಾ ಫುಡ್ ಪಾರ್ಕ್ ಗಳ ಸ್ಥಾಪನೆ.
*ರಸ್ತೆಗಳ ಅಭಿವೃದ್ಧಿಗೆ 19, 894ಕೋಟಿ ರುಪಾಯಿಗಳು.
*ವಿದ್ಯುತ್ ವಲಯಕ್ಕೆ 5130 ಕೋಟಿ ಮೀಸಲು.
*ಭಾರತೀಯ ರೈಲ್ವೆಗೆ 1650 ಕೋಟಿ ನೆರವು.
*ಪ್ರತಿ ದಿನ 20ಕಿಮೀ ರಾಷ್ಟ್ರೀಯಹೆದ್ದಾರಿ ನಿರ್ಮಾಣದ ಗುರಿ.
*ಶುದ್ಧ ಇಂಧನ ಉತ್ಪಾದನೆಗೆ ಫಂಡ್ ಸ್ಥಾಪನೆ.
*2020 ರ ವೇಳೆಗೆ 20 ಸಾವಿರ ಮೆಗಾವ್ಯಾಟ್ ವಿದ್ಯುತ್ ಉತ್ಪಾದನಾ ಗುರಿ.
*ನಿರ್ಮಲಾ ಗಂಗಾ ಯೋಜನೆಗೆ 500 ಕೋಟಿ ರುಪಾಯಿ.
*ತಿರುಪೂರು ಜವಳಿ ವಲಯಕ್ಕೆ 1300 ಕೋಟಿ ರುಪಾಯಿ.
*ಉದ್ಯೋಗ ಖಾತ್ರಿ ಯೋಜನೆಗೆ 40 ಸಾವಿರ ಕೋಟಿ ರುಪಾಯಿ.
ಶಿ*ಕ್ಷಣಕ್ಕೆ 31,036 ಕೋಟಿ ರುಪಾಯಿ.
*ಗ್ರಾಮೀಣಾಭಿವೃದ್ದಿಗೆ 66,100 ಕೋಟಿ ರುಪಾಯಿ.
*ಸ್ವರ್ಣ ಜಯಂತಿ ರೋಜಗಾರ್ ಯೋಜನೆಗೆ 5300 ಕೋಟಿ ರುಪಾಯಿ.
*ಭಾರತ ನಿರ್ಮಾಣ ಯೋಜನೆಗೆ 48ಸಾವಿರ ಕೋಟಿ ರುಪಾಯಿ.
*ಗೋವಾ ಅರಣ್ಯ ಮತ್ತು ಬೀಚ್ ಗಳ ರಕ್ಷಣೆಗೆ 200ಕೋಟಿ ರುಪಾಯಿ.












Click it and Unblock the Notifications