ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ತಾಲಿಬಾನಿಗಳಿಂದ ಸಿಖ್ ರ ಶಿರಚ್ಛೇದ
ಪೇಷಾವರದ ಗುರುದ್ವಾರದ ಬಳಿ ಈ ಇಬ್ಬರು ಸಿಖ್ ರ ದೇಹ ಮತ್ತು ರುಂಡವನ್ನು ಎಸದು ಹೋಗಿದ್ದಾರೆ ಎಂದು ವರದಿಗಳು ತಿಳಿಸಿವೆ. ಜಸ್ಪಾಲ್ ಸಿಂಗ್ ಮತ್ತು ಮೋಹನ್ ಸಿಂಗ್ ಭೀಕರವಾಗಿ ಹತ್ಯೆಗೀಡಾದ ನತದೃಷ್ಟರು. ಪಾಕಿಸ್ತಾನದ ಮೂಲದ ಸಿಖ್ ರ ಮೇಲೆ ಈ ತಾಲಿಬಾನಿಗಳು ದೌರ್ಜನ್ಯ ನಡೆಸುತ್ತಿದ್ದು, ನಿತ್ಯ ಕಿರುಕುಳ ನೀಡುತ್ತಿರುವುದು ಗೊತ್ತಿರುವ ಸಂಗತಿ. ಇತ್ತೀಚಿನ ದಿನಗಳಲ್ಲಿ ತಾಲಿಬಾನಿ ಉಗ್ರರು ಸಿಖ್ ರನ್ನು ಅಪಹರಿಸಿ ಇಸ್ಲಾಂಗೆ ಮತಾಂತರ ಹೊಂದುವಂತೆ ಒತ್ತಾಯಿಸುವುದು, ಅದಕ್ಕೆ ಇವರು ಒಪ್ಪದಿದ್ದಲ್ಲಿ ಹತ್ಯೆ ಮಾಡುವುದು ನಡೆದುಕೊಂಡು ಬಂದಿದೆ.
ಇಸ್ಲಾಂ ಧರ್ಮಕ್ಕೆ ಮತಾಂತರಗೊಳ್ಳದ ಸಿಖ್ ರನ್ನು ಭೀಕರವಾಗಿ ಕೊಂದು ಹಾಕಿದ ಉಗ್ರರ ವರ್ತನೆಯನ್ನು ಭಾರತ ಸರಕಾರ ಹಾಗೂ ಬಿಜೆಪಿ ಖಂಡಿಸಿದೆ. ಈ ಕುರಿತು ಪಾಕ್ ಸರಕಾರದಿಂದ ಸ್ಪಷ್ಟನೆ ಪಡೆದುಕೊಳ್ಳಬೇಕು ಎಂದು ಬಿಜೆಪಿ ಒತ್ತಾಯಿಸಿದೆ.
Comments
Story first published: Monday, February 22, 2010, 17:31 [IST]