ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಧರ್ಮ ಯಾವತ್ತೂ ಕೆಡುಕನ್ನು ಬಯಸಿಲ್ಲ:ಯುಆರ್ಎ
ನಗರದ ಬಸವನಗುಡಿಯ ಅಂಕಿತ ಪ್ರಕಾಶನ ಹಮ್ಮಿಕೊಂಡಿದ್ದ ಎರಡು ಪುಸ್ತಕಗಳ ಬಿಡುಗಡೆ ಸಮಾರಂಭದಲ್ಲಿ ಮಾತನಾಡುತ್ತಾ, ತನಗೆ ಎಲ್ಲವೂ ತಿಳಿದಿರುತ್ತದೆ ಎನ್ನುವ ದುರಹಂಕಾರ ಧರ್ಮಕ್ಕಿರುತ್ತದೆ. ಅದೇ ದುರಹಂಕಾರ ಇಂದು ತಂತ್ರಜ್ಞಾನದಿಂದಾಗಿ ವಿಜ್ಞಾನಕ್ಕೆ ಬಂದಿದೆ. ವಿಜ್ಞಾನಿಗಳು ತಮ್ಮನ್ನು ಪರಿಪೂರ್ಣರೆಂದು ಭಾವಿಸಿದ್ದಾರೆ. ಇವರನ್ನು ಪ್ರಶ್ನಿಸಲೇ ಬೇಕಾಗಿದೆ. ಸೂಫಿ ಸಂತರು ಇಸ್ಲಾಂ ಧರ್ಮದ ರಾಜರನ್ನು ವಿರೋಧಿಸುತ್ತಲೇ ಬಂದರು. ಇವರ ಜೀವನ ಚರಿತ್ರೆ ನೋಡಿದಾಗ ಅಂತಃಕರಣದ ಅರಿವುಎಲ್ಲರಿಗೂ ಆಗುತ್ತದೆ ಎಂದು ಯುಆರ್ಎ ಹೇಳಿದರು.
ಬಿಟಿ ಬದನೆ ಕೂಡಾ ತಂತ್ರಜ್ಞಾನದ ಸಹಕಾರದಿಂದ ವಿಜ್ಞಾನ ಮಾಡಿದ ಸೃಷ್ಟಿ, ಇದರ ಪರಿಣಾಮ ಏನಾಗಲಿದೆ ಎಂದು ಎಲ್ಲರಿಗೂ ತಿಳಿದಿದೆ. ಪ್ರಶ್ನಾತೀತವಾದರೆ ಪ್ರತಿಯೊಂದು ಮಾರಕವಾಗಿ ಪರಿಣಮಿಸುತ್ತದೆ. ಸಾಹಿತ್ಯದ ವಿಷಯದಲ್ಲಿ ರಾಜಕೀಯ ಪ್ರವೇಶ ಮಾಡಿದ್ದಲ್ಲಿ ಸಾಹಿತ್ಯದ ಪ್ರಭಾವವನ್ನು ಹಾಳುಮಾಡುತ್ತದೆ ಎಂದು ಅನಂತ ಮೂರ್ತಿ ವಿಷಾದ ವ್ಯಕ್ತ ಪಡಿಸಿದ್ದಾರೆ.
Comments
Story first published: Monday, February 8, 2010, 10:17 [IST]