ಹಾಡು ಹುಟ್ಟಿದ ಸಮಯ ಲೋಕಾರ್ಪಣೆ
ಭಾವನೆಗೆ ಸ್ಪಂದಿಸುವ ಯಾವುದೇ ಹಾಡು ಬರೆದರೂ ಜನಪ್ರಿಯವಾಗುತ್ತದೆ. ಹಾಡಿನಲ್ಲಿ ನಗಿಸುವ ಅಥವಾ ಅಳಿಸುವ ಗುಣವಿರಬೇಕು. ಒಟ್ಟಾರೆ ಅದು ಭಾವನಾತ್ಮಕವಾಗಿರಬೇಕು ಎಂದು ಪುಸ್ತಕ ಬಿಡುಗಡೆ ಮಾಡಿದ ನಟ ರಮೇಶ್ ಹೇಳಿದರು. ಜನಪ್ರಿಯ ಹಾಡು ಬರೆಯುವುದು ಬಹಳ ಕಷ್ಟದ ಕೆಲಸ. ಏಕೆಂದರೆ ಅದೊಂದು ಮ್ಯಾಜಿಕ್ ಇದ್ದಂತೆ ಅಂತಹ ಹಾಡು ಹೇಗೆ ಹುಟ್ಟತ್ತದೆ ಎಂಬುದನ್ನು ಅರಿಯಲು ಮಣಿಕಾಂತ್ ಪುಸ್ತಕ ಓದಬೇಕು ಎಂದು ಹೇಳಿದರು.
ಮಣಿಕಾಂತ್ ಶ್ರವಣ ಸಮಸ್ಯೆ ಇದೆ. ಇಂಥವರು ಹಾಡಿ ಕೇಳಿ ಅದು ಹುಟ್ಟಿದ ಸಮಯವನ್ನು ತಿಳಿದು ಬರೆಯುವುದು ನೂನ್ಯತೆ ಮೀರಿ ನಿಲ್ಲುವ ಕಾರ್ಯ. ಹಾಡಿನ ಜಾಡು ಹಿಡಿದು ಕೃತಿ ತಂದಿದ್ದು, ಕನ್ನಡದಲ್ಲಿ ಇಂತಹ ಕೆಲಸ ಮೊದಲನೆಯದಾಗಿದೆ. ಅದು ಮಣಿಕಾಂತ್ ಅವರು ಮಾಡಿದ್ದು ಶ್ಲಾಘನೀಯ ಕೆಲಸ ಎಂದು ವಿಜಯ ಕರ್ನಾಟಕ ಸಂಪಾದಕ ವಿಶ್ವೇಶ್ವರ ಭಟ್ ಪ್ರಶಂಸಿಸಿದರು.
ಸಿನಿಮಾವನ್ನು ಒಂದು ವಿಷಯವನ್ನಾಗಿ ಶಿಕ್ಷಣದಲ್ಲಿ ಅಳವಡಿಸಬೇಕು. ಪ್ರೌಢ ಶಾಲೆ ಅಥವಾ ಕಾಲೇಜು ಹಂತದಲ್ಲಿ ಅಳವಡಿಸಿದರೆ ಉತ್ತಮ. ಇದರಿಂದ ಸದಭಿರುಚಿಯ ಪ್ರತಿಭೆಗಳು ಹೊರಬರಲು ವೇದಿಕೆಯಾಗುತ್ತದೆ ಎಂದು ಹಿರಿಯ ಪತ್ರಕರ್ತ ಅನಂತ್ ಚಿನಿವಾರ ಅಭಿಪ್ರಾಯಪಟ್ಟರು.