ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ರೇಣುಕ ವಿರುದ್ಧ ನರ್ಸ್ ಜಯಲಕ್ಷ್ಮಿ ಧರಣಿ
ಮಹಿಳೆಯರ ಬಗ್ಗೆ ಗೌರವವಿಲ್ಲದ ರೇಣುಕಾಚಾರ್ಯ ಅವರನ್ನು ಕೂಡಲೇ ಸಂಪುಟದಿಂದ ಕೈಬಿಡಬೇಕು. ಈ ಬಗ್ಗೆ ರಾಜ್ಯಪಾಲ ಎಚ್ ಆರ್ ಭಾರದ್ವಾಜ್ ಅವರಿಗೆ ದೂರು ನೀಡುವುದಾಗಿ ಹೇಳಿದರು. ಸಂಪುಟದಲ್ಲೇ ಅತ್ಯಂತ ಉತ್ತಮ ಕೆಲಸ ಮಾಡಿದ್ದ ಶೋಭಾ ಕರಂದ್ಲಾಜೆ ಅವರಿಂದ ಮಂತ್ರಿ ಪದವಿ ಕಸಿದುಕೊಳ್ಳಲು ರೇಣುಕಾಚಾರ್ಯ ಅವರ ಭಿನ್ನಮತ ಪ್ರಮುಖವಾಗಿ ಕೆಲಸ ಮಾಡಿದೆ. ಇಂತಹ ಮಹಿಳಾ ವಿರೋಧಿ ಸಚಿವರನ್ನು ಕೂಡಲೇ ಕೈಬಿಡುವುದು ಸೂಕ್ತ ಎಂದು ನರ್ಸ್ ಜಯಲಕ್ಷ್ಮಿ ಮುಖ್ಯಮಂತ್ರಿಗಳನ್ನು ಒತ್ತಾಯಿಸಿದ್ದಾರೆ.
ಇತ್ತೀಚೆಗೆ ಬಿಜೆಪಿಯಲ್ಲಿ ಭಿನ್ನಮತ ಚಟುವಟಿಕೆಗೆ ಮುನ್ನುಡಿ ಬರೆದಿದ್ದ ರೇಣುಕಾಚಾರ್ಯ ಅವರು ಬಂಡಾಯದಿಂದಲೇ ಮಂತ್ರಿ ಪದವಿಯನ್ನು ಗಿಟ್ಟಿಸಿಕೊಂಡಿದ್ದರು. ಇದನ್ನು ಪಕ್ಷ ಅನೇಕ ಶಾಸಕರಿಗೆ ಬಹಿರಂಗವಾಗಿ ವಿರೋಧಿಸಿದ್ದರು. ಶಾಸಕ ಅಪ್ಪಚ್ಚು ರಂಜನ್ ಅವರಂತೂ ರೇಣುಕಾಚಾರ್ಯ ವಿರುದ್ಧ ವಾಗ್ದಾಳಿ ನಡೆಸಿ ಕೂಡಲೇ ಅವರಿಂದ ಮಂತ್ರಿ ಪದವಿಯನ್ನು ವಾಪಸ್ ಪಡೆದುಕೊಳ್ಳಬೇಕು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಒತ್ತಾಯಿಸಿದ್ದರು.
Comments
yediyurappa ಯಡಿಯೂರಪ್ಪ ಲೈಂಗಿಕ ಕಿರುಕುಳ ಎಂಪಿ ರೇಣುಕಾಚಾರ್ಯ ನರ್ಸ್ ಜಯಲಕ್ಷ್ಮಿ nurse jayalakshmi renukacharya excise dept sexual assault
Story first published: Thursday, December 31, 2009, 16:54 [IST]