ಸರ್ಕಾರ ಬೀಳಿಸೋ ಕೆಲ್ಸ ಕಾಂಗ್ರೆಸ್ ಗೆ : ಗೌಡ

ತಮ್ಮ ಹಿರಿಮಗ ಎಚ್ ಡಿ ರೇವಣ್ಣ ಅವರ 53ನೇ ಹುಟ್ಟುಹಬ್ಬದ ಆಚರಣೆ ನಂತರ ಗೌಡರು ಮಾತನಾಡುತ್ತಾ, ಬಿಜೆಪಿ ಪತನ ಸನ್ನಿಹಿತವಾಗುತ್ತಿದೆ. ಭಿನ್ನಮತೀಯ ಬೇಡಿಕೆ ಈಡೇರದಿದ್ದರೆ ಸರ್ಕಾರ ಪತನವಾಗುವುದು ಖಾತ್ರಿ. ವಿಧಾನಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್- ಜೆಡಿಎಸ್ ಮೈತ್ರಿಗೆ ಉತ್ತಮ ಫಲಿತಾಂಶ ದೊರೆಯಲಿದೆ ಎಂಬ ಆಶಾಭಾವವನ್ನು ದೇವೇಗೌಡ ವ್ಯಕ್ತಪಡಿಸಿದರು.
ಬುಧವಾರ ತಮ್ಮ 51 ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡ ಕುಮಾರಸ್ವಾಮಿ ಅವರು ಕೇಕ್ ಕತ್ತರಿಸಿ ಮಾತನಾಡುತ್ತಾ " ಸದ್ಯದಲ್ಲೇ ಕರ್ನಾಟಕ ಜನತೆಗೆ ಒಳ್ಳೆಯದಾಗುವ ಸಿಹಿಸುದ್ದಿ ಹೊರಬೀಳಲಿದೆ" ಎಂದು ಹೇಳಿದ್ದರು .ಆದರೆ, ವಿವರಗಳನ್ನು ಬಹಿರಂಗ ಪಡಿಸಿರಲಿಲ್ಲ. ಆ ಸಿಹಿಸುದ್ದಿ ಏನಿರಬಹುದು? ಎಂಬ ಪ್ರಶ್ನೆ ರಾಜಕೀಯ ವಲಯದಲ್ಲಿ ಕುತೂಹಲ ಹುಟ್ಟಿಸಿದೆ.
(ಏಜೆನ್ಸೀಸ್)












Click it and Unblock the Notifications