ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಸರ್ಕಾರ ಬೀಳಿಸೋ ಕೆಲ್ಸ ಕಾಂಗ್ರೆಸ್ ಗೆ : ಗೌಡ
ತಮ್ಮ ಹಿರಿಮಗ ಎಚ್ ಡಿ ರೇವಣ್ಣ ಅವರ 53ನೇ ಹುಟ್ಟುಹಬ್ಬದ ಆಚರಣೆ ನಂತರ ಗೌಡರು ಮಾತನಾಡುತ್ತಾ, ಬಿಜೆಪಿ ಪತನ ಸನ್ನಿಹಿತವಾಗುತ್ತಿದೆ. ಭಿನ್ನಮತೀಯ ಬೇಡಿಕೆ ಈಡೇರದಿದ್ದರೆ ಸರ್ಕಾರ ಪತನವಾಗುವುದು ಖಾತ್ರಿ. ವಿಧಾನಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್- ಜೆಡಿಎಸ್ ಮೈತ್ರಿಗೆ ಉತ್ತಮ ಫಲಿತಾಂಶ ದೊರೆಯಲಿದೆ ಎಂಬ ಆಶಾಭಾವವನ್ನು ದೇವೇಗೌಡ ವ್ಯಕ್ತಪಡಿಸಿದರು.
ಬುಧವಾರ ತಮ್ಮ 51 ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡ ಕುಮಾರಸ್ವಾಮಿ ಅವರು ಕೇಕ್ ಕತ್ತರಿಸಿ ಮಾತನಾಡುತ್ತಾ " ಸದ್ಯದಲ್ಲೇ ಕರ್ನಾಟಕ ಜನತೆಗೆ ಒಳ್ಳೆಯದಾಗುವ ಸಿಹಿಸುದ್ದಿ ಹೊರಬೀಳಲಿದೆ" ಎಂದು ಹೇಳಿದ್ದರು .ಆದರೆ, ವಿವರಗಳನ್ನು ಬಹಿರಂಗ ಪಡಿಸಿರಲಿಲ್ಲ. ಆ ಸಿಹಿಸುದ್ದಿ ಏನಿರಬಹುದು? ಎಂಬ ಪ್ರಶ್ನೆ ರಾಜಕೀಯ ವಲಯದಲ್ಲಿ ಕುತೂಹಲ ಹುಟ್ಟಿಸಿದೆ.
(ಏಜೆನ್ಸೀಸ್)
ದೇವೇಗೌಡ ಬಿಜೆಪಿ ಜೆಡಿಎಸ್ deve gowda jds ಕಾಂಗ್ರೆಸ್ congress ಹುಟ್ಟುಹಬ್ಬ hd kumaraswamy ಎಚ್ ಡಿ ಕುಮಾರಸ್ವಾಮಿ hd revanna ಚುನಾವಣೆ birthday ಭಿನ್ನಮತ ಎಚ್ ಡಿ ರೇವಣ್ಣ
Story first published: Thursday, December 17, 2009, 18:14 [IST]