ರಾಮನಗರದಲ್ಲಿ ವಿಕೃತಕಾಮಿ ತಿಪ್ಪೇಶಿ ಬಂಧನ

ಸುಟ್ಟುಕರಕಲಾಗಿದ್ದ ಮಹಿಳೆಯ ಶವದ ಕೈಭಾಗದ ಮೇಲಿದ್ದ ಒಂದೇ ಒಂದು ಹಚ್ಚೆಗುರುತು ಪ್ರಕರಣವನ್ನ ಪತ್ತೆಹಚ್ಚುವಲ್ಲಿ ಸಹಕಾರಿಯಾಗಿದೆ. ಹಣಕ್ಕಾಗಿ ವಿಕೃತ ಮನಸ್ಸಿನ ಚಿತ್ರದುರ್ಗದ ತಿಪ್ಪೇಶಿ ಕಾಮತೃಷೆ ತೀರಿಸಿಕೊಂಡು ನರ್ಸಿಂಗ್ ತರಬೇತಿ ಮುಗಿಸಿದ್ದ ಗೆಳತಿ ಹರಿಣಿಯ ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ.
ತಿಪ್ಪೇಶಿ ಮತ್ತು ಗೆಳತಿ ಇಬ್ಬರೂ ವಿವಾಹಿತರಾಗಿದ್ದರೂ ಇಬ್ಬರ ನಡುವೆ ಇದ್ದ ಅನೈತಿಕ ಸಂಬಂಧವೇ ಕೊಲೆಗೆ ಕಾರಣವೆಂದು ತಿಳಿದುಬಂದಿದೆ. ಕೊಲೆಗಾರ ತಿಪ್ಪೇಶಿಗೆ ಹೆಂಡತಿಯಿದ್ದರೂ ಬೇರೆ ಮಹಿಳೆಯರೊಂದಿಗೆ ಸಲುಗೆ ಬೆಳೆಸಿಕೊಂಡು ದೈಹಿಕವಾಗಿ ಬಳಸಿಕೊಳ್ಳುತ್ತಿದ್ದ ಎಂಬುದು ತನಿಖೆಯ ಸಂದರ್ಭದಲ್ಲಿ ತಿಳಿದುಬಂದಿದೆ.
ಕೊಲೆಯಾಗಿರುವ ಹರಿಣಿ ತನ್ನ ಮಾವನೊಂದಿಗೆ ಕಳೆದ ನಾಲ್ಕುವರ್ಷದ ಹಿಂದೆ ವಿವಾಹವಾಗಿ ನರ್ಸಿಂಗ್ ಕೋರ್ಸ್ ಮಾಡಲು ಗೆಳತಿಯರೊಂದಿಗೆ ಬೆಂಗಳೂರಿನ ಕಾಲೇಜು ಸೇರಿದ್ದಳು. ನರ್ಸಿಂಗ್ ಕೊರ್ಸ್ ಮುಗಿಸಿ ಸುಂಕದಕಟ್ಟೆ ಕುಸುಮ ಕ್ಲಿನಿಕ್ನಲ್ಲಿ ನರ್ಸ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಸ್ತ್ರೀಲೋಲ ತಿಪ್ಪೇಶಿಯೊಂದಿಗೆ ಸ್ನೇಹ ಸಂಪರ್ಕ ಬೆಳೆಸಿಕೊಂಡು ತೀರಾ ಹತ್ತಿರವಾಗಿದ್ದಾಳೆ.
ಕೊಲೆಯಾದ ಹರಿಣಿಯ ರೂಂನಲ್ಲಿದ್ದ ತಿಪ್ಪೇಶಿಯ ಸಂಬಂಧಿ ಶಿಲ್ಪಾಳ ಮೂಲಕ ಇವರಿಬ್ಬರ ಸ್ನೇಹ ಗಾಢವಾಗಿ ಬೆಳೆಯಲು ಸಾಧ್ಯವಾಗಿದೆ. ಇಬ್ಬರೂ ವಾರಾಂತ್ಯಗಳಲ್ಲಿ ಸುತ್ತಾಡುವುದನ್ನ ಅಭ್ಯಾಸಮಾಡಿಕೊಂಡಿದ್ದರು. ನಂತರ ತಿಪ್ಪೇಶಿಗೆ ಹಣದ ಅವಶ್ಯಕತೆ ಇದ್ದುದರಿಂದ ರಾಮನಗರ ಬಳಿಯ ಮಾಯಗಾನಹಳ್ಳಿ ಬಳಿ ಹರಿಣಿಯನ್ನ ಕರೆದೊಯ್ದು ವೇಲ್ನಿಂದ ಕುತ್ತಿಗೆ ಹಿಸುಕಿ ಕೊಲೆ ಮಾಡಿ ಗುರುತು ಸಿಗದ ರೀತಿಯಲ್ಲಿ ಪೆಟ್ರೋಲ್ ಸುರಿದು ಆಕೆಯ ದೇಹಕ್ಕೆ ಬೆಂಕಿಯಿಟ್ಟೆ ಎಂದು ಯಾವುದೇ ಅಳುಕಿಲ್ಲದೇ ತಿಪ್ಪೇಶಿ ಹೇಳುತ್ತಾನೆ.
ಬಟ್ಟೆ ಬದಲಿಸುವ ಹಾಗೆ ಗೆಳತಿಯರನ್ನ ಬದಲಿಸುವ ಈ ತಿಪ್ಪೇಶಿ ಇಬ್ಬರು ಮಹಿಳೆಯರೊಂದಿಗೆ ಇರುವಾಗ ಪೋಲೀಸರು ಬಂಧಿಸಿದ್ದಾರೆ. ತನ್ನ ಕೊಠಡಿಯಲ್ಲಿ ತನ್ನ ಹೆಂಡತಿಯ ಫೋಟೋವನ್ನಿಡದ ಈ ಭೂಪ ತನ್ನ ಗೆಳತಿಯರ ಫೋಟೋಗಳನ್ನು ಇಟ್ಟುಕೊಂಡಿದ್ದನೆಂದು ತಿಳಿದುಬಂದಿದೆ. ತನ್ನ ಕಾಮತೃಷೆಗಾಗಿ ಗೆಳತಿಯನ್ನು ಕೊಂದ ಈ ತಿಪ್ಪೇಶಿಯ ಬಂಧನ ವಿಷಯ ತಿಳಿಯುತ್ತಿದ್ದಂತೆ ಸಪ್ತಪದಿ ತುಳಿದ ಪತ್ನಿ ಈತನ ಕೀಚಕ ಕೃತ್ಯಕ್ಕೆ ತಕ್ಕ ಶಿಕ್ಷೆಯಾಗಲಿ ಎಂದು ಹೇಳಿದ್ದಾಳೆ.
ಅಪರಿಚಿತ ಶವವೆಂದು ಪರಿಗಣಿಸಿದ್ದ ರಾಮನಗರ ಪೋಲೀಸರಿಗೆ ಹರಿಣಿಯ ಕೈಮೇಲಿದ್ದ ಎಸ್.ವೈ. ಹಚ್ಚೆಗುರುತು ಪ್ರಕರಣವನ್ನ ಪತ್ತೆಹಚ್ಚಲು ಸಹಕಾರಿಯಾಯಿತು. ಸುಂಕದಕಟ್ಟೆ ಠಾಣೆಯಲ್ಲಿ ದಾಖಲಾಗಿದ್ದ ಮಿಸ್ಸಿಂಗ್ ಕೇಸ್ಗೂ ಈ ಪ್ರಕರಣಕ್ಕೂ ಸಾಮ್ಯತೆ ಇದ್ದುದರಿಂದ ಮುಚ್ಚಿಹೋಗಬೇಕಾಗಿದ್ದ ಪ್ರಕರಣ ಬಯಲಿಗೆ ಬಂದಂತಾಗಿದೆ. ರಾಮನಗರ ಗ್ರಾಮಾಂತರ ವೃತ್ತ ನಿರೀಕ್ಷಕ ಧರ್ಮೇಂದ್ರ, ಪಿ.ಎಸ್.ಐ ವಿನೋದ್ ಭಟ್ ನೇತೃತ್ವದಲ್ಲಿ ತನಿಖೆ ನಡೆಸಿ ಕಡಿಮೆ ಅವಧಿಯಲ್ಲೇ ಪ್ರಕರಣವನ್ನ ಬಯಲಿಗೆಳೆದಿದ್ದಾರೆ. ಪೋಲೀಸ್ ಸಿಬ್ಬಂದಿಗಳಾದ ಅನಂತಯ್ಯ, ನರಸಿಂಹಮೂರ್ತಿ, ಪ್ರಕಾಶ್ ಮತ್ತು ಪುರಂದರ್ ಕೊಲೆಗಡುಕನನ್ನ ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.
-
Rameshwaram Cafe: ರಾಮೇಶ್ವರಂ ಕೆಫೆ ಪಾರ್ಸಲ್ - ಬ್ಯಾಗ್ ತುಂಬಾ ದುಬಾರಿ ಕಣ್ರೀ: ಸೋಷಿಯಲ್ ಮೀಡಿಯಾ ವೈರಲ್ ಪೋಸ್ಟ್ -
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
Bengaluru Property Tax: ಆಸ್ತಿ ತೆರಿಗೆ ಸ್ವೀಕಾರಕ್ಕಾಗಿ ರಾತ್ರಿ 10ಗಂಟೆವರೆಗೆ ಪಾಲಿಕೆ ಕಚೇರಿ ಓಪನ್ -
Arecanut Price: ದಾವಣಗೆರೆ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಧಾರಣೆ ಭರ್ಜರಿ ಏರಿಕೆ: ಇಲ್ಲಿದೆ ಮಾರ್ಚ್ 30ರ ದರಪಟ್ಟಿ -
Hardik Pandya: ಕೇವಲ 35 ದಿನಗಳಲ್ಲಿ ಕೋಟಿ.. ಕೋಟಿ ಖರ್ಚು ಮಾಡಿದ ಹಾರ್ದಿಕ್ ಪಾಂಡ್ಯ; ಇಲ್ಲಿದೆ ಪಟ್ಟಿ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ












Click it and Unblock the Notifications