ದುಬೈನಲ್ಲಿ ಆರ್ಥಿಕ ಕುಸಿತ, ಪಿಂಕ್ ಸ್ಲಿಪ್ ಭೀತಿ

ಭೂಮಿಯ ಮೇಲಿರುವ ಕುಬೇರರ ನಾಡು ಎಂಬ ಗೌರವಕ್ಕೆ ಪಾತ್ರವಾಗಿದ್ದ ದುಬೈ ಎಂದೂ ಕಾಣದಂತಹ ಆರ್ಥಿಕ ಕುಸಿತ ಎದುರಿಸತೊಡಗಿದೆ. ದುಬೈನ ಕಂಪನಿಗಳಲ್ಲಿ ಕೆಲಸ ಮಾಡುತ್ತಿರುವ ಉದ್ಯೋಗಿಗಳು ಕೆಲಸ ಕಳೆದುಕೊಳ್ಳುವ ಭೀತಿ ಎದುರಿಸುತ್ತಿದ್ದಾರೆ. ಈಗಾಗಲೇ ಕೆಲಸದಿಂದ ತೆಗೆದು ಹಾಕಿರುವ ಸಂದೇಶಗಳು ನೂರಾರು ಮಂದಿ ಕೆಳಮಟ್ಟದ ನೌಕರರಿಗೆ ಇಮೇಲ್ ಮತ್ತು ಎಸ್ಎಂಎಸ್ ಮೂಲಕ ತಲುಪಿವೆ.
ಅರಬ್ ದೇಶಗಳಲ್ಲಿ ಹೆಚ್ಚಾಗಿ ಕೇರಳಿಯರು ಕೆಲಸ ಮಾಡುತ್ತಿದ್ದು, ಆಂಧ್ರಪ್ರದೇಶ, ಕರ್ನಾಟಕ, ಪಶ್ಚಿಮ ಬಂಗಾಲ, ಉತ್ತರ ಪ್ರದೇಶ, ಮುಂಬೈ ರಾಜ್ಯದವರೂ ಅಲ್ಲಿ ಕೆಲಸ ಮಾಡುತ್ತಿದ್ದಾರೆ. ಒಂದೆಡೆ ಕೆಲಸ ಕಳೆದುಕೊಂಡು ಸಪ್ಪೆ ಮುಖ ಹೊತ್ತುಕೊಂಡು ಸ್ವದೇಶಕ್ಕೆ ಆಗಮಿಸುತ್ತಿರುವವರ ಪ್ರವಾಹವೇ ಕಂಡ ಬರುತ್ತಿದೆ. ಆದರೆ, ಭಾರತದ ಘನ ಸರಕಾರ ಮಾತ್ರ, ದುಬೈನಲ್ಲಿ ಆಗಿರುವ ಆರ್ಥಿಕ ಕುಸಿತಕ್ಕೂ ನಮಗೂ ಸಂಬಂಧವಿಲ್ಲ ಎಂಬಂತೆ ವರ್ತಿಸತೊಡಗಿದೆ. ದುಬೈ ಆರ್ಥಿಕ ಕುಸಿತದಿಂದ ಭಾರತ ಹಣಕಾಸು ಪರಿಸ್ಥಿತಿ ಮೇಲೆ ಪರಿಣಾಮ ಬೀರದು ಎಂಬ ಮಾತುಗಳು ಸರಕಾರದ ಕಡೆಯಿಂದ ಇಲ್ಲಿವರೆಗೆ ಬಂದಿವೆ.
(ಏಜನ್ಸೀಸ್)












Click it and Unblock the Notifications