ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕ ಮುಸ್ಲಿಮರಿಗೆ ಯಡ್ಡಿ ಕರೆ

By Staff
|
Google Oneindia Kannada News

ಬೆಂಗಳೂರು, ನ. 23 : ನಾವೆಲ್ಲ ಭಾರತೀಯರು ಎಂಬ ದೇಶಪ್ರೇಮವನ್ನು ಮೆರೆಯುವಂತೆ ಮುಸ್ಲಿಂ ಬಾಂಧವರಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಕರೆ ನೀಡಿದ್ದಾರೆ. ನಗರದಲ್ಲಿಂದು ಹಜ್ ಯಾತ್ರಿಗಳ ಕೊನೆಯ ತಂಡವನ್ನು ಬೀಳ್ಕೊಟ್ಟು ಅವರು ಮಾತನಾಡುತ್ತಿದ್ದರು.

ತಾವು ಯಾವುದೇ ಧರ್ಮ, ಸಮುದಾಯದವರಿಗೆ ತಾರತಮ್ಯ ಮಾಡಿಲ್ಲ. ಎಲ್ಲ ಧರ್ಮಗಳನ್ನು ಸಮಾನ ಎಂದು ಭಾವಿಸಿದ್ದು, ಹಜ್ ಯಾತ್ರಿಗಳಿಗೆ ಸರಕಾರ ವಿಶೇಷ ಅಧ್ಯತೆಯೊಂದಿಗೆ ಅನುದಾನ ನೀಡಿದೆ ಎಂದು ಹೇಳಿದರು. ಮುಸ್ಲಿಂ ಬಾಂಧವರು ಹಜ್ ಯಾತ್ರೆ ಸಂದರ್ಭದಲ್ಲಿ ರಾಜ್ಯದಲ್ಲಿ ಸಂಭವಿಸಿದ ಪ್ರವಾಹ ಸಂತ್ರಸ್ತ ಜನರಿಗಾಗಿ ವಿಶೇಷ ಪ್ರಾರ್ಥನೆ ಮಾಡುವಂತೆ ಹೇಳಿದ ಅವರು, ನಾವೆಲ್ಲರೂ ಭಾರತೀಯರು, ದೇಶಪ್ರೇಮ ನಮ್ಮಲ್ಲಿರಬೇಕು ಎಂದು ಅವರು ಕಿವಿಮಾತು ಹೇಳಿದರು.

ಹಜ್ ಸಮಿತಿಗೆ ಪಾರದರ್ಶಕವಾಗಿ ಸದಸ್ಯರನ್ನು ನೇಮಕ ಮಾಡಲಾಗಿದೆ. ಕಳೆದ ಬಜೆಟ್ ನಲ್ಲಿ 186 ಕೋಟಿ ರುಪಾಯಿ ಸಮಿತಿಗಾಗಿ ಮೀಸಲಿಡಲಾಗಿದೆ. ಈ ಪೈಕಿ ಈ ವರ್ಷ ಹಜ್ ಯಾತ್ರೆಗಾಗಿ 5 ಕೋಟಿ ರುಪಾಯಿ ಬಿಡುಗಡೆ ಮಾಡಿರುವುದಾಗಿ ಯಡಿಯೂರಪ್ಪ ವಿವರಿಸಿದರು. ಎಲ್ಲ ಧರ್ಮದ ಸಾರ ಒಂದೇ, ಅವರವರ ಭಾವಕ್ಕೆ ತಕ್ಕಂತೆ ದೇಶವನ್ನು ಸಮೃದ್ಧಿಯತ್ತ ಕೊಂಡೊಯ್ಯುವ ನಿಟ್ಟಿನಲ್ಲಿ ಕೆಲಸ ಮಾಡಬೇಕೆಂದು ಸಲಹೆ ನೀಡಿದರು. ವಕ್ಫ ಖಾತೆ ಮಮ್ತಾಜ್ ಅಲಿ ಖಾನ್ ಸೇರಿದಂತೆ ಸಮುದಾಯದ ವಿವಿಧ ಮುಖಂಡರು ಪಾಲ್ಗೊಂಡಿದ್ದರು.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X