Get Updates
Get notified of breaking news, exclusive insights, and must-see stories!

ತರೀಕೆರೆ ಏರಿಮೇಲೆ ಚಿರತೆಮರಿ

Cheetah cubs saved in Tarikere
ತರೀಕೆರೆ, ನ.23:ತಾಯಿಯಿಂದ ದೂರವಾಗಿ ದಾರಿ ತಪ್ಪಿದ ಮೂರು ಪುಟಾಣಿ ಚಿರತೆ ಮರಿಗಳನ್ನು ಅರಣ್ಯ ಇಲಾಖೆ ಸಿಬ್ಬಂದಿಯ ಸಹಾಯದಿಂದ ಸುರಕ್ಷಿತವಾಗಿ ಮರಳಿಗೂಡಿಗೆ ಸೇರಿಸಿದ ಘಟನೆ ತರೀಕೆರೆ ತಾಲ್ಲೂಕಿನ ಹಾದಿಕೆರೆ ಬಳಿಯ ಗಣೇಶಪುರ ಗ್ರಾಮದಲ್ಲಿ ಭಾನುವಾರ ನಡೆದಿದೆ.

ಮೇಕೆ ಮರಿಗಳನ್ನು ಹುಡುಕಿಕೊಂಡು ಹೊರಟ ರೈತ ರಮೇಶ ಎಂಬುವವರಿಗೆ ತಮ್ಮ ತೋಟದ ಮೂಲೆಯೊಂದರಲ್ಲಿ ಕೇಳಿ ಬಂದ ಬುಸುಗುಡುವ ಶಬ್ದ ಕೇಳಿ ಅನುಮಾನಗೊಂಡರು. ಇಣುಕಿ ನೋಡಿಗಾದ ಅರ್ಧ ಭಾಗ ಛಿದ್ರಗೊಂಡ ಮೇಕೆಯ ಶವದ ಬಳಿ ಚಿರತೆ ಮರಿಗಳು ಆಡುತ್ತಿದ್ದವು.

ನಂತರ ರಮೇಶ್ ಅವರು ತಕ್ಷಣ ಅರಣ್ಯ ಇಲಾಖೆಗೆ ಸುದ್ದಿ ಮುಟ್ಟಿಸಿದರು. ಸ್ಥಳಕ್ಕೆ ಆಗಮಿಸಿದ ತರೀಕೆರೆಯ ವೃತ್ತ ನೀರಿಕ್ಷಕ ಶರಣಪ್ಪ ಮತ್ತು ಸಿಬ್ಬಂದಿ ವರ್ಗ ಹಾಗು ಅರಣ್ಯ ಅಧಿಕಾರಿಗಳು ಚಿರತೆ ಮರಿಗಳಿಗೆ ಹಾಲು ಕುಡಿಸಿ ತರೀಕೆರೆ ಕಾಡಿನಲ್ಲಿ ಬಿಟ್ಟು ಬಂದರು.

(ದಟ್ಸ್ ಕನ್ನಡ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+