ಬಾಗೇಪಲ್ಲಿ ರಸ್ತೆ ಅಗಲೀಕರಣಕ್ಕೆ ತಡೆ
ಬಾಗೇಪಲ್ಲಿ,
ಅ. 29 : ಡಿವಿಜಿ ರಸ್ತೆಯಲ್ಲಿರುವ ಕಟ್ಟಡಗಳನ್ನು ಕೆಡಹುವ ಕೆಲಸಕ್ಕೆ ಕರ್ನಾಟಕ ಉಚ್ಛ ನ್ಯಾಯಾಲಯ ಮುಂದಿನ ಸೋಮವಾರದವರೆಗೆ ( ನ.2) ತಡೆಒಡ್ಡಿದೆ. ರಸ್ತೆ ಅಗಲೀಕರಣ ನಿಮಿತ್ತ ಕಟ್ಟಡಗಳನ್ನು ಕೆಡಹುವ ಕಾರ್ಯಾಚರಣೆಯನ್ನು ಲೋಕೋಪಯೋಗಿ ಇಲಾಖೆ ಕೈಗೊಂಡಿತ್ತು. id="toptextpromo">ರಸ್ತೆ
ಅಗಲಿಸುವ ಯೋಜನೆ ನಿಮಿತ್ತ ನಿಮ್ಮ ಕಟ್ಟಡಗಳನ್ನು ಕೆಡವಲಾಗುವುದು ಎಂದು ಲೋಕೋಪಯೋಗಿ ಇಲಾಖೆಯು ನಂಡುಂಡ ರೆಡ್ಡಿ ಮತ್ತು ವೆಂಕಟಲಕ್ಷ್ಮಮ್ಮ ಎಂಬುವವರಿಗೆ ನೋಟೀಸು ಜಾರಿ ಮಾಡಿತ್ತು. ಆದರೆ, ಇಲಾಖೆಯ ಯೋಜನೆಯೇ ಸರಿಯಿಲ್ಲ, ತಮ್ಮ ಕಟ್ಟಡ ಕೆಡವಿ ರಸ್ತೆ ಅಗಲ ಮಾಡುವುದಕ್ಕೆ ಸಕಾರಣ ಇಲ್ಲ ಎಂದು ವಾದಿಸಿ ನಂಡುಂಡ ರೆಡ್ಡಿ ಮತ್ತಿತರ 100 ಮಂದಿ ನ್ಯಾಯಾಲಯದ ಮೊರೆಹೊಕ್ಕಿದ್ದರು. ಪಿಡಬ್ಲೂಡಿ ಇಲಾಖೆಯ ರಸ್ತೆ ಅಗಲೀಕರಣ ಕ್ರಮಬದ್ಧತೆಯನ್ನೇ ಅವರು ಪ್ರಶ್ನಿಸಿದ್ದರು. id='are-slot-1' class='oiad oi-axt oiadv'> id='top-searched-articles'>(ಏಜೆನ್ಸೀಸ್)












Click it and Unblock the Notifications