ಶ್ರೀಸಾಮಾನ್ಯನಿಗೆ ನಮ್ಮ ಬೆಂಗಳೂರು ಪ್ರಶಸ್ತಿ

ಅಂಥ, ಅಸಾಮಾನ್ಯ ಸೇವೆ ಸಲ್ಲಿಸಿರುವ ಶ್ರೀಸಾಮಾನ್ಯರನ್ನು ಹುಡುಕಿ ಪ್ರಶಸ್ತಿ ನೀಡುವ, ಪೋಡಿಯಂ ಮೇಲೆ ಕರೆದುತರುವ ಜವಾಬ್ದಾರಿ ಬೆಂಗಳೂರು ನಾಗರಿಕರ ಮೇಲಿದೆ. ಹೆಚ್ಚಿಗೆ ಏನಿಲ್ಲ, ಅರ್ಹತೆ ಇದ್ದರೂ ಮಿನುಗದೆ ಮೋಡದ ಮುಸುಕಿನಲ್ಲಿ ಮರೆಯಾಗಿರುವ ನಿಜವಾದ ತಾರೆಗಳ ಸೇವೆಯನ್ನು ಗಮನಿಸಿ ಬೆಂಗಳೂರು ಬೆಳೆಯಲು ಕಾರಣರಾದವರಿಗೆ ಅಟ್ಲೀಸ್ಟ್ 'ಧನ್ಯವಾದ' ಹೇಳುವ ವಿನೂತನ ಕಾರ್ಯಕ್ರಮವನ್ನು ಸಂಸದ ರಾಜೀವ ಚಂದ್ರಶೇಖರ್ ಹಮ್ಮಿಕೊಂಡಿದ್ದಾರೆ.
ಚಿಂತನಶೀಲತೆ, ಚಲನಶೀಲತೆ, ಕ್ರಿಯಾತ್ಮಕತೆಯನ್ನು ಮೈಗೂಡಿಸಿಕೊಂಡಿರುವ ಇಂಥ ನಿಜವಾದ ತಾರೆಗಳು ಎಲ್ಲೋ ಇರುವುದಿಲ್ಲ, ನಮ್ಮ ನಿಮ್ಮೆಲ್ಲರ ನಡುವೆಯೇ ಇರುತ್ತಾರೆ. ತಮ್ಮ ಇರುವಿಕೆಯಿಂದಲೇ ಸುತ್ತಮುತ್ತಲಿನ ಜೀವನವನ್ನು ಸಹನೀಯವಾಗಿಸಿರುತ್ತಾರೆ. ಅಂಥಹ ಸಾಧಕರಿಗೆ 'ನಮ್ಮ ಬೆಂಗಳೂರು ಪ್ರಶಸ್ತಿ' ನೀಡಿ ಗೌರವಿಸಲು ನಮ್ಮ ಬೆಂಗಳೂರು ಫೌಂಡೇಷನ್ ನಿರ್ಧರಿಸಿದೆ. ಇದನ್ನು ಪ್ರತಿವರ್ಷ ನೀಡಲು ಫೌಂಡೇಷನ್ ತೀರ್ಮಾನಿಸಿದೆ. ಪ್ರಶಸ್ತಿ ಮೊತ್ತಕ್ಕಾಗಿ ಹೃದಯ ಶ್ರೀಮಂತರು ಧಾರಾಳವಾಗಿ ದಾನ ಮಾಡಬಹುದಾಗಿದೆ.
ಯಾರು ಪ್ರಶಸ್ತಿಗೆ ಅರ್ಹರು?
1) ವಿಧಾನಸಭೆ ಸದಸ್ಯ, ವಿಧಾನಪರಿಷತ್ ಸದಸ್ಯ, ಸಂಸದ, ಸರಕಾರಿ ಅಧಿಕಾರಿಗಳು, ಬಿಡಿಎ, ಬಿಬಿಎಂಪಿ, ಬೆಸ್ಕಾಂನಂಥ ಸಂಸ್ಥೆಗಳು.
2) ಖಾಸಗಿ ಸಂಸ್ಥೆ ಮತ್ತು ಶ್ರೀಸಾಮಾನ್ಯರು.
ಅಕ್ಟೋಬರ್ 14ರಿಂದ ನಾಮನಿರ್ದೇಶನ ಪ್ರಾರಂಭವಾಗಿದೆ. ನವೆಂಬರ್ 14 ಮಕ್ಕಳ ದಿನಾಚರಣೆವರೆಗೆ ನಾಮನಿರ್ದೇಶನವನ್ನು ಸಲ್ಲಿಸಬಹುದು. ಅರ್ಹರ ಪಟ್ಟಿಯನ್ನು ನವೆಂಬರ್ 20ರಂದು ಪ್ರಕಟಿಸಲಾಗುವುದು. ನವೆಂಬರ್ 21ರಿಂದ ಪಟ್ಟಿಯನ್ನು ಪರಿಶೀಲಿಸಿ ವಿಜೇತರನ್ನು ಆಯುವ ಪ್ರಕ್ರಿಯೆ ಪ್ರಾರಂಭವಾಗುತ್ತದೆ. ಡಿಸೆಂಬರ್ 12ರಂದು ಪ್ರಶಸ್ತಿಯನ್ನು ವಿತರಿಸಲಾಗುವುದು.
ನಾಮಿನೇಟ್ ಮಾಡುವುದು ಹೇಗೆ?
1) ಈ ಅಂತರ್ಜಾಲ ತಾಣದಿಂದ ನಾಮನಿರ್ದೇಶನ ಫಾರಂಅನ್ನು ಡೌನ್ ಲೋಡ್ ಮಾಡಬಹುದು.
2) ಬೆಂಗಳೂರು ಒನ್ ಕಚೇರಿ, ಕೆಫೆ ಕಾಫಿ ಡೇಯಿಂದ ನಾಮನಿರ್ದೇಶನ ಫಾರಂಅನ್ನು ಪಡೆಯಬಹುದು.
3) ಭರ್ತಿ ಮಾಡಿದ ಅರ್ಜಿಯನ್ನು ಅಥವಾ ಫಾರಂಅನ್ನು ಫೋಟೋ, ವಿಡಿಯೋ ಸಹಿತ ಸಲ್ಲಿಸಬೇಕು.
4) ಖುದ್ದಾಗಿ ಅಥವಾ ಆನ್ ಲೈನ್ ಕೂಡ ಅರ್ಜಿಯನ್ನು ಸಲ್ಲಿಸಬಹುದು.
5) ನಾಮನಿರ್ದೇಶನ ಫಾರಂಗಳು ಇಂಗ್ಲಿಷ್ ಮತ್ತು ಕನ್ನಡದಲ್ಲಿ ಲಭ್ಯವಿವೆ.
ಭರ್ತಿ ಮಾಡಿದ ಫಾರಂಅನ್ನು ಕೆಳ ವಿಳಾಸಕ್ಕೆ ಕಳಿಸಬೇಕು.
ಎಸ್ ನಂದೀಶ್, ಕಾರ್ಯದರ್ಶಿ,
11ನೇ ಮಹಡಿ, ವಿವಿ ಮುಖ್ಯ ಕಟ್ಟಡ,
ಡಾ. ಬಿಆರ್ ಅಂಬೇಡ್ಕರ್ ಬೀದಿ,
ಬೆಂಗಳೂರು - 560 001.
ದೂರವಾಣಿ: + 91 80 2286 3600.
ಜ್ಯೂರಿ ಸದಸ್ಯರು ಮತ್ತಿತರ ವಿವರಗಳಿಗಾಗಿ ಈ ತಾಣ ನೋಡಿರಿ : http://www.namma-bengaluru.in/
(ದಟ್ಸ್ ಕನ್ನಡ ವಾರ್ತೆ)
-
Karnataka Weather Mar 12: ಬಿಸಿಲು ಹೆಚ್ಚಳದ ನಡುವೆ ಮಾರ್ಚ್ 15ರಿಂದ ಕರ್ನಾಟಕದಲ್ಲಿ ಮಳೆ, ಹೇಗಿದೆ ಇಂದಿನ ವೆದರ್ -
Gold Rate March 12: ಚಿನ್ನದ ಬೆಲೆ 10,900 ರೂ., ಬೆಳ್ಳಿ ಬೆಲೆ 10,000 ರೂ. ಭರ್ಜರಿ ಇಳಿಕೆ, ಬಂಗಾರ ಪ್ರಿಯರು ಫಿದಾ -
ಇರಾನ್ ಪರಮಾಣು ವಿಜ್ಞಾನಿ ಕಥೆ ಮುಗಿಸಿದ ಇಸ್ರೇಲ್, ಮತ್ತಷ್ಟು ತಿಕ್ಕಾಟ ಶುರು | Operation Roaring Lion -
ಹೊಸೂರು ವಿಮಾನ ನಿಲ್ದಾಣ: ಬೆಂಗಳೂರು ಸಮೀಪ 2,979 ಎಕರೆ ಭೂಮಿ ಸ್ವಾಧೀನ; ಕನ್ನಡದಲ್ಲೇ ಮಾತನಾಡಿದ ತಮಿಳುನಾಡು ಶಾಸಕ -
Bengaluru Property Sale: ಬೆಂಗಳೂರಲ್ಲಿ 50 ಆಸ್ತಿದಾರರಿಗೆ ತಮ್ಮ ಆಸ್ತಿಯನ್ನೇ ಕಳೆದುಕೊಳ್ಳುವ ಆತಂಕ: ಜಿಬಿಎ ಹೇಳಿದ್ದೇನು -
ಭಾರತೀಯ ಸೇನೆಯನ್ನ ಅಪಹಾಸ್ಯ ಮಾಡಿದ್ದ ಪಾಕ್ ಆಟಗಾರನಿಗೆ 2.34 ಕೋಟಿ ಆಫರ್; ಕಾವ್ಯಾ ಮಾರನ್ ವಿರುದ್ಧ ಭುಗಿಲೆದ್ದ ಆಕ್ರೋಶ -
ಒಣ ಮೆಣಸಿನಕಾಯಿ ಬಳಸುವ ಮುನ್ನ ಈ ಕೆಲಸ ಮಾಡಿದ್ದೀರಾ? ಆರೋಗ್ಯ ಕಾಪಾಡಲು ಇಲ್ಲಿದೆ ಸೂಪರ್ ಐಡಿಯಾ -
Rashmika Mandanna: ಆ ಆಡಿಯೋ, ವಿಷಯವನ್ನ 24 ಗಂಟೆಯೊಳಗೆ ಡಿಲೀಟ್ ಮಾಡದಿದ್ದರೆ ಕಾನೂನು ಕ್ರಮ ಎಂದ ರಶ್ಮಿಕಾ ಮಂದಣ್ಣ -
Bengaluru: ಬೆಂಗಳೂರಿನ ಹೋಟೆಲ್ಗಳಲ್ಲಿ ಗ್ರಾಹಕರಿಗೆ ಶಾಕ್: ಸಾಂಬಾರ್ ಬದಲು ಬೇರೆ ಆಯ್ಕೆ - ಪೋಸ್ಟ್ ವೈರಲ್, ಡಿಸಿ ಹೇಳಿದ್ದೇನು -
Sulekere: ಮಂಡ್ಯದಲ್ಲಿ ಸೂಳೇಕೆರೆ ಮರುನಾಮಕರಣ ಚರ್ಚೆ: ಇತಿಹಾಸಕ್ಕೆ ಮಸಿ ಬಳಿಯಬೇಡಿ ಎಂದ ಜಗದೀಶ್ ಕೊಪ್ಪ -
ವಿಶ್ವಗುರು ಬಸವಣ್ಣ ಮತ್ತು ಅಕ್ಕಮಹಾದೇವಿ ಬಗ್ಗೆ ಅವಹೇಳನಕಾರಿ ಪೋಸ್ಟ್: ಆರೋಪಿ ಬಂಧನಕ್ಕೆ ಆಗ್ರಹ -
Horoscope March 12: ಗುರುವಾರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ, ಇಲ್ಲಿದೆ ದಿನ ಭವಿಷ್ಯ












Click it and Unblock the Notifications