ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೈಸ್ ಚರ್ಚೆಗೆ ಅಧಿವೇಶನ : ಗೌಡರ ಗಡುವು

|
Google Oneindia Kannada News

HD Devegowda
ಬೆಂಗಳೂರು, ಅ. 1 : ಅಕ್ಟೋಬರ್ 15 ರೊಳಗೆ ನೈಸ್ ಸಂಸ್ಥೆಯ ಬಿಎಂಐಸಿ ಯೋಜನೆಯ ಎಲ್ಲಾ ಅಕ್ರಮಗಳನ್ನು ಕುರಿತು ಚರ್ಚಿಸಲು ಅಧಿವೇಶನ ಕರೆಯುವ ದಿನಾಂಕ ಪ್ರಕಟಿಸದಿದ್ದರೆ ರೈತರನ್ನು ಒಗ್ಗೂಡಿಸಿ ಬೀದಿಗಿಳಿದು ಹೋರಾಟ ನಡೆಸಲಾಗುವುದು ಎಂದು ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಸರಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ಪಕ್ಷದ ಕಚೇರಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಅವರು ಮಾತನಾಡುತ್ತಿದ್ದರು, ಬಿಎಂಐಸಿ ಯೋಜನೆಯ ಎಲ್ಲ ಅಕ್ರಮ ವಂಚನೆಗಳಿಗೆ ಅನುಮೋದನೆ ನೀಡುವ ಮೂಲಕ ಯಡಿಯೂರಪ್ಪ ಸರಕಾರ ಯೋಜನೆಗೆ ಅಧಿಕೃತ ಮುದ್ರೆಯೊತ್ತಿದೆ ಎಂದು ಗೌಡರು ಗಂಭೀರ ಆರೋಪ ಮಾಡಿದರು. ಬಡರೈತರು ಹಾಗೂ ರಾಜ್ಯದ ಆಸ್ತಿ ರಕ್ಷಣೆಯ ಉದ್ದೇಶದಿಂದ ಹೋರಾಟ ನಡೆಸಲಾಗುತ್ತಿದೆ ಎಂದರು.

ಮೂಲ ಒಡಂಬಡಿಕೆಯ ಮೀತಿ, ಷರತ್ತು ಸಡಿಲಗೊಳಿಸಿ ಮೀತಿ ಮೀರಿದ ಹಕ್ಕು ಬಾಧ್ಯತೆಗಳನ್ನು ನೈಸ್ ಸಂಸ್ಥೆಗೆ ನೀಡಲಾಗಿದೆ. 20,193 ಎಕರೆ ಭೂಮಿಯಲ್ಲಿ 6999 ಎಕರೆ ಟೋಲ್ ರಸ್ತೆಯಾಗಿದ್ದು, ಉಳಿದ 14,255 ಎಕರೆ ಭೂಮಿಯನ್ನು ಸರಕಾರಕ್ಕೆ ವಾಪಸ್ ನೀಡಬೇಕು. ಆದರೆ, ಅಭಿವೃದ್ಧಿಪಡಿಸಿದ ಮೇಲೆ ಮಾರಲು ಅವಕಾಶ ಕಲ್ಪಿಸಲಾಗಿದೆ. ಇದು ಹರ್ಷದ್ ಮೆಹ್ತಾನ ಷೇರು ಹಗರಣ, ಸತ್ಯಂ ಕಂಪನಿಯ ಗೋಲ್ ಮಾಲ್ ಪ್ರಕರಣಕ್ಕಿಂತ ದೊಡ್ಡದು ಎಂದು ಎಂದು ಗೌಡರು ಕಿಡಿಕಾರಿದರು.

ಬಿಎಂಐಸಿ ಮೂಲಕ ಒಡಂಬಡಿಕೆಯ ತಿರುಳನ್ನೇ ಸ್ಪಷ್ಟವಾಗಿ ತಿರುಚಲಾಗಿದೆ. ನೈಸ್ ಸಂಸ್ಥೆ ಸ್ವೇಚ್ಛಾಚಾರದಿಂದ ಭೂಮಿ ಬಳಸಲು ಅವಕಾಶ ಮಾಡಿಕೊಡಲಾಗಿದೆ ಎಂದುಪ ಅವರು ಆರೋಪಿಸಿದರು.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X