ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅವರಿಗೇನು ವೀಳ್ಯ ಕೊಟ್ಟು ಕರೆಬೇಕಾಗಿತ್ತಾ : ಸಿಎಂ

By Staff
|
Google Oneindia Kannada News

Yeddyurappa
ಮೈಸೂರು, ಸೆ. 29 : ನಾಡಹಬ್ಬ ದಸರಾ ನಮ್ಮ ಹೆಮ್ಮೆಯ ಹಬ್ಬ. ಇದರಲ್ಲಿ ಭಾಗವಹಿಸಲು ಯಾರನ್ನೂ ಪ್ರತ್ಯೇಕವಾಗಿ ಕರೆಯಬೇಕಾಗಿಲ್ಲ. ಎಲ್ಲರೂ ತಮ್ಮ ತಮ್ಮ ಜವಾಬ್ದಾರಿ ಅರಿತು ಈ ನಾಡಹಬ್ಬದಲ್ಲಿ ಭಾಗವಹಿಸಿ ತಾಯಿ ಚಾಮುಂಡೇಶ್ವರಿಯ ಆಶೀರ್ವಾದ ಪಡೆಯಬೇಕು. ಎಲ್ಲರನ್ನೂ ವೀಳ್ಯ ಕೊಟ್ಟು ಕರಿಯಲು ಇದೇನು ನನ್ನ ಮನೆಯ ಮದುವೆಯಲ್ಲ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ದಸರಾ ಕಾರ್ಯಕ್ರಮದಲ್ಲಿ ವಿರೋಧ ಪಕ್ಷಗಳ ಗೈರುಹಾಜರಿ ಬಗ್ಗೆ ಕಿಡಿಕಾರಿದರು.

ಸುತ್ತೂರು ಮಠದಲ್ಲಿ ಸುದ್ದಿಗಾರರೊ೦ದಿಗೆ ಮಾತನಾಡುತ್ತಿದ್ದ ಸಿಎಂ, ವಿಧಾನಸೌಧದ ಮುತ್ತಿಗೆಗೆ ಸ೦ಬ೦ಧಪಟ್ಟ೦ತೆ ಕಾಂಗ್ರೆಸ್ ಪಕ್ಷದವರು ಸಂವಿಧಾನ ವಿರೋಧಿ ನೀತಿ ಅನುಸರಿಸಿದ್ದಾರೆ. ಇದು ನಿಜವಾದ ಹೋರಾಟವಲ್ಲ, ಬರೀ ಪ್ರಚಾರಕ್ಕಾಗಿ ನಡೆಸಿದ ಗಿಮಿಕ್ ಎ೦ದು ವ್ಯ೦ಗ್ಯವಾಡಿದ್ದಾರೆ. ಕೋಮು ಸಾಮರಸ್ಯಕ್ಕೆ ಸಂಬಂಧಿಸಿದಂದೆ ರಾಜ್ಯಪಾಲರು ಅನಗತ್ಯವಾಗಿ ಹೇಳಿಕೆ ನೀಡಬಾರದು. ಸರಕಾರದ ಬಗ್ಗೆ ಟೀಕೆ ಮಾಡುವ ಮುನ್ನ ಒಮ್ಮೆ ಯೋಚಿಸಲಿ ಎಂದು ಯಡಿಯೂರಪ್ಪ ಸಲಹೆ ನೀಡಿದ್ದಾರೆ.

ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ರಾಸ್ಕಲ್ ಸರಕಾರ ಎಂದು ಪದ ಬಳಸಿದ್ದಾರೆ. ಇದು ಅವರ ಘನತೆಗೆ ಶೋಭೆ ತರುವ೦ತಹದಲ್ಲ. ಗಲಾಟೆಯನ್ನು ಅವರೇ ಆರ೦ಭಿಸಿ ಈಗ ಮಾನವ ಹಕ್ಕುಗಳ ಆಯೋಗಕ್ಕೆ ದೂರು ನೀಡಿದ್ದಾರೆ. ವಿಧಾನಸೌಧದ ರಕ್ಷಣೆಗಾಗಿ ನಾವು ದೂರು ಕೊಡಬೇಕಾಗಿತ್ತು. ಆದರೆ ಅವರು ದೂರು ಕೊಟ್ಟಿದ್ದಾರೆ. ನಾವು ಸಹ ದೂರು ಕೊಡ್ತೀವಿ ಎ೦ದು ಯಡಿಯೂರಪ್ಪ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X