ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕನ್ನಡಿಗ ಸಂತೋಷ್ ಗೆ ಪ್ರತಿಷ್ಠಿತ ವಿಜ್ಞಾನ ಪ್ರಶಸ್ತಿ

By Staff
|
Google Oneindia Kannada News

Santosh Honavar
ನವದೆಹಲಿ, ಸೆ.27: ಎಲ್ ವಿ ಪ್ರಸಾದ್ ನೇತ್ರ ಸಂಸ್ಥೆಯ ಕನ್ನಡಿಗ ವೈದ್ಯ ಡಾ.ಸಂತೋಷ್ ಹೊನ್ನಾವರ್, ಬೆಂಗಳೂರು ಐಐಎಸ್ಸಿಯ 4 ವಿಜ್ಞಾನಿಗಳು, ಬೆಂಗಳೂರಿನ ರಾಮನ್ ಸಂಶೋಧನಾ ಸಂಸ್ಥೆಯ ವಿಜ್ಞಾನಿ ಅಭಿಷೇಕ್ ಧರ್ ಸೇರಿದಂತೆ ಒಟ್ಟು 11 ಮಂದಿಗೆ ದೇಶದ ಪ್ರತಿಷ್ಠಿತ ವಿಜ್ಞಾನ ಪ್ರಶಸ್ತಿ 'ಶಾಂತಿ ಸ್ವರೂಪ್ ಭಟ್ನಾಗರ್ ಪ್ರಶಸ್ತಿ' ಲಭಿಸಿದೆ.

ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿಯ 67ನೇ ಸ್ಥಾಪನಾ ದಿನಾಚರಣೆ ಸಂದರ್ಭದಲ್ಲಿ ಮಂಡಳಿಯ ಮಹಾನಿರ್ದೇಶಕ ಸಮಿರ್ ಬ್ರಹ್ಮಾಚಾರಿ ಅವರು ಪ್ರಶಸ್ತಿಗೆ ಆಯ್ಕೆಯಾದವರ ಹೆಸರುಗಳನ್ನು ಪ್ರಕಟಿಸಿದರು. ಭೌತವಿಜ್ಞಾನಕ್ಕೆ ಸಲ್ಲಿಸಿದ ಕೊಡುಗೆಗಾಗಿ ಧರ್ ಅವರಿಗೆ ಪ್ರಶಸ್ತಿ ನೀಡಲಾಗಿದೆ.

ಹೈದರಾಬಾದ್ ವಿಶ್ವವಿದ್ಯಾಲಯದ ವೇನಪಲ್ಲಿ ಸುರೇಶ್ ಹಾಗೂ ಸಂತೋಷ್ ಹೊನ್ನಾವರ್ ಅವರು ಕ್ರಮವಾಗಿ ಗಣಿಶಾಸ್ತ್ರ ಮತ್ತು ವೈದ್ಯಕೀಯದಲ್ಲಿ ಮಾಡಿದ ಸಂಶೋಧನೆಗಳಿಗಾಗಿ ಪ್ರಶಸ್ತಿ ನೀಡಲಾಗಿದೆ. ಹರೀಶ್ ಚಂದ್ರ ಸಂಶೋಧನಾ ಸಂಸ್ಥೆಯ ರಾಜೇಶ್ ಗೋಪಕುಮಾರ್ ಅವರು ಭೌತವಿಜ್ಞಾನ ಕ್ಷೇತ್ರಕ್ಕೆ ಸಲ್ಲಿಸಿರುವ ಕೊಡುಗೆಗಾಗಿ ಪ್ರಶಸ್ತಿ ನೀಡಲಾಗಿದೆ.

(ಏಜೆನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X