571663siegeದಿಗ್ಬಂಧನಕ್ಕೆ ಮೊದಲೇ ಕಾಂಗ್ರೆಸ್ ನಾಯಕರ ಬಂಧನ/news/2009/09/26/siege-of-vidhana-soudha-congress-leaders-arrested.htmlಬೆಂಗಳೂರು, ಸೆ. 26 : ಸರಕಾರದ ವೈಫಲ್ಯ ಖಂಡಿಸಿ ಕಾಂಗ್ರೆಸ್ ಪಕ್ಷ ವಿಧಾನಸೌಧ ದಿಗ್ಬಂಧನಕ್ಕೆ ತೆರಳುವ ಮುನ್ನವೇ ಕಾಂಗ್ರೆಸ್ ನಾಯಕರಾದ ಸಿದ್ದರಾಮಯ್ಯ, ಉಗ್ರಪ್ಪ, ಡಿಕೆ ಶಿವಕುಮಾರ್. ಮಾಜಿ ಸಂಸದೆ ತೇಜಸ್ವಿನಿ, ಡಿಬಿ ಜಯಚಂದ್ರ, ಮಾಜಿ ಕೇಂದ್ರ ಸಚಿವ ರಾಜಶೇಖರನ್ ಸೇರಿದಂತೆ ನೂರಾರು ಕಾಂಗ್ರೆಸ್ ಕಾರ್ಯಕರ್ತರನ್ನು ಬಂಧಿಸಲಾಗಿದೆ.ಆರ್ ವಿ ದೇಶಪಾಂಡೆ, ಉಗ್ರಪ್ಪ ಮುಂತಾದವರನ್ನು ಬಸವೇಶ್ವರ ವೃತ್ತದಲ್ಲಿ ಬಂಧಿಸಲಾಯಿತು. 39390http://kannada.oneindia.com/img/2009/09/26-vidhanasoudha2.jpg571663siegeಕಾನೂನು ಸುವ್ಯವಸ್ಥೆ ಕಾಪಾಡಲು ನಿಷೇಧಾಜ್ಞೆ : ಸಿಎಂ/news/2009/09/26/yeddyurappa-acharya-defend-arrests.htmlಬೆಂಗಳೂರು, ಸೆ. 26 : ಕಾಂಗ್ರೆಸ್ ಪಕ್ಷದ ವಿಧಾನಸೌಧ ದಿಗ್ಬಂಧನ ಮತ್ತು ಪ್ರತಿಭಟನೆ ಆಡಳಿತ ಪಕ್ಷಕ್ಕೆ ತೀವ್ರ ಸಮಸ್ಯೆ ಉಂಟು ಮಾಡಿದೆ. ಬೆಂಗಳೂರು ನಗರದ ರಸ್ತೆ ಸಂಚಾರ ಸಂಪೂರ್ಣ ಹದಗೆಟ್ಟು ಹೋಗಿ ಜನಸಾಮಾನ್ಯರ ಕೆಂಗಣ್ಣಿಗೆ ಗುರಿಯಾಗಿರುವುದು ಒಂದಡೆಯಾದರೆ, ಸರಕಾರದ ವಿರುದ್ಧ ಪ್ರತಿಪಕ್ಷಗಳ ನಾಯಕರು ಕಾರುತ್ತಿರುವ ಕೆಂಡದಂತಹ ವಾಗ್ದಾಳಿಗಳು ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಆದರೆ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು 39396http://kannada.oneindia.com/img/2009/09/26-yeddyurappa-new2.jpg571663siegeಆಡುಗೋಡಿ ಪೊಲೀಸ್ ನಾಯಿ ಶೆಡ್ಡಿನಲ್ಲಿ ಕೈಪಡೆ/news/2009/09/26/congress-leaders-demand-speakers-presence.htmlಬೆಂಗಳೂರು, ಸೆ. 26 : ವಿಧಾನಸೌಧ ದಿಗ್ಬಂಧನಕ್ಕೆ ಸಂಬಂಧಿಸಿದಂತೆ ತಮ್ಮನ್ನು ಅಕ್ರಮವಾಗಿ ಬಂಧಿಸಿರುವ ಸರಕಾರದ ಕ್ರಮವನ್ನು ಖಂಡಿಸಿ ಕಾಂಗ್ರೆಸ್ ಪಕ್ಷದ ನಾಯಕರು ಜೈಲಿನಲ್ಲಿ ಆಹಾರ ಸೇವಿಸದೆ ಧರಣಿ ಆರಂಭಿಸಿದ್ದಾರೆ. ಆಡುಗೋಡೆಯ ಪೊಲೀಸ್ ಠಾಣೆ ಸಿಎಆರ್ ಮೈದಾನದ ನಾಯಿ ಶೆಡ್ (ಡಾಗ್ ಶೆಡ್)ನಲ್ಲಿ ಬಂಧಿಸಿಟ್ಟರುವುದು ಮಾನವ ಹಕ್ಕುಗಳ ಉಲ್ಲಂಘನೆಯಾಗಿದ್ದು, ಸರಕಾರದ ವಿರುದ್ಧ ಕಾನೂನು ಸಮರ ನಡೆಸುವುದಾಗಿ ಕಾಂಗ್ರೆಸ್ ಹೇಳಿದೆ.ವಿಧಾನಸೌಧಕ್ಕೆ 39397http://kannada.oneindia.com/img/2009/09/26-siddaramaiah3.jpg571663siegeರಸ್ತೆಯ ಮೇಲೆ ಶ್ರೀಸಾಮಾನ್ಯನ ದಿಗ್ಬಂಧನ!/news/2009/09/26/congress-bjp-jam-public-on-the-road.htmlಬೆಂಗಳೂರಿಗರಿಗೆ ಟ್ರಾಫಿಕ್ ಜಾಮ್ ಹೊಸದಲ್ಲ. ಒಂದು ಸಣ್ಣ ಮಳೆಯಾದರೂ ಸಾಕು ನಾಲ್ಕು ಮೈಲಿ ಉದ್ದ ವಾಹನಗಳ ಕ್ಯೂ ಎಲ್ಲೆಂದರಲ್ಲಿ ಕಂಡುಬರುತ್ತದೆ. ಅದರಲ್ಲೂ ರಾಜಕೀಯ ಪಕ್ಷಗಳ ಸಾಧನಾ ಸಮಾವೇಶಗಳು, ಪ್ರತಿಭಟನಾ ರ‌್ಯಾಲಿಗಳು, ಪಾಪ್ ಹಾಡುಗಾರರ ಸಂಗೀತ ಸಂಜೆಗಳು ಜರುಗಿದರಂತೂ ಮನೆ ಮುಟ್ಟುವ ಸಮಯ ಖಾತ್ರಿಯಿರುವುದಿಲ್ಲ. ಕಚೇರಿ ಸೇರುವ ತವಕ, ವಾಹನ ದಟ್ಟಣೆಯಿಂದಾಗುವ ವಾಯು ಮಾಲಿನ್ಯ, ದಟ್ಟಣೆ ಮಾಡುವವರ ಉಡಾಫೆ, 39398http://kannada.oneindia.com/img/2009/09/26-traffic-jam-bengaluru1.jpg37267congressಎಂಟು ಕ್ಷೇತ್ರಗಳಲ್ಲಿ ಜಯಭೇರಿ- ಯಡ್ಡಿ/news/2008/12/25/bjp-will-sweep-by-election-bsy-turuvekere.htmlತುರುವೇಕೆರೆ, ಡಿ.25: 'ಉಪ ಚುನಾವಣೆ ನಂತರ ಬಿಜೆಪಿ ಸರ್ಕಾರ ಕರ್ನಾಟದಲ್ಲಿ ಮತ್ತಷ್ಟು ಸುಭದ್ರವಾಗಲಿದೆ. ಮುಂದೆಂದೂ ಉಪಚುನಾವಣೆಗಳು ನಡೆಯುವ ಪರಿಸ್ಥಿತಿ ಉದ್ಭವಿಸುವುದಿಲ್ಲ. ಈ ಉಪ ಚುನಾವಣೆಯಲ್ಲಿ ಬಿಜೆಪಿ 8 ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸಿ ಸರ್ಕಾರ ಮತ್ತಷ್ಟು ಸ್ಥಿರವಾಗಲಿದೆ' ಎಂದು ಮುಖ್ಯ ಮಂತ್ರಿ ಬಿ.ಎಸ್.ಯಡಿಯೂರಪ್ಪ ಗುರುವಾರ ವಿಶ್ವಾಸ ವ್ಯಕ್ತಪಡಿಸಿದರು. ತುರುವೇಕೆರೆಯಲ್ಲಿ ಬಿಜೆಪಿ ಅಭ್ಯರ್ಥಿ ಪರ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಿದ್ದ 33706http://kannada.oneindia.com/img/2008/12/25-yediyurappa3e.jpg37267congressಅರಭಾವಿ ಬಾಲಚಂದ್ರ ಜಾರಕಿಹೊಳಿ ದಿಗ್ವಿಜಯ/news/2008/12/30/assembly-poll-bjp-wins-arabhavi-with-big-margin.htmlಬೆಳಗಾವಿ. ಡಿ. 30 : ಅಪರೇಷನ್ ಕಮಲದ ಮೂಲದ ಜೆಡಿಎಸ್ ಶಾಸಕ ಸ್ಝಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರ್ಪಡೆಯಾಗಿದ್ದ ಬಾಲಚಂದ್ರ ಜಾರಕಿಹೊಳಿ ಅವರು ಅರಭಾವಿ ವಿಧಾನಸಭೆ ಕ್ಷೇತ್ರದಲ್ಲಿ ಜಯಭೇರಿ ಬಾರಿಸಿದ್ದಾರೆ. ಈ ಮೂಲಕ ಅವರು ಅರಭಾವಿ ಕ್ಷೇತ್ರದಲ್ಲಿ ಸತತ ಮೂರು ಬಾರಿ ಆಯ್ಕೆಯಾಗುವುದರೊಂದಿಗೆ ಹ್ಯಾಟ್ರಿಕ್ ಜಯ ಸಾಧಿಸಿದಂತಾಗಿದೆ. ಕಾರವಾರದಲ್ಲಿ ಆನಂದ ಅಸ್ನೋಟಿಕರ್, ದೇವದುರ್ಗದಲ್ಲಿ ಶಿವನಗೌಡ ನಾಯಕ ಹಾಗೂ 33761http://kannada.oneindia.com/img/2008/12/30-balchandra-jarkiholi1e.jpg37267congressಹುಕ್ಕೇರಿ: ಬಿಜೆಪಿಯ ಕತ್ತಿ ಭರ್ಜರಿ ಜಯ/news/2008/12/30/hukkeri-by-election-umesh-katti-bjp-victory.htmlಬೆಂಗಳೂರು. ಡಿ. 30 : ಅರಭಾವಿಯಲ್ಲಿ ಬಿಜೆಪಿ ಗೆಲುವು ಸಾಧಿಸಿದ ಬೆನ್ನಲ್ಲೇ ಹುಕ್ಕೇರಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಉಮೇಶ ಕತ್ತಿ 67,689 ಮತಗಳ ಅಧಿಕ ಮತಗಳ ಅಂತರದಿಂದ ಜಯಗಳಿಸಿದ್ದಾರೆ. ಹುಕ್ಕೇರಿ ಕ್ಷೇತ್ರದಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷಗಳು ಧೂಳಿಪಟವಾಗಿದ್ದು, ಉಮೇಶ್ ಕತ್ತಿ ಮತ್ತೆ ತನ್ನ ಕ್ಷೇತ್ರವನ್ನು ಉಳಿಸಿಕೊಂಡಿದ್ದಾರೆ. ಕಾರವಾರದಲ್ಲಿ ಆನಂದ ಅಸ್ನೋಟಿಕರ್, ದೇವದುರ್ಗದಲ್ಲಿ ಶಿವನಗೌಡ ನಾಯಕ ಗೆಲುವಿನ 33762http://kannada.oneindia.com/img/2008/12/30-umesh-katti1e.jpg37267congressಕಮಲ ಪಕ್ಷಕ್ಕೆ ಪ್ಲೇವಿನ್ ಲಾಟರಿ ಹೊಡಿತು/news/2008/12/30/bjp-victory-karwar-doddaballapur-devadurga-by-poll.htmlಬೆಂಗಳೂರು, ಡಿ. 30 : ಬಿಜೆಪಿಯ ಗೆಲುವಿನ ಅಭಿಯಾನ ಮುಂದುವರಿದಿದ್ದು, ಕಾರವಾರ, ದೊಡ್ಡಬಳ್ಳಾಪುರ ಹಾಗೂ ದೇವದುರ್ಗ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗಳಾದ ಸಚಿವ ಆನಂದ ಅಸ್ನೋಟಿಕರ್, ಶಿವನಗೌಡ ನಾಯಕ ಹಾಗೂ ಜೆ ನರಸಿಂಹಸ್ವಾಮಿ ಭಾರಿ ಅಂತರದಿಂದ ಗೆಲುವು ಸಾಧಿಸಿದ್ದಾರೆ.ಒಂದು ಮಾತಿಗೆ ದೇವದುರ್ಗದಲ್ಲಿ ಗೆಲುವು ಸಾಧಿಸುವ ಅಭ್ಯರ್ಥಿಗಳು ಸಂಪುಟ ಸ್ಥಾನ ಗ್ಯಾರಂಟಿ ಎನ್ನುವ ಮಾತಿದೆ. ಆಪರೇಷನ್ ಕಮಲದ ಮೂಲಕ ಬಿಜೆಪಿ 33763http://kannada.oneindia.com/img/2008/12/30-anand-asnotikar1e.jpg37267congressಗೌಡರ ಮಾನ ಕಾಪಾಡಿದ ಸೊಸೆ ಅನಿತಾ/news/2008/12/30/anitha-kumarswamy-trounce-chennigappa-in-madhugiri.htmlತುಮಕೂರು, ಡಿ. 30 : ಒಂದಡೆ ಆಡಳಿತ ಪಕ್ಷ ಬಿಜೆಪಿಯ ಆನೆಬಲ, ಇನ್ನೊಂದೆಡೆ ಕಾಂಗ್ರೆಸ್ ಪಕ್ಷದ ಅಡ್ಡಗಾಲು. ಇವೆರಡರ ನಡುವೆ ಜಿಗಿದುಬಂದ ಕುದುರೆ ಜೆಡಿಎಸ್. ಚುನಾವಣಾ ಪಗಡೆಪಣಕ್ಕಿಟ್ಟ ದ್ರೌಪದಿ ಎಂಬ ಅಪಹಾಸ್ಯದ ಮಾತುಗಳನ್ನು ನುಂಗಿಕೊಂಡೇ ಮಧುಗಿರಿ ಕೋಟೆಯನ್ನು ಭೇದಿಸಿದವರು ಅನಿತಾ ಕುಮಾರಸ್ವಾಮಿ. ರಾಜಕೀಯ ಚದುರಂಗದಾಟದಲ್ಲಿ ಅಂತಿಮವಾಗಿ ಅವರು ಮಾವ ದೇವೇಗೌಡರು ಮತ್ತು ಗಂಡ ಕುಮಾರಸ್ವಾಮಿಯ ಮಾನ 33775http://kannada.oneindia.com/img/2008/12/30-anita-kumaraswamy1e.jpg27815bjpಅರ್ಧ ಮೀಸೆ ಪಣಕ್ಕಿಟ್ಟ ಜಮೀರ್ ಅಹ್ಮದ್ /news/2008/12/24/bjp-wont-encore-bet-my-mustache-zameer-ahmed.htmlದೊಡ್ಡಬಳ್ಳಾಪುರ, ಡಿ.24: ಎಲ್ಲಾ ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಅಸಾಧ್ಯ. ಆ ತರಹದ ಕನಸು ಕಾಣುತ್ತಿದ್ದರೆ ನಿರಾಶೆ ಖಂಡಿತ. ಒಂದು ವೇಳೆ ಬಿಜೆಪಿ ಏನಾದರೂ ಎಲ್ಲೆಡೆ ಗೆಲುವು ಸಾಧಿಸಿದರೆ ನಾನು ನನ್ನ ಅರ್ಧ ಮೀಸೆ ಬೋಳಿಸಿಕೊಳ್ಳುತ್ತೇನೆ ಹಾಗೂ ಸಿಎಂ ಮನೆ ವಾಚ್ ಮನ್ ಆಗುತ್ತೇನೆ ಎಂದು ಬೆಂಗಳೂರು ಚಾಮರಾಜಪೇಟೆ ಶಾಸಕ, ಜೆಡಿಎಸ್ ನ ಮುಖಂಡ ಜಮೀರ್ ಅಹಮದ್ 33690http://kannada.oneindia.com/img/2008/12/24-zameer-ahmed1.jpg27815bjpಎಂಟು ಕ್ಷೇತ್ರಗಳಲ್ಲಿ ಜಯಭೇರಿ- ಯಡ್ಡಿ/news/2008/12/25/bjp-will-sweep-by-election-bsy-turuvekere.htmlತುರುವೇಕೆರೆ, ಡಿ.25: 'ಉಪ ಚುನಾವಣೆ ನಂತರ ಬಿಜೆಪಿ ಸರ್ಕಾರ ಕರ್ನಾಟದಲ್ಲಿ ಮತ್ತಷ್ಟು ಸುಭದ್ರವಾಗಲಿದೆ. ಮುಂದೆಂದೂ ಉಪಚುನಾವಣೆಗಳು ನಡೆಯುವ ಪರಿಸ್ಥಿತಿ ಉದ್ಭವಿಸುವುದಿಲ್ಲ. ಈ ಉಪ ಚುನಾವಣೆಯಲ್ಲಿ ಬಿಜೆಪಿ 8 ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸಿ ಸರ್ಕಾರ ಮತ್ತಷ್ಟು ಸ್ಥಿರವಾಗಲಿದೆ' ಎಂದು ಮುಖ್ಯ ಮಂತ್ರಿ ಬಿ.ಎಸ್.ಯಡಿಯೂರಪ್ಪ ಗುರುವಾರ ವಿಶ್ವಾಸ ವ್ಯಕ್ತಪಡಿಸಿದರು. ತುರುವೇಕೆರೆಯಲ್ಲಿ ಬಿಜೆಪಿ ಅಭ್ಯರ್ಥಿ ಪರ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಿದ್ದ 33706http://kannada.oneindia.com/img/2008/12/25-yediyurappa3e.jpg27815bjpಅರಭಾವಿ ಬಾಲಚಂದ್ರ ಜಾರಕಿಹೊಳಿ ದಿಗ್ವಿಜಯ/news/2008/12/30/assembly-poll-bjp-wins-arabhavi-with-big-margin.htmlಬೆಳಗಾವಿ. ಡಿ. 30 : ಅಪರೇಷನ್ ಕಮಲದ ಮೂಲದ ಜೆಡಿಎಸ್ ಶಾಸಕ ಸ್ಝಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರ್ಪಡೆಯಾಗಿದ್ದ ಬಾಲಚಂದ್ರ ಜಾರಕಿಹೊಳಿ ಅವರು ಅರಭಾವಿ ವಿಧಾನಸಭೆ ಕ್ಷೇತ್ರದಲ್ಲಿ ಜಯಭೇರಿ ಬಾರಿಸಿದ್ದಾರೆ. ಈ ಮೂಲಕ ಅವರು ಅರಭಾವಿ ಕ್ಷೇತ್ರದಲ್ಲಿ ಸತತ ಮೂರು ಬಾರಿ ಆಯ್ಕೆಯಾಗುವುದರೊಂದಿಗೆ ಹ್ಯಾಟ್ರಿಕ್ ಜಯ ಸಾಧಿಸಿದಂತಾಗಿದೆ. ಕಾರವಾರದಲ್ಲಿ ಆನಂದ ಅಸ್ನೋಟಿಕರ್, ದೇವದುರ್ಗದಲ್ಲಿ ಶಿವನಗೌಡ ನಾಯಕ ಹಾಗೂ 33761http://kannada.oneindia.com/img/2008/12/30-balchandra-jarkiholi1e.jpg27815bjpಹುಕ್ಕೇರಿ: ಬಿಜೆಪಿಯ ಕತ್ತಿ ಭರ್ಜರಿ ಜಯ/news/2008/12/30/hukkeri-by-election-umesh-katti-bjp-victory.htmlಬೆಂಗಳೂರು. ಡಿ. 30 : ಅರಭಾವಿಯಲ್ಲಿ ಬಿಜೆಪಿ ಗೆಲುವು ಸಾಧಿಸಿದ ಬೆನ್ನಲ್ಲೇ ಹುಕ್ಕೇರಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಉಮೇಶ ಕತ್ತಿ 67,689 ಮತಗಳ ಅಧಿಕ ಮತಗಳ ಅಂತರದಿಂದ ಜಯಗಳಿಸಿದ್ದಾರೆ. ಹುಕ್ಕೇರಿ ಕ್ಷೇತ್ರದಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷಗಳು ಧೂಳಿಪಟವಾಗಿದ್ದು, ಉಮೇಶ್ ಕತ್ತಿ ಮತ್ತೆ ತನ್ನ ಕ್ಷೇತ್ರವನ್ನು ಉಳಿಸಿಕೊಂಡಿದ್ದಾರೆ. ಕಾರವಾರದಲ್ಲಿ ಆನಂದ ಅಸ್ನೋಟಿಕರ್, ದೇವದುರ್ಗದಲ್ಲಿ ಶಿವನಗೌಡ ನಾಯಕ ಗೆಲುವಿನ 33762http://kannada.oneindia.com/img/2008/12/30-umesh-katti1e.jpg27815bjpಕಮಲ ಪಕ್ಷಕ್ಕೆ ಪ್ಲೇವಿನ್ ಲಾಟರಿ ಹೊಡಿತು/news/2008/12/30/bjp-victory-karwar-doddaballapur-devadurga-by-poll.htmlಬೆಂಗಳೂರು, ಡಿ. 30 : ಬಿಜೆಪಿಯ ಗೆಲುವಿನ ಅಭಿಯಾನ ಮುಂದುವರಿದಿದ್ದು, ಕಾರವಾರ, ದೊಡ್ಡಬಳ್ಳಾಪುರ ಹಾಗೂ ದೇವದುರ್ಗ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗಳಾದ ಸಚಿವ ಆನಂದ ಅಸ್ನೋಟಿಕರ್, ಶಿವನಗೌಡ ನಾಯಕ ಹಾಗೂ ಜೆ ನರಸಿಂಹಸ್ವಾಮಿ ಭಾರಿ ಅಂತರದಿಂದ ಗೆಲುವು ಸಾಧಿಸಿದ್ದಾರೆ.ಒಂದು ಮಾತಿಗೆ ದೇವದುರ್ಗದಲ್ಲಿ ಗೆಲುವು ಸಾಧಿಸುವ ಅಭ್ಯರ್ಥಿಗಳು ಸಂಪುಟ ಸ್ಥಾನ ಗ್ಯಾರಂಟಿ ಎನ್ನುವ ಮಾತಿದೆ. ಆಪರೇಷನ್ ಕಮಲದ ಮೂಲಕ ಬಿಜೆಪಿ 33763http://kannada.oneindia.com/img/2008/12/30-anand-asnotikar1e.jpgnews"> ರಸ್ತೆಯ ಮೇಲೆ ಶ್ರೀಸಾಮಾನ್ಯನ ದಿಗ್ಬಂಧನ! | Siege | Vidhanasoudha | Traffic Jam | Congress | BJP | Siddaramaiah | Yeddyurappa - ರಸ್ತೆಯ ಮೇಲೆ ಶ್ರೀಸಾಮಾನ್ಯನ ದಿಗ್ಬಂಧನ! - Kannada Oneindia

ರಸ್ತೆಯ ಮೇಲೆ ಶ್ರೀಸಾಮಾನ್ಯನ ದಿಗ್ಬಂಧನ!

Congress and BJP jam public on road
ಬೆಂಗಳೂರಿಗರಿಗೆ ಟ್ರಾಫಿಕ್ ಜಾಮ್ ಹೊಸದಲ್ಲ. ಒಂದು ಸಣ್ಣ ಮಳೆಯಾದರೂ ಸಾಕು ನಾಲ್ಕು ಮೈಲಿ ಉದ್ದ ವಾಹನಗಳ ಕ್ಯೂ ಎಲ್ಲೆಂದರಲ್ಲಿ ಕಂಡುಬರುತ್ತದೆ. ಅದರಲ್ಲೂ ರಾಜಕೀಯ ಪಕ್ಷಗಳ ಸಾಧನಾ ಸಮಾವೇಶಗಳು, ಪ್ರತಿಭಟನಾ ರ‌್ಯಾಲಿಗಳು, ಪಾಪ್ ಹಾಡುಗಾರರ ಸಂಗೀತ ಸಂಜೆಗಳು ಜರುಗಿದರಂತೂ ಮನೆ ಮುಟ್ಟುವ ಸಮಯ ಖಾತ್ರಿಯಿರುವುದಿಲ್ಲ.

ಕಚೇರಿ ಸೇರುವ ತವಕ, ವಾಹನ ದಟ್ಟಣೆಯಿಂದಾಗುವ ವಾಯು ಮಾಲಿನ್ಯ, ದಟ್ಟಣೆ ಮಾಡುವವರ ಉಡಾಫೆ, ಪೊಲೀಸರ ಅಸಹಕಾರ, ರಾಜಕೀಯ ಪಕ್ಷಗಳ ನಿರ್ಲಕ್ಷ್ಯ ಆ ಸಮಯದಮಟ್ಟಿಗೆ ರಸ್ತೆಯ ಮೇಲೆ ನಿಂತವರ ಬದುಕನ್ನು ನರಕ ಮಾಡಿಬಿಟ್ಟಿರುತ್ತದೆ. ಅವರ ಗೋಳನ್ನು ಕೇಳುವವರಿರುವುದಿಲ್ಲ, ಕೂಗು ಯಾರನ್ನೂ ಮುಟ್ಟುವುದಿಲ್ಲ, ಗೊಣಗಾಟ ಬದಿಯ ಚಾಲಕನನ್ನೂ ದಾಟಿರುವುದಿಲ್ಲ. ಒಟ್ಟಿನಲ್ಲಿ ಟ್ರಾಫಿಕ್ಕಿನಲ್ಲಿ ಸಿಕ್ಕಿಕೊಂಡವರ ಗೊಣಗಾಟಗಳು ಗಾಳಿಯಲ್ಲಿ ಗುದ್ದಿ ಮೈಕೈ ನೋವು ಮಾಡಿಕೊಂಡಂತೆ.

ಇಂಥದೇ ನರಕಯಾತನೆ ಶನಿವಾರ ಸೆಪ್ಟೆಂಬರ್ 26ರಂದು ವಿಧಾನಸೌಧದ ಸುತ್ತಮುತ್ತ, ಇಂಡಿಯನ್ ಎಕ್ಸ್ ಪ್ರೆಸ್, ಕ್ವೀನ್ಸ್ ರಸ್ತೆಯ ಬಳಿ, ಚಿನ್ನಸ್ವಾಮಿ ಸ್ಟೇಡಿಯಂ ಹತ್ತಿರ ವಾಹನ ಚಾಲಕರು ಅನುಭವಿಸಿದ್ದಾರೆ. ಬೆಳಿಗ್ಗೆಯಿಂದಲೇ ಪ್ರತಿಭಟನೆ, ಬಂಧನದ ಪ್ರಹಸನ ಪ್ರಾರಂಭವಾಗಿದ್ದರಿಂದ ನೂರಾರು ಜನ ತಲುಪಬೇಕಾದ ಸ್ಥಳ ಸಮಯದಲ್ಲಿ ತಲುಪಿಲ್ಲ. ಅವರಲ್ಲಿ ಅನೇಕರು ಆಸ್ಪತ್ರೆಗೆ ಹೋಗುವವರಿರುತ್ತಾರೆ, ಬ್ಯಾಂಕಿಗೆ ಹಣ ಕಟ್ಟುವವರಿರುತ್ತಾರೆ, ವಿಮಾನ ನಿಲ್ದಾಣ ತಲುಪುವವರಿರುತ್ತಾರೆ. ಅಂಬುಲನ್ಸ್ ಗಳು ಒಂದೇ ಸವನೆ ಸೈರನ್ ಮೊಳಗಿಸುತ್ತಿದ್ದರೂ ಬದಿಗೆ ಸರಿದು ಜಾಗ ಬಿಡುವ ಸ್ಥಿತಿಯಲ್ಲಿ ಚಾಲಕರು ಇರಲಿಲ್ಲ. ಇವರ್ಯಾರರ ಬಗ್ಗೆ ಪ್ರತಿಭಟನಕಾರರಾಗಲಿ, ಸರಕಾರವಾಗಲಿ ತಲೆಕೆಡಿಸಿಕೊಂಡಿರಲಿಲ್ಲ. ಪರಿಸ್ಥಿತಿಯನ್ನು ಮತ್ತಷ್ಟು ಬಿಗಡಾಯಿಸಿದ್ದು ಈ ಸುತ್ತಲಿನ ಪ್ರದೇಶದ ವಾಹನದ ಮಾರ್ಗವನ್ನು ಕೂಡ ಪೊಲೀಸರು ಬದಲಾಯಿಸದಿರುವುದು.

ಈ ವಾಹನ ದಟ್ಟಣೆಗೆ, ಸಾರ್ವಜನಿಕರಿಗಾದ ಅನನುಕೂಲಕ್ಕೆ ತಾವು ಕಾರಣವೇ ಅಲ್ಲ ಅಂತ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಬೊಂಬಡ ಹೊಡೆದುಕೊಳ್ಳುತ್ತಿದ್ದರು. ಉಗ್ರರಿಗಿಂತ ಉಗ್ರರಾಗಿದ್ದ ಉಗ್ರಪ್ಪ ಮತ್ತು ಕೂಗಾಡುವುದರಲ್ಲಿ ನಿಸ್ಸೀಮರಾದ ತೇಜಸ್ವಿನಿಯವರು ತಮ್ಮ ಎಂದಿನ 'ಸಹಜ' ಕಾರ್ಯದಲ್ಲಿ ತೊಡಗಿದ್ದರು. ಇದನ್ನೆಲ್ಲ ಗಮನಿಸಬೇಕಾದ ಗೃಹಮಂತ್ರಿ ವಿಎಸ್ ಆಚಾರ್ಯರು ತಣ್ಣಗೆ ಎಸಿ ರೂಮಿನಲ್ಲಿ ಕುಳಿತು, ಕಾಂಗ್ರೆಸ್ ನಾಯಕರ ಬಂಧನವನ್ನು ಸಮರ್ಥಿಸಿಕೊಳ್ಳುತ್ತಿದ್ದರು. ವಿಧಾನಸೌಧ ಸುತ್ತಮುತ್ತ ಕಾಂಗ್ರೆಸ್ ಕಾರ್ಯಕರ್ತರಿರಲಿ ಮಾಧ್ಯಮದವರನ್ನೂ ಹತ್ತಿರ ಸುಳಿಯಲು ಸರಕಾರ ಬಿಟ್ಟಿಲ್ಲ. ಗಂಡ ಹೆಂಡಿರ ಜಗಳದಲಿ ಕೂಸು ಬಡವಾಯ್ತು ಎನ್ನುವಂತೆ ಎರಡು ರಾಜಕೀಯ ಪಕ್ಷಗಳ ಬಡಿದಾಟದಲಿ ಬಡವಾಗಿರುವುದು ಅಮಾಯಕ ಸಾರ್ವಜನಿಕರು.

ಕಾಂಗ್ರೆಸ್ ಹಮ್ಮಿಕೊಂಡಿದ್ದ ವಿಧಾನಸೌಧ ದಿಗ್ಬಂಧನ ಕಾರ್ಯಕ್ರಮಕ್ಕೆ ಮೊದಲೇ ಅಡ್ಡಗಾಲು ಹಾಕಿದ ಬಿಜೆಪಿ ಸರಕಾರ ಕಾಂಗ್ರೆಸ್ ನ ಪ್ರತಿಭಟನಾ ಅಸ್ತ್ರವನ್ನು ಬತ್ತಳಿಕೆಯಿಂದ ಹೊರಬರುವ ಮುನ್ನವೇ ನಿಷ್ಕ್ರಿಯ ಮಾಡಿಬಿಟ್ಟಿತು. ವಿರೋಧ ಪಕ್ಷದ ಮೂಲಭೂತ ಹಕ್ಕಾದ ಆಡಳಿತ ಪಕ್ಷದ ವಿರುದ್ಧದ ಪ್ರತಿಭಟನಾ ಹಕ್ಕನ್ನು ಬಳಸುವ ಮೊದಲೇ ಕಸಿದುಕೊಂಡಿತು. ಕಾಂಗ್ರೆಸ್ ನಾಯಕರು ವಿಧಾನಸೌಧ ಮೆಟ್ಟಿಲು ಹತ್ತುವ ಮೊದಲೇ ಅವರನ್ನು ಜೈಲಿಗೆ ತಳ್ಳಿಬಿಟ್ಟಿತು.

ಭಾರತೀಯ ಜನತಾ ಪಕ್ಷ ಕೂಡ ಅನೇಕಾರು ವರ್ಷಗಳಿಂದ ವಿರೋಧ ಪಕ್ಷಗಳ ಸೀಟಿನಲ್ಲಿ ಕುಳಿತಿದೆ. ವಿಧಾನಸೌಧದ ಮೈಲ್ಛಾವಣಿ ಕಿತ್ತುಹೋಗುವಂತೆ ಆಡಳಿತ ಪಕ್ಷದ ವಿರುದ್ಧ ಕಿರುಚಾಡಿದೆ. ಸಾಕ್ಷಾತ್ ಮುಖ್ಯಮಂತ್ರಿಯಾಗಿರುವ ಯಡಿಯೂರಪ್ಪನವರು ಕೂಡ ಪ್ರತಿಭಟಿಸುವ ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ. ಆದರೆ, ಇಂದು ಬಿಜೆಪಿ ಸರಕಾರ ತೆಗೆದುಕೊಂಡ ಕ್ರಮ ಪ್ರಜಾಪ್ರಭುತ್ವಕ್ಕೆ ಇಟ್ಟ ಕಪ್ಪುಚುಕ್ಕೆ.

ದಿಗ್ಬಂಧನ ಹಿನ್ನೆಲೆಯಲ್ಲಿ ವಿಧಾನಸೌಧದ ಸುತ್ತಮುತ್ತ ಅಪರಾಧ ಪ್ರಕ್ರಿಯಾ ಸಂಹಿತೆಯ ಸೆಕ್ಷನ್ 144ದ ಅಡಿಯಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿತ್ತು. ಕಾಂಗ್ರೆಸ್ ಇದನ್ನು ಉಲ್ಲಂಘಿಸಿ ಪ್ರತಿಭಟನೆಗೆ ಮುಂದಾದಾಗ ಗೊಂದಲದ ವಾತಾವರಣ ಉಂಟಾಯಿತು. ಇದರಿಂದ ಕಾರ್ಯಕರ್ತರು ಪ್ರತಿಭಟನೆಗೆ ಮುಂದಾದಾಗ ಅವರು ನಿಂತಲ್ಲೇ ಪೊಲೀಸರು ದಾಳಿಯಿಟ್ಟು ಪ್ರತಿಭಟನಾಕಾರರನ್ನು ಮುಂದೆ ಹೋಗಲು ಬಿಟ್ಟಿಲ್ಲ. ಇದರಿಂದ ಸಹಜವಾಗಿ ಟ್ರಾಫಿಕ್ ಸಮಸ್ಯೆ ತಲೆದೋರಿದೆ. ಕ್ವೀನ್ಸ್ ರಸ್ತೆ, ಇಂಡಿಯನ್ ಎಕ್ಸ್ ಪ್ರೆಸ್ ವೃತ್ತ, ಬಸವೇಶ್ವರ ವೃತ್ತಗಳಲ್ಲಿಯೇ ಕಾಂಗ್ರೆಸ್ ಮುಖಂಡರನ್ನು ತಡೆಯಲಾಗಿದೆ.

ನೂರಾರು ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದರೂ ನಾಯಕ ಮುಂದೆ ಅಕ್ಷರಶಃ ಮೊಳಕಾಲೂರಿದವರು ಪೊಲೀಸ್ ಅಧಿಕಾರಿಗಳು. ಸರಕಾರದ ಆಜ್ಞೆಯನ್ನು ಪಾಲನೆ ಮಾಡುತ್ತಿದ್ದ ಪೊಲೀಸ್ ಅಧಿಕಾರಿಗಳ ಮಾತನ್ನು ಕೇಳುವ ಸ್ಥಿತಿಯಲ್ಲಿ ಸಿದ್ದರಾಮಯ್ಯ ಮತ್ತು ಪಟಾಲಂ ಇರಲಿಲ್ಲ. 'ಸಾರ್, ಸಾರ್, ಪ್ಲೀಸ್, ಮುಂದೆ ಹೋಗಬೇಡಿ' ಅಂತ ಅಂಗಲಾಚುತ್ತಿದ್ದರೂ, 'ರೀ ನೀವು ಮುಂದೊಂದು ದಿನ ನಮ್ಮ ಜೊತೆ ಕೆಲಸ ಮಾಡೇ ಮಾಡಬೇಕಾಗುತ್ತದೆ' ಎಂದು ಸಿದ್ದರಾಮಯ್ಯ ಗುಡುಗಿದ್ದಾರೆ.

ಗಂಡಸರು ಹೆಂಗಸರೆನ್ನದೇ ಎಲ್ಲರನ್ನೂ ಬಂಧಿಸಿರುವ ಪೊಲೀಸರು ಆಡುಗೋಡಿಯಲ್ಲಿರುವ ಪೊಲೀಸ್ ಶ್ವಾನದಳವಿರುವ ಜಾಗದಲ್ಲಿ ಶೆಡ್ ನಲ್ಲಿ ಕೂಡಿಟ್ಟಿರುವುದು ಯಾವ ಕಾರಣಕ್ಕೋ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರವೇ ಉತ್ತರಿಸಬೇಕು. ನಾಯಿಗಳ ಜೊತೆ ನಮ್ಮನ್ನೂ ಇರಿಸಿ ನಾಯಿಪಾಡು ಮಾಡಿದ್ದಾರೆ ಎಂದು ಡಿಕೆಶಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆದರೆ, ನಿಜಕ್ಕೂ ಇವರಿಬ್ಬರ ಕಿತ್ತಾಟದಲಿ ನಾಯಿಪಾಡು ಅನುಭವಿಸುತ್ತಿರುವುದು ಸಾರ್ವಜನಿಕರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+