ರಸ್ತೆಯ ಮೇಲೆ ಶ್ರೀಸಾಮಾನ್ಯನ ದಿಗ್ಬಂಧನ!

ಕಚೇರಿ ಸೇರುವ ತವಕ, ವಾಹನ ದಟ್ಟಣೆಯಿಂದಾಗುವ ವಾಯು ಮಾಲಿನ್ಯ, ದಟ್ಟಣೆ ಮಾಡುವವರ ಉಡಾಫೆ, ಪೊಲೀಸರ ಅಸಹಕಾರ, ರಾಜಕೀಯ ಪಕ್ಷಗಳ ನಿರ್ಲಕ್ಷ್ಯ ಆ ಸಮಯದಮಟ್ಟಿಗೆ ರಸ್ತೆಯ ಮೇಲೆ ನಿಂತವರ ಬದುಕನ್ನು ನರಕ ಮಾಡಿಬಿಟ್ಟಿರುತ್ತದೆ. ಅವರ ಗೋಳನ್ನು ಕೇಳುವವರಿರುವುದಿಲ್ಲ, ಕೂಗು ಯಾರನ್ನೂ ಮುಟ್ಟುವುದಿಲ್ಲ, ಗೊಣಗಾಟ ಬದಿಯ ಚಾಲಕನನ್ನೂ ದಾಟಿರುವುದಿಲ್ಲ. ಒಟ್ಟಿನಲ್ಲಿ ಟ್ರಾಫಿಕ್ಕಿನಲ್ಲಿ ಸಿಕ್ಕಿಕೊಂಡವರ ಗೊಣಗಾಟಗಳು ಗಾಳಿಯಲ್ಲಿ ಗುದ್ದಿ ಮೈಕೈ ನೋವು ಮಾಡಿಕೊಂಡಂತೆ.
ಇಂಥದೇ ನರಕಯಾತನೆ ಶನಿವಾರ ಸೆಪ್ಟೆಂಬರ್ 26ರಂದು ವಿಧಾನಸೌಧದ ಸುತ್ತಮುತ್ತ, ಇಂಡಿಯನ್ ಎಕ್ಸ್ ಪ್ರೆಸ್, ಕ್ವೀನ್ಸ್ ರಸ್ತೆಯ ಬಳಿ, ಚಿನ್ನಸ್ವಾಮಿ ಸ್ಟೇಡಿಯಂ ಹತ್ತಿರ ವಾಹನ ಚಾಲಕರು ಅನುಭವಿಸಿದ್ದಾರೆ. ಬೆಳಿಗ್ಗೆಯಿಂದಲೇ ಪ್ರತಿಭಟನೆ, ಬಂಧನದ ಪ್ರಹಸನ ಪ್ರಾರಂಭವಾಗಿದ್ದರಿಂದ ನೂರಾರು ಜನ ತಲುಪಬೇಕಾದ ಸ್ಥಳ ಸಮಯದಲ್ಲಿ ತಲುಪಿಲ್ಲ. ಅವರಲ್ಲಿ ಅನೇಕರು ಆಸ್ಪತ್ರೆಗೆ ಹೋಗುವವರಿರುತ್ತಾರೆ, ಬ್ಯಾಂಕಿಗೆ ಹಣ ಕಟ್ಟುವವರಿರುತ್ತಾರೆ, ವಿಮಾನ ನಿಲ್ದಾಣ ತಲುಪುವವರಿರುತ್ತಾರೆ. ಅಂಬುಲನ್ಸ್ ಗಳು ಒಂದೇ ಸವನೆ ಸೈರನ್ ಮೊಳಗಿಸುತ್ತಿದ್ದರೂ ಬದಿಗೆ ಸರಿದು ಜಾಗ ಬಿಡುವ ಸ್ಥಿತಿಯಲ್ಲಿ ಚಾಲಕರು ಇರಲಿಲ್ಲ. ಇವರ್ಯಾರರ ಬಗ್ಗೆ ಪ್ರತಿಭಟನಕಾರರಾಗಲಿ, ಸರಕಾರವಾಗಲಿ ತಲೆಕೆಡಿಸಿಕೊಂಡಿರಲಿಲ್ಲ. ಪರಿಸ್ಥಿತಿಯನ್ನು ಮತ್ತಷ್ಟು ಬಿಗಡಾಯಿಸಿದ್ದು ಈ ಸುತ್ತಲಿನ ಪ್ರದೇಶದ ವಾಹನದ ಮಾರ್ಗವನ್ನು ಕೂಡ ಪೊಲೀಸರು ಬದಲಾಯಿಸದಿರುವುದು.
ಈ ವಾಹನ ದಟ್ಟಣೆಗೆ, ಸಾರ್ವಜನಿಕರಿಗಾದ ಅನನುಕೂಲಕ್ಕೆ ತಾವು ಕಾರಣವೇ ಅಲ್ಲ ಅಂತ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಬೊಂಬಡ ಹೊಡೆದುಕೊಳ್ಳುತ್ತಿದ್ದರು. ಉಗ್ರರಿಗಿಂತ ಉಗ್ರರಾಗಿದ್ದ ಉಗ್ರಪ್ಪ ಮತ್ತು ಕೂಗಾಡುವುದರಲ್ಲಿ ನಿಸ್ಸೀಮರಾದ ತೇಜಸ್ವಿನಿಯವರು ತಮ್ಮ ಎಂದಿನ 'ಸಹಜ' ಕಾರ್ಯದಲ್ಲಿ ತೊಡಗಿದ್ದರು. ಇದನ್ನೆಲ್ಲ ಗಮನಿಸಬೇಕಾದ ಗೃಹಮಂತ್ರಿ ವಿಎಸ್ ಆಚಾರ್ಯರು ತಣ್ಣಗೆ ಎಸಿ ರೂಮಿನಲ್ಲಿ ಕುಳಿತು, ಕಾಂಗ್ರೆಸ್ ನಾಯಕರ ಬಂಧನವನ್ನು ಸಮರ್ಥಿಸಿಕೊಳ್ಳುತ್ತಿದ್ದರು. ವಿಧಾನಸೌಧ ಸುತ್ತಮುತ್ತ ಕಾಂಗ್ರೆಸ್ ಕಾರ್ಯಕರ್ತರಿರಲಿ ಮಾಧ್ಯಮದವರನ್ನೂ ಹತ್ತಿರ ಸುಳಿಯಲು ಸರಕಾರ ಬಿಟ್ಟಿಲ್ಲ. ಗಂಡ ಹೆಂಡಿರ ಜಗಳದಲಿ ಕೂಸು ಬಡವಾಯ್ತು ಎನ್ನುವಂತೆ ಎರಡು ರಾಜಕೀಯ ಪಕ್ಷಗಳ ಬಡಿದಾಟದಲಿ ಬಡವಾಗಿರುವುದು ಅಮಾಯಕ ಸಾರ್ವಜನಿಕರು.
ಕಾಂಗ್ರೆಸ್ ಹಮ್ಮಿಕೊಂಡಿದ್ದ ವಿಧಾನಸೌಧ ದಿಗ್ಬಂಧನ ಕಾರ್ಯಕ್ರಮಕ್ಕೆ ಮೊದಲೇ ಅಡ್ಡಗಾಲು ಹಾಕಿದ ಬಿಜೆಪಿ ಸರಕಾರ ಕಾಂಗ್ರೆಸ್ ನ ಪ್ರತಿಭಟನಾ ಅಸ್ತ್ರವನ್ನು ಬತ್ತಳಿಕೆಯಿಂದ ಹೊರಬರುವ ಮುನ್ನವೇ ನಿಷ್ಕ್ರಿಯ ಮಾಡಿಬಿಟ್ಟಿತು. ವಿರೋಧ ಪಕ್ಷದ ಮೂಲಭೂತ ಹಕ್ಕಾದ ಆಡಳಿತ ಪಕ್ಷದ ವಿರುದ್ಧದ ಪ್ರತಿಭಟನಾ ಹಕ್ಕನ್ನು ಬಳಸುವ ಮೊದಲೇ ಕಸಿದುಕೊಂಡಿತು. ಕಾಂಗ್ರೆಸ್ ನಾಯಕರು ವಿಧಾನಸೌಧ ಮೆಟ್ಟಿಲು ಹತ್ತುವ ಮೊದಲೇ ಅವರನ್ನು ಜೈಲಿಗೆ ತಳ್ಳಿಬಿಟ್ಟಿತು.
ಭಾರತೀಯ ಜನತಾ ಪಕ್ಷ ಕೂಡ ಅನೇಕಾರು ವರ್ಷಗಳಿಂದ ವಿರೋಧ ಪಕ್ಷಗಳ ಸೀಟಿನಲ್ಲಿ ಕುಳಿತಿದೆ. ವಿಧಾನಸೌಧದ ಮೈಲ್ಛಾವಣಿ ಕಿತ್ತುಹೋಗುವಂತೆ ಆಡಳಿತ ಪಕ್ಷದ ವಿರುದ್ಧ ಕಿರುಚಾಡಿದೆ. ಸಾಕ್ಷಾತ್ ಮುಖ್ಯಮಂತ್ರಿಯಾಗಿರುವ ಯಡಿಯೂರಪ್ಪನವರು ಕೂಡ ಪ್ರತಿಭಟಿಸುವ ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ. ಆದರೆ, ಇಂದು ಬಿಜೆಪಿ ಸರಕಾರ ತೆಗೆದುಕೊಂಡ ಕ್ರಮ ಪ್ರಜಾಪ್ರಭುತ್ವಕ್ಕೆ ಇಟ್ಟ ಕಪ್ಪುಚುಕ್ಕೆ.
ದಿಗ್ಬಂಧನ ಹಿನ್ನೆಲೆಯಲ್ಲಿ ವಿಧಾನಸೌಧದ ಸುತ್ತಮುತ್ತ ಅಪರಾಧ ಪ್ರಕ್ರಿಯಾ ಸಂಹಿತೆಯ ಸೆಕ್ಷನ್ 144ದ ಅಡಿಯಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿತ್ತು. ಕಾಂಗ್ರೆಸ್ ಇದನ್ನು ಉಲ್ಲಂಘಿಸಿ ಪ್ರತಿಭಟನೆಗೆ ಮುಂದಾದಾಗ ಗೊಂದಲದ ವಾತಾವರಣ ಉಂಟಾಯಿತು. ಇದರಿಂದ ಕಾರ್ಯಕರ್ತರು ಪ್ರತಿಭಟನೆಗೆ ಮುಂದಾದಾಗ ಅವರು ನಿಂತಲ್ಲೇ ಪೊಲೀಸರು ದಾಳಿಯಿಟ್ಟು ಪ್ರತಿಭಟನಾಕಾರರನ್ನು ಮುಂದೆ ಹೋಗಲು ಬಿಟ್ಟಿಲ್ಲ. ಇದರಿಂದ ಸಹಜವಾಗಿ ಟ್ರಾಫಿಕ್ ಸಮಸ್ಯೆ ತಲೆದೋರಿದೆ. ಕ್ವೀನ್ಸ್ ರಸ್ತೆ, ಇಂಡಿಯನ್ ಎಕ್ಸ್ ಪ್ರೆಸ್ ವೃತ್ತ, ಬಸವೇಶ್ವರ ವೃತ್ತಗಳಲ್ಲಿಯೇ ಕಾಂಗ್ರೆಸ್ ಮುಖಂಡರನ್ನು ತಡೆಯಲಾಗಿದೆ.
ನೂರಾರು ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದರೂ ನಾಯಕ ಮುಂದೆ ಅಕ್ಷರಶಃ ಮೊಳಕಾಲೂರಿದವರು ಪೊಲೀಸ್ ಅಧಿಕಾರಿಗಳು. ಸರಕಾರದ ಆಜ್ಞೆಯನ್ನು ಪಾಲನೆ ಮಾಡುತ್ತಿದ್ದ ಪೊಲೀಸ್ ಅಧಿಕಾರಿಗಳ ಮಾತನ್ನು ಕೇಳುವ ಸ್ಥಿತಿಯಲ್ಲಿ ಸಿದ್ದರಾಮಯ್ಯ ಮತ್ತು ಪಟಾಲಂ ಇರಲಿಲ್ಲ. 'ಸಾರ್, ಸಾರ್, ಪ್ಲೀಸ್, ಮುಂದೆ ಹೋಗಬೇಡಿ' ಅಂತ ಅಂಗಲಾಚುತ್ತಿದ್ದರೂ, 'ರೀ ನೀವು ಮುಂದೊಂದು ದಿನ ನಮ್ಮ ಜೊತೆ ಕೆಲಸ ಮಾಡೇ ಮಾಡಬೇಕಾಗುತ್ತದೆ' ಎಂದು ಸಿದ್ದರಾಮಯ್ಯ ಗುಡುಗಿದ್ದಾರೆ.
ಗಂಡಸರು ಹೆಂಗಸರೆನ್ನದೇ ಎಲ್ಲರನ್ನೂ ಬಂಧಿಸಿರುವ ಪೊಲೀಸರು ಆಡುಗೋಡಿಯಲ್ಲಿರುವ ಪೊಲೀಸ್ ಶ್ವಾನದಳವಿರುವ ಜಾಗದಲ್ಲಿ ಶೆಡ್ ನಲ್ಲಿ ಕೂಡಿಟ್ಟಿರುವುದು ಯಾವ ಕಾರಣಕ್ಕೋ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರವೇ ಉತ್ತರಿಸಬೇಕು. ನಾಯಿಗಳ ಜೊತೆ ನಮ್ಮನ್ನೂ ಇರಿಸಿ ನಾಯಿಪಾಡು ಮಾಡಿದ್ದಾರೆ ಎಂದು ಡಿಕೆಶಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆದರೆ, ನಿಜಕ್ಕೂ ಇವರಿಬ್ಬರ ಕಿತ್ತಾಟದಲಿ ನಾಯಿಪಾಡು ಅನುಭವಿಸುತ್ತಿರುವುದು ಸಾರ್ವಜನಿಕರು.
-
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Cricket: ವಿಶ್ವದಾಖಲೆ ಬರೆದ ಕಿವೀಸ್ ವನಿತೆಯರು: ಭಾರತದ ದಾಖಲೆ ಅಳಿಸಿ ಹಾಕಿದ ನ್ಯೂಜಿಲೆಂಡ್ ಅಬ್ಬರ -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
ಬೇಸಿಗೆ ರಜೆ -ವಾರಾಂತ್ಯದ ರಶ್: ಹುಬ್ಬಳ್ಳಿ-ರಾಮೇಶ್ವರಂ ಮತ್ತು ಬೆಂಗಳೂರು-ಕಣ್ಣೂರು ವಿಶೇಷ ರೈಲು ಸಂಚಾರ -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral












Click it and Unblock the Notifications