ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ವೆಬ್ ಟಿವಿ ಆರಂಭಿಸಿದ ವಿಎಚ್ ಪಿ
ಹಿಂದೂ ಧರ್ಮ ಸಹಿಷ್ಣುತೆಯ ಧರ್ಮವಾಗಿದೆ. ಪ್ರೀತಿ ಮತ್ತು ಮಮತೆಯನ್ನು ಪ್ರತಿಪಾದಿಸುತ್ತಿರುವ ಹಿಂದೂ ದರ್ಮದ ವಿರುದ್ಧ ಅಪಪ್ರಚಾರ ನಡೆಸಲಾಗುತ್ತಿದೆ. ನಮ್ಮ ಧರ್ಮದ ಮೌಲ್ಯಗಳನ್ನು ಸರಿಯಾದ ರೀತಿಯಲ್ಲಿ ತಿಳಿಸುವ ಉದ್ದೇಶದಿಂದ ಈ ವೆಬ್ ಟಿವಿಯನ್ನು ಆರಂಭಿಸಲಾಗಿದೆ ಎಂದು ಸಿಂಘಾಲ್ ಹೇಳಿದ್ದಾರೆ.
ಚೀನಾ ನಮ್ಮ ಗಡಿಯನ್ನು ಅತಿಕ್ರಮಿಸಿದ್ದರೂ ಕೇಂದ್ರ ಸರಕಾರ ದೇಶದ ಗಡಿಯನ್ನು ರಕ್ಷಿಸುವಲ್ಲಿ ವಿಫಲವಾಗಿದೆ. ಚೀನಾದ ವಿರುದ್ದ ಸೂಕ್ತ ಕ್ರಮ ತೆಗೆದುಕೊಳ್ಳಲು ಹಿಂದೇಟು ಹಾಕುತ್ತಿದೆ ಎಂದು ಸಿಂಘಾಲ್ ವಿಷಾದ ವ್ಯಕ್ತ ಪಡಿಸಿದ್ದಾರೆ. ಗಂಗಾ ನದಿಯನ್ನು ಅವಲಂಬಿಸಿ ಕೇಂದ್ರ ಸರಕಾರ ವಿದ್ಯುತ್ ಯೋಜನೆ ಕೈಗೊಳ್ಳಲು ಮುಂದಾಗಿದೆ, ಇದನ್ನು ನಾವು ವಿರೋಧಿಸುತ್ತೇವೆ. ಈ ಯೋಜನೆಯನ್ನು ತಡೆಯದಿದ್ದಲ್ಲಿ ಗಂಗಾ ನದಿ ಕೆಲವೇ ತಿಂಗಳಲ್ಲಿ ಸಾಯುವುದು ನಿಶ್ಚಿತ ಎಂದು ಈ ಸಂದರ್ಭದಲ್ಲಿ ಹೇಳಿಕೆ ನೀಡಿದ್ದಾರೆ.
(ಏಜೆನ್ಸೀಸ್)
Comments
Story first published: Monday, September 21, 2009, 16:54 [IST]