ಜನಸಂಖ್ಯೆ ನಿಯಂತ್ರಣ, ಆರೆಸ್ಸೆಸ್ ಕಾರ್ಯಸೂಚಿ
ಬೆಂಗಳೂರು
ಸೆ 21 : ಎಪ್ಪತ್ತರ ದಶಕದಲ್ಲೇ ದೇಶದಲ್ಲಿ ಕುಟಂಬ ಕಲ್ಯಾಣ ಯೋಜನೆ ಜಾರಿಯಲ್ಲಿದೆ ಮತ್ತು ಈ ಯೋಜನೆ ಸಾಕಸ್ಟು ಯಶಸ್ಸನ್ನೂ ಕಂಡಿದೆ. ಆದರೆ ರಾಜ್ಯ ಬಿಜೆಪಿ ಸರಕಾರ ಒಂದು ಕೋಮಿನ ಜನರನ್ನು ಓಲೈಸಲು ಇದನ್ನು ಚರ್ಚೆಯ ವಿಷಯವನ್ನಾಗಿ ಮಾಡಿದೆ. ಜನಸಂಖ್ಯೆ ನಿಯಂತ್ರಣವನ್ನು ಕಡ್ಡಾಯಗೊಳಿಸುವುದು ಆರ್ ಎಸ್ ಎಸ್ ಕಾರ್ಯಸೂಚಿಯಾಗಿದೆಯೆಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಡಿ ಕೆ ಶಿವಕುಮಾರ್ ಸರಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. id="toptextpromo"> ಚೀನಾ ಪ್ರವಾಸದ ನಂತರ ಮುಖ್ಯಮಂತ್ರಿಗಳು ಅಲ್ಲಿನ ಸರಕಾರದ ಕ್ರಮದಿಂದ ಪ್ರೇರೇಪಿತರಾಗಿರಬಹುದು, ಆದರೆ ಚೀನಾ ಕಮ್ಯೂನಿಸ್ಟ್ ಸಿದ್ದಾಂತವನ್ನು ಅಳವಡಿಸಿಕೊಂಡಿದೆ ಭಾರತ ಜ್ಯಾತ್ಯಾತೀತ ಸಿದ್ಧಾಂತವನ್ನು ನಂಬಿರುವ ದೇಶ ಎನ್ನುವುದನ್ನು ಯಡಿಯೂರಪ್ಪ ಮೊದಲು ತಿಳಿದುಕೊಳ್ಳಲಿ ಎಂದು ಡಿಕೆಶಿವಕುಮಾರ್ ಸರಕಾರವನ್ನು ಲೇವಡಿ ಮಾಡಿದ್ದರೆ. ಕುಟುಂಬ ಕಲ್ಯಾಣ ಯೋಜನೆ ಪಾಲಿಸದ ಕುಟುಂಬಗಳನ್ನು ಸರಕಾರದ ಸವಲತ್ತುಗಳಿಂದ ವಂಚಿತರನ್ನಾಗಿಸಲು ಹೊರಟರೆ ಅದು ಸಂವಿಧಾನಕ್ಕೆ ಅಗೌರವ ತೋರಿಸಿದಂತಾಗುತ್ತದೆ ಎಂದು ಡಿಕೆಶಿ ಸರಕಾರಕ್ಕೆ ಎಚ್ಚರಿಸಿದ್ದಾರೆ. id='are-slot-1' class='oiad oi-axt oiadv'> id='top-searched-articles'>(ಏಜೆನ್ಸೀಸ್)












Click it and Unblock the Notifications