ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ರಾಯಲ್ ರೆಸಿಡೆನ್ಸಿ ಲೇಔಟ್ ವಿರುದ್ದ ಕ್ರಿಮಿನಲ್ ಕೇಸ್
ನ್ಯಾನಪ್ಪನಹಳ್ಳಿ ರಾಜಾ ಕಾಲುವೆಯ 22 ಅಡಿ ಜಾಗವನ್ನು ರಾಯಲ್ ರೆಸಿಡೆನ್ಸಿ ಒತ್ತುವರಿ ಮಾಡಿರುವುದೇ ಅನಾಹುತಕ್ಕೆ ಕಾರಣ ಎಂದಿರುವ ಬಿಬಿಎಂಪಿ, ಐಪಿಸಿ ಸೆಕ್ಷನ್ 304(ಎ) ಮತ್ತು ಕರ್ನಾಟಕ ಮುನಿಸಿಪಲ್ ಕಾಯಿದೆಯ ಸೆಕ್ಷನ್ 321 (1,2,3) ಅಡಿ ಮೊಕದ್ದಮೆ ದಾಖಲಿಸಿದೆ. ಗುರುವಾರ ಘಟನಾ ಸ್ಥಳಕ್ಕೆ ಭೇಟಿ ನೀಡಿದ ಸಾರಿಗೆ ಸಚಿವ ಆರ್ ಅಶೋಕ್, ರಾಯಲ್ ರೆಸಿಡೆನ್ಸಿ ರಾಜಾ ಕಾಲುವೆ ಒತ್ತುವರಿ ಮಾಡಿರುವುದು ಸ್ಪಷ್ಟವಾಗಿದೆ. ಹೀಗಾಗಿ, ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿದೆ. 24 ಅಡಿಯಷ್ಟಿದ್ದ ರಾಜಾ ಕಾಲುವೆ 2 ಅಡಿಗೆ ಇಳಿದಿದೆ. ನೀರಿನ ಒಳಹರಿವು ಹೆಚ್ಚಿ ಬಾಲಕ ಕೊಚ್ಚಿ ಹೋಗಿದ್ದಾನೆ ಎಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
ರಾಯಲ್ ರೆಸಿಡೆನ್ಸಿ ಲೇಔಟ್ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿರುವುದು ರಾಜಾ ಕಾಲುವೆ ಒತ್ತುವರಿ ಮಾಡುವವರಿಗೊಂದು ಎಚ್ಚರಿಕೆ ಗಂಟೆಯಾಗಿದೆ. ಆರೋಪ ಸಾಬೀತಾದರೆ ಒಂದು ವರ್ಷ ಕಠಿಣ ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದು ಅಶೋಕ್ ಹೇಳಿದರು.
(ದಟ್ಸ್ ಕನ್ನಡ ವಾರ್ತೆ)
Comments
Story first published: Friday, September 18, 2009, 11:28 [IST]