ಪಿಟಿ ಉಷಾಗೆ ಬಸವಶ್ರೀ : ಶಿವಮೂರ್ತಿ ಸ್ವಾಮೀಜಿ

ಬೃಹನ್ಮಠದಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಶಿವಮೂರ್ತಿ ಮುರುಘಾ ಶರಣರು ಈ ವಿಷಯ ಪ್ರಕಟಿಸಿದರು. ಪ್ರಶಸ್ತಿ ಒಂದು ಲಕ್ಷ ರೂ. ನಗದು ಮತ್ತು ಪ್ರಶಸ್ತಿ ಫಲಕ ಒಳಗೊಂಡಿದೆ. ಬಯಲು ಸೀಮೆ ದಸರಾ ಖ್ಯಾತಿಯ ಶರಣ ಸಂಸ್ಕೃತಿ ಉತ್ಸವ'ದ ಎರಡನೇ ದಿನವಾದ ಸೆ. 27 ರಂದು ಸಂಜೆ 6.30ಕ್ಕೆ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.
ತಮ್ಮದೇ ಹಾದಿಯಲ್ಲಿ ಸದ್ದಿಲ್ಲದೇ ಸಾಮಾಜಿಕ ಸೇವೆ ಮಾಡುತ್ತ ದೇಶದ ಒಳಿತು, ಹಿರಿಮೆ ಗರಿಮೆಗಾಗಿ ದಣಿವಿಲ್ಲದೆ ದುಡಿಯುತ್ತಿರುವ ಅವರಿಗೆ ಬಸವಶ್ರೀ ಪ್ರದಾನ ಮಾಡುವುದರ ಮೂಲಕ ಗೌರವಿಸಲಾಗುತ್ತಿದೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications