ಸಿಎಂ ಚೀನಾ ಪ್ರವಾಸ; ಸಿದ್ದು ಲೇವಡಿ

ರಾಜ್ಯದಲ್ಲಿ ಬರ ಪರಿಸ್ಥಿತಿ ತಾಂಡವವಾಡುತ್ತಿದ್ದು ಮಾರಕ ರೋಗಗಳಿಂದ ಜನ ತತ್ತರಿಸುತ್ತಿದ್ದಾರೆ. 96 ತಾಲೂಕುಗಳಲ್ಲಿ ಬರದಿಂದ ಜನ ತತ್ತರಿಸಿ ಗುಳೆ ಹೋಗುತ್ತಿದ್ದಾರೆ. ಆರೋಗ್ಯ ಪರಿಸ್ಥಿತಿ ವಿಷಮಿಸಿದೆ. ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟುವ ಪ್ರಯತ್ನಗಳನ್ನು ಮಾಡುತ್ತಿಲ್ಲ ಎಂದರು.
ಹಂದಿಜ್ವರ, ಡೆಂಗ್ಯೂಜ್ವರ, ಚಿಕೂನ್ ಗುನ್ಯಾದಂತಹ ರೋಗಗಳು ನಿಯಂತ್ರಣಕ್ಕೆ ಬಂದಿಲ್ಲ, ಈ ರೋಗದ ಬಗ್ಗೆ ಹೆಚ್ಚಿಗೆ ಹೇಳಿಕೆ ನೀಡಿದರೆ ಸರಕಾರದ ಕೆಲ ಸಚಿವರುಗಳು ನನ್ನ ಮೇಲೆ ಶಾಪಹಾಕ್ತಾರೆ. ಜನರಿಂದ ತಪ್ಪಿಸಿಕೊಳ್ಳಲು ಮುಖ್ಯಮಂತ್ರಿಗಳು ಚೀನಾ ಪ್ರವಾಸ ಕೈಗೊಳ್ಳುತ್ತಿರಬೇಕೆಂದು ಸಿದ್ದು ವ್ಯಂಗ್ಯವಾಡಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications