ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೀತೆಯಷ್ಟೇ ನಾನು ಪವಿತ್ರ : ಸುಧಾಕರ್

By Staff
|
Google Oneindia Kannada News

D Sudhakar
ಬೆಂಗಳೂರು, ಆ. 29 : ಬ್ಯಾಂಕ್ ವಂಚನೆಗೆ ಸಂಬಂಧಿಸಿದಂತೆ ತಾವು ಯಾವುದೇ ಅಪರಾಧ ಎಸಗಿಲ್ಲ. ಹೀಗಾಗಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ ಎಂದು ಸಮಾಜ ಕಲ್ಯಾಣ ಖಾತೆ ಸಚಿವ ಡಿ ಸುಧಾಕರ್ ಸ್ಪಷ್ಟಪಡಿಸಿದ್ದಾರೆ.

ಈ ಪ್ರಕರಣದ ಹಿಂದೆ ನನ್ನ ಏಳ್ಗೆ ಬಯಸದ ಕೆಲವರ ಹಿತಾಸಕ್ತಿ ಅಡಗಿದೆ. ಯಾವುದೇ ಅಪರಾಧ ಮಾಡಿಲ್ಲದ ನಾನು ಸೀತೆಯಷ್ಟೇ ಪವಿತ್ರನಾಗಿದ್ದು, ಮುಖ್ಯಮಂತ್ರಿಯವರು ನನ್ನನ್ನು ಸಂಪುಟದಿಂದ ಕೈಬಿಡಲಿದ್ದಾರೆ ಎಂದು ಭಾವಿಸುವುದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಸಿಬಿಐ ತಮ್ಮ ವಿರುದ್ಧ ಆರೋಪ ಪಟ್ಟಿ ಸಲ್ಲಿಸಿರುವ ಬಗ್ಗೆ ತಮಗೆ ಯಾವುದೇ ನೋಟಿಸ್ ಆಗಲೀ ಬಂದಿಲ್ಲ ಎಂದರು.

ತಮ್ಮದು ವ್ಯಾಪಾರಿ ಕುಟುಂಬ. ಏಳು ತಾಲ್ಲೂಕುಗಳಲ್ಲಿ ಸರಾಯಿ ಗುತ್ತಿಗೆದಾರನಾಗಿದ್ದೆ. 2 ಡಿಸ್ಟಲರಿಗಳ ಒಡೆತನ ಹೊಂದಿದ್ದೇನೆ. ಸರಕಾರಕ್ಕೆ ವಾರ್ಷಿಕ 100 ಕೋಟಿ ರುಪಾಯಿಗಳನ್ನು ಪಾವತಿಸುತ್ತೇನೆ. ರಿಯಲ್ ಎಸ್ಟೇಟ್ ವ್ಯವಹಾರವನ್ನೂ ನಡೆಸುತ್ತೇನೆ. ತ್ರಿಶೂಲ್ ಮತ್ತು ಸೆವೆನ್ ಹಿಲ್ಸ್ ಸಂಸ್ಥೆ ಹೆಸರಿನಲ್ಲಿ ನಿವೇಶನ ನಿರ್ಮಿಸಿ ಹಂಚಿಕೆ ಮಾಡಿದ್ದೇನೆ ಎಂದು ಸುಧಾಕರ್ ವಿವರಿಸಿದರು.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X