ನ್ಯಾಯಾಧೀಶರ ಆಸ್ತಿವಿವರದ ಕಗ್ಗಂಟು ಬಿಚ್ಚುವವರಾರು?

* ಆನಂದರಾಮ ಶಾಸ್ತ್ರೀ, ಬೆಂಗಳೂರು
ಉನ್ನತ ನ್ಯಾಯಾಲಯಗಳ ನ್ಯಾಯಾಧೀಶರ ಆಸ್ತಿ ವಿವರವನ್ನು ಇಚ್ಛುಕ ಸಾರ್ವಜನಿಕರಿಗೆ ಲಭ್ಯವಾಗುವಂತೆ ಬಹಿರಂಗಗೊಳಿಸಬೇಕೇ ಬೇಡವೇ ಎನ್ನುವ ವಿಷಯವು ಎರಡು ಕಾರಣಗಳಿಗಾಗಿ ವಿವಾದಕ್ಕೀಡಾಗಬಾರದಿತ್ತು. ಒಂದನೆಯ ಕಾರಣ, ನ್ಯಾಯಾಲಯಗಳಮೇಲೆ ಜನರು ಹೊಂದಿರುವ ಗೌರವಕ್ಕೆ ಈ ವಿವಾದದಿಂದಾಗಿ ಕೊಂಚವಾದರೂ ಚ್ಯುತಿ ಉಂಟಾಗಿಯೇ ಆಗುತ್ತದೆ. ಎರಡನೆಯ ಕಾರಣ, ಆಸ್ತಿ ವಿವರ ಬಹಿರಂಗಗೊಳಿಸುವುದು ನ್ಯಾಯಾಧೀಶರು ಪಾಲಿಸಬೇಕಾದ ಒಂದು ಸಾಮಾಜಿಕ ನ್ಯಾಯ.
ನ್ಯಾಯಾಧೀಶರಾಗಿ ಅವರು ಮೊಕದ್ದಮೆಗಳ ಬಗ್ಗೆ ನೀಡುವ ತೀರ್ಪು ಸರ್ವೋಚ್ಚ ನ್ಯಾಯಾಲಯದ ತೀರ್ಮಾನದ ನಂತರ ಪ್ರಶ್ನಾತೀತ. ಆದರೆ ವ್ಯಕ್ತಿಗಳಾಗಿ ಅವರು ಸಮಾಜದಲ್ಲಿ ಪ್ರಶ್ನಾತೀತರೇನಲ್ಲ. ಆ "ವ್ಯಕ್ತಿ"ಯೇ "ನ್ಯಾಯಾಧೀಶ"ನೂ ಆಗಿರುವುದರಿಂದ, ವ್ಯಕ್ತಿಯಾಗಿಯೂ ಆತನ ಜೀವನ ಪಾರದರ್ಶಕವಾಗಿರಬೇಕಾದ್ದು ಆತ ನೀಡುವ ತೀರ್ಪಿನಮೇಲೆ ಸಮಾಜಕ್ಕೆ ಅವಿಚ್ಛಿನ್ನ ವಿಶ್ವಾಸದ ದೃಷ್ಟಿಯಿಂದ ಅತ್ಯವಶ್ಯ. ಈ ನಿಟ್ಟಿನಲ್ಲಿ ಆತ ತನ್ನ ಮತ್ತು ಕುಟುಂಬದವರ ಆಸ್ತಿ ವಿವರವನ್ನು ಇಚ್ಛುಕ ಸಾರ್ವಜನಿಕರಿಗೆ ಲಭ್ಯವಾಗುವಂತೆ ಬಹಿರಂಗಗೊಳಿಸಬೇಕಾದ್ದು ಆತನ ಸಾಮಾಜಿಕ ಹೊಣೆಗಾರಿಕೆ. ಈ ಹೊಣೆಗಾರಿಕೆಯ ಮುಂದೆ, ಮತ್ತು, ಸಮಾಜಕ್ಕೆ ನ್ಯಾಯಾಲಯಗಳ ಮೇಲಣ ವಿಶ್ವಾಸದ ಪ್ರಶ್ನೆಯ ಮುಂದೆ, ಆತ ಆಸ್ತಿ ವಿವರ ಬಹಿರಂಗಗೊಳಿಸದಿರಲು ನೀಡಬಲ್ಲ ಕಾರಣಗಳೆಲ್ಲವೂ ನಗಣ್ಯ.
ಆಸ್ತಿ ವಿವರ ಬಹಿರಂಗಗೊಳಿಸುವುದನ್ನು ಸಮರ್ಥಿಸಿ ನ್ಯಾಯಮೂರ್ತಿ ಶೈಲೇಂದ್ರಕುಮಾರ್ ಅವರು ಪತ್ರಿಕೆಗಳಲ್ಲಿ ಬರೆದಿರುವ ಲೇಖನವು ಯಥೋಚಿತವಾಗಿದೆ. ಒಂದಿಬ್ಬರು ಅತ್ಯಂತ ಹಿರಿಯ ನ್ಯಾಯವೇತ್ತರು ಶೈಲೇಂದ್ರಕುಮಾರ್ ಅವರ ಲೇಖನಕ್ಕೆ ಪ್ರತಿಕ್ರಿಯಿಸುತ್ತ, "ನಿಮ್ಮ ಆಸ್ತಿಯನ್ನು ಬಹಿರಂಗಗೊಳಿಸಲು ಯಾರು ಬೇಡವೆಂದರು? ಬಹಿರಂಗಗೊಳಿಸಿ. ತಾವಾಗಿ ಆಸ್ತಿ ಬಹಿರಂಗಗೊಳಿಸಬಯಸುವ ನ್ಯಾಯಾಧೀಶರನ್ನು ಯಾರು ತಡೆಹಿಡಿದಿದ್ದಾರೆ? ಬಯಸುವವರು ಬಹಿರಂಗಗೊಳಿಸಲಿ", ಎಂಬರ್ಥದ ಮಾತುಗಳನ್ನಾಡಿರುವುದು ನ್ಯಾಯಾಂಗಕ್ಕೆ ಶೋಭೆ ತರುವಂಥದಲ್ಲ.
ಇದು ಹೇಗಾಯಿತೆಂದರೆ, ಸಾಮಾಜಿಕ ವಿಷಯವೊಂದರ ಬಗ್ಗೆ "ಹೋರಾಡೋಣ" ಎಂದು ಕರೆ ನೀಡಿದವರಿಗೆ, "ನೀವು ಹೋರಾಡಿ. ಬೇಡ ಅಂದವರ್ಯಾರು?" ಅಂದಂತಾಯಿತು!
ಬಯಸಿದವರಷ್ಟೇ ಆಸ್ತಿ ವಿವರ ಬಹಿರಂಗಪಡಿಸುವುದರಿಂದ ಯಾವ ಪ್ರಯೋಜನವೂ ಇಲ್ಲ. ಎಲ್ಲ ಸ್ತರದ ಎಲ್ಲ ನ್ಯಾಯಾಧೀಶರೂ ಸ್ವಕುಟುಂಬದ ಆಸ್ತಿ ವಿವರ ಸಹಿತ ತಮ್ಮ ಆಸ್ತಿ ವಿವರವನ್ನು ಇಚ್ಛುಕ ಸಾರ್ವಜನಿಕರಿಗೆ ಲಭ್ಯವಾಗುವಂತೆ ಕಡ್ಡಾಯವಾಗಿ ಬಹಿರಂಗಗೊಳಿಸುವಂತಾದಾಗ ಮಾತ್ರ ನ್ಯಾಯವ್ಯವಸ್ಥೆಯ ಮೇಲೆ ಸಮಾಜಕ್ಕೆ ಸಂಪೂರ್ಣ ವಿಶ್ವಾಸ ಉಂಟಾಗುತ್ತದೆ.
-
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
ಜಿಮ್ನಲ್ಲಿ ಭೇಟಿ, ಸಾಫ್ಟ್ವೇರ್ ಕಂಪನಿ ಕೆಲಸ: 7,500 ರೂ. ಸಂಬಳ ಪಡೆಯುತ್ತಿದ್ದ ಅಶ್ವಿನಿ ಅಪ್ಪು ಮನಗೆದ್ದಿದ್ದು ಹೇಗೆ? -
Vehicle Loan: ವಾಹನ ಮಾಲೀಕರಿಗೆ ಗುಡ್ನ್ಯೂಸ್: ಸಾಲ ಪ್ರಕ್ರಿಯೆ, ಆರ್ಸಿ ಅಪ್ಡೇಟ್ಗೆ ಇನ್ಮುಂದೆ ಆನ್ಲೈನ್ ವ್ಯವಸ್ಥೆ -
Horoscope March 11: ಈ ರಾಶಿಯವರಿಗೆ ಸಿಗಲಿವೆ ಹೊಸ ಅವಕಾಶಗಳು, ಬುದಕಿನಲ್ಲಿ ಯಶಸ್ಸು; ಇಂದಿನ ದಿನ ಭವಿಷ್ಯ -
KEA PGNEET: ಕೆಇಎಯಿಂದ ಮತ್ತೊಂದು ಸುತ್ತಿನ ಸೀಟು ಹಂಚಿಕೆ; 783 ವೈದ್ಯಕೀಯ ಸೀಟುಗಳು ಬಾಕಿ -
ವಾಸ್ತು: ದಕ್ಷಿಣ ಗೇಟು ಶುಭವೋ ಅಥವಾ ಅಶುಭವೋ, ಉತ್ತರ ದ್ವಾರದ ವಾಸ್ತು ರಹಸ್ಯಗಳೇನು ಇಲ್ಲಿದೆ ಸಂಪೂರ್ಣ ಮಾಹಿತಿ -
ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಅಸ್ತು: 13 ವರ್ಷಗಳಿಂದ ಹಾಸಿಗೆ ಹಿಡಿದಿದ್ದ ಮಗನಿಗೆ ಮುಕ್ತಿ ನೀಡಲು ಕೋರಿದ್ದ ಪೋಷಕರು -
ಮತ್ತೆ ಶುರುವಾಗುತ್ತಾ ವರ್ಕ್ ಫ್ರಂ ಹೋಮ್? ಇಂಧನ ಕೊರತೆ ಬೆನ್ನಲ್ಲೇ ಹಲವು ದೇಶಗಳಲ್ಲಿ ಕಚೇರಿಗಳಿಗೆ ನಿರ್ಬಂಧ -
ಬೇಸಿಗೆಯಲ್ಲಿ ನೀವು ಚಿಲ್ಡ್ ಬಿಯರ್ ಕುಡಿಯುತ್ತೀರಾ, ಬಾಟಲ್ ಕೆಳಗಿಟ್ಟು ಇದನ್ನು ಓದಿ -
LPG Gas: ದೇಶದಲ್ಲಿ'ಅಡುಗೆ ಅನಿಲ ತುರ್ತು ಪರಿಸ್ಥಿತಿ' ಭೀತಿ; ಡಿಜಿಟಲ್ ಬುಕಿಂಗ್ ಸರ್ವರ್ ಡೌನ್; ಏಜೆನ್ಸಿಗಳ ಮುಂದೆ ಜನರ ಕ್ಯೂ












Click it and Unblock the Notifications