ಭದ್ರಾವತಿ ಶಿಕ್ಷಣ ಇಲಾಖೆಯಲ್ಲಿ ಸುಮಂಗಲಾ ರಾಜ್ಯಂ
ಭದ್ರಾವತಿ, ಆ. 26 : ಭದ್ರಾವತಿ ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳ ಮನಸೋಯಿಚ್ಛೆ ನಿರ್ಧಾರಗಳಿಂದ ಸಾಕಷ್ಟು ಸುದ್ದಿಯಲ್ಲಿದೆ. ಸುಮಂಗಲಾ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ಭದ್ರಾವತಿಗೆ ಕಾಲಿಟ್ಟ ಕ್ಷಣದಿಂದ ಶಿಕ್ಷಣ ಇಲಾಖೆಯಲ್ಲಿ ಸರ್ವಾಧಿಕಾರಿ ಧೋರಣೆ ಆರಂಭವಾಗಿದೆ. ಶಿಕ್ಷಣಾಧಿಕಾರಿಗಳಿಗೊಂದು ಕಛೇರಿ ಇದ್ದರೂ ಸಹ ಅಲ್ಲಿ ಕೆಲಸ ನಿರ್ವಹಿಸದ ಸುಮಂಗಲಾ ಖಾಸಗೀ ಶಾಲೆಗಳಲ್ಲಿ ಕುಳಿತು ತಮ್ಮ ಕಛೇರಿಯಿಂದ ಕಡತಗಳನ್ನು ತರಿಸಿಕೊಂಡು ಕೆಲಸ ಮಾಡುತ್ತಾರೆ. ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಯ ಕೆಲ ಸಿಬ್ಬಂದಿಗಳು ಇತ್ತೀಚೆಗಷ್ಟೇ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿದೇರ್ಶಕರಿಗೆ ಮೌಖಿಕವಾಗಿ ದೂರು ನೀಡಿರುವ ಬಗ್ಗೆ ಸುದ್ದಿ ಹೊರಬಿದ್ದಿದೆ.
ಕ್ಷೇತ್ರ ಶಿಕ್ಷಣಾಧಿಕಾರಿಗಳು ತಮ್ಮ ಬೇಳೆಕಾಳು ಬೇಯಿಸಿಕೊಳ್ಳಲು ಶಿಕ್ಷಕರ ಸಂಘವನ್ನು ಇಬ್ಬಾಗ ಮಾಡಿ, ಒಡೆದು ಆಳುವ ನೀತಿ ಅನುಸರಿಸುತ್ತಿದ್ದಾರೆ. ಈ ಮೂಲಕ ತಮ್ಮ ಕೆಲವು ಕೆಲಸಗಳನ್ನು ಮಾಡಿಸಿಕೊಳ್ಳುತ್ತಿದ್ದಾರೆ. ಕ್ಷೇತ್ರ ಶಿಕ್ಷಣಾಧಿಕಾರಿ ಸುಮಂಗಲಾರವರ ಆದೇಶಗಳನ್ನು ಪಾಲಿಸದ ಕಛೇರಿ ಸಿಬ್ಬಂದಿಗಳು ಸುಮಂಗಲಾರವರಿಂದ ಇಲ್ಲಸಲ್ಲದ ಆರೋಪಗಳನ್ನು ಕೇಳುವಂತಾಗಿದೆ. ಕೆಲ ಸಿಬ್ಬಂದಿಗಳಂತೂ ಬೇರೆ ಕಡೆಗೆ ಸುಮಂಗಲಾರವರ ಕಾಟ ತಾಳಲಾರದೆ ವರ್ಗಾವಣೆ ಮಾಡಿಸಿಕೊಂಡು ಹೋದ ಪ್ರಕರಣಗಳೂ ಇಲ್ಲಿ ಕಾಣಸಿಗುತ್ತವೆ.
ಶಿಕ್ಷಕರ ಕುಂದುಕೊರತೆ ನೀಗಿಸಲೆಂದೇ ಇರುವ ಸಮಿತಿಯನ್ನೂ ಸಹ ಕ್ಷೇತ್ರ ಶಿಕ್ಷಣಾಧಿಕಾರಿ ಸುಮಂಗಲಾ ಸ್ವತಃ ಕೈಗೆತ್ತಿಕೊಂಡಿದ್ದು, ತಮಗೆ ಬೇಕಾದವರನ್ನು ಈ ಸಮಿತಿಯ ಪದಾಧಿಕಾರಿಗಳನ್ನಾಗಿ ಪರಿವರ್ತಿಸಿದ್ದಾರೆ. ತಮಗೆ ಬೇಕಾದಂತೆ ಕುಣಿಯುವವರನ್ನು ಸುಮಂಗಲಾ ಮಣೆ ಹಾಕುತ್ತಿದ್ದಾರೆ. ಸರ್ಕಾರ ಕ್ಷೇತ್ರ ಶಿಕ್ಷಣಾಧಿಕಾರಿಗೆಂದು ವಾಹನವೊಂದನ್ನು ನೀಡಿದ್ದರೂ ಸಹ, ಶಿಕ್ಷಕರ ಸಂಘದ ಪದಾಧಿಕಾರಿಗಳ ಖಾಸಗೀ ವಾಹನದಲ್ಲಿಯೇ ಇವರ ಓಡಾಟ ನಡೆದಿರುತ್ತದೆ. ಹೀಗೆ ನೂರೆಂಟು ಆರೋಪಗಳನ್ನು ಇವರ ಕಛೇರಿಯ ಕೆಲ ಸಿಬ್ಬಂದಿಗಳೇ ಮಾಡುತ್ತಾರೆ.
ಸುಮಂಗಲಾರವರು ಮೇಲಾಧಿಕಾರಿಗಳಿಂದ ಬಂದಂತಹ ಆದೇಶ ಪತ್ರಗಳನ್ನು ಅಥವಾ ಮಾಹಿತಿ ಪತ್ರಗಳನ್ನು ಸಂಬಂಧಪಟ್ಟ ತಮ್ಮ ಸಹಾಯಕರಿಗಾಗಲಿ, ಸಿಬ್ಬಂದಿ ವರ್ಗಕ್ಕಾಗಲಿ ತಿಳಿಸದೆ ತಮ್ಮ ಬಳಿಯೇ ಇಟ್ಟುಕೊಂಡು ಆ ನಂತರದಲ್ಲಿ ಮೇಲಾಧಿಕಾರಿಗಳಿಂದ ಒತ್ತಡ ಬಂದಾಗ ಆರೋಪವನ್ನೆಲ್ಲಾ ತಮ್ಮ ಸಹಾಯಕ ಸಿಬ್ಬಂದಿಗಳ ಮೇಲೆ ಹಾಕಿ, ಷೋಕಾಸ್ ನೋಟಿಸ್ ನೀಡುವಂತಹ ಪ್ರಸಂಗಗಳು ಅನೇಕ ನಡೆದಿವೆ ಎಂದು ಸಿಬ್ಬಂದಿಗಳು ತಮ್ಮ ಅಳಲು ತೋಡಿಕೊಳ್ಳುತ್ತಾರೆ. ಇತ್ತೀಚೆಗಷ್ಟೇ 2 ದಿನಗಳ ಕಾಲ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಯಲ್ಲಿ ಜನಾಂಗದ ಸಭೆ ನಡೆಸಲಾಯಿತು. ಈ ಬಗ್ಗೆ ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳು ವಿಚಾರಿಸಿದಾಗ, ಈ ಪದಾಧಿಕಾರಿಗಳ ವಿರುದ್ಧವೇ ಕ್ಷೇತ್ರ ಶಿಕ್ಷಣಾಧಿಕಾರಿ ಸುಮಂಗಲಾ ಮುನಿಸಿಕೊಂಡಿದ್ದಾರೆಂದು ತಿಳಿದುಬಂದಿದೆ.
ಶಿಕ್ಷಕರ ದಿನಾಚರಣೆಯಂದು ನಿಯಮದಂತೆ ಶಿಕ್ಷಣ ಸಂಯೋಜಕರ ಮೂಲಕವೇ ಆಚರಿಸಬೇಕು. ಆದರಿಲ್ಲಿ ಸ್ವತಃ ಕ್ಷೇತ್ರ ಶಿಕ್ಷಣಾಧಿಕಾರಿಗಳು ಶಿಕ್ಷಕರ ದಿನಾಚರಣೆಯನ್ನು ಆಚರಿಸಲು ಮುಂದಾಗಿ, ಈ ದಿನಾಚರಣೆಯ ಹೆಸರಿನಲ್ಲಿ ಅಪಾರ ಹಣವನ್ನು ಅಕ್ರಮವಾಗಿ ಸಂಗ್ರಹಿಸಿದ್ದಾರೆ ಎಂಬ ಆರೋಪಗಳು ಸಹ ಇವರಲ್ಲಿವೆ. ಸ್ವಯಂ ನಿವೃತ್ತಿಯ ಸವಲತ್ತುಗಳನ್ನು ಜಾರಿಗೊಳಿಸಲು ಕ್ಷೇತ್ರ ಶಿಕ್ಷಣಾಧಿಕಾರಿ ಸುಮಂಗಲಾ ಹಣವನ್ನು ಒತ್ತಾಯದಿಂದ ಪಡೆಯುತ್ತಿರುವ ಬಗ್ಗೆಯೂ ಅವರದೇ ಕಛೇರಿಯ ಸಿಬ್ಬಂದಿಗಳು ಆಕ್ರೋಶ ವ್ಯಕ್ತಪಡಿಸುತ್ತಾರೆ.
ಇತ್ತೀಚೆಗಷ್ಟೇ ಸೇಂಟ್ ಮೇರೀಸ್ ಶಾಲೆಯಲ್ಲಿ ರಶೀದಿ ರಹಿತ ಹಣ ಸಂಗ್ರಹಣೆ ಬಗ್ಗೆ ಆಕ್ರೋಶಗೊಂಡ ಪೋಷಕರು ಧರಣಿ ಸತ್ಯಾಗ್ರಹಕ್ಕೆ ಮುಂದಾಗಿದ್ದರು. ಇದೇ ಸಂದರ್ಭವನ್ನು ಉಪಯೋಗಿಸಿಕೊಂಡ ಕ್ಷೇತ್ರ ಶಿಕ್ಷಣಾಧಿಕಾರಿ ಸುಮಂಗಲಾ ಆ ಶಾಲೆಯಿಂದ ಹಣ ಪಡೆದರೆಂಬ ಸುದ್ದಿಯೂ ಗುಪ್ತವಾಗಿ ಉಳಿದಿಲ್ಲ ಎನ್ನುತ್ತಾರೆ ಅವರದೇ ಕಛೇರಿಯ ಸಿಬ್ಬಂದಿಗಳು. ಅಲ್ಲದೇ, ಶಾಲಾ ಶಿಕ್ಷಕರ ಸಂಘದ ಕೆಲ ಪದಾಧಿಕಾರಿಗಳು ಶಾಲೆಗೆ ಸರಿಯಾಗಿ ಹಾಜರಾಗುವುದಿಲ್ಲ. ಸಂಘದ ಕೆಲಸದ ನೆಪದಲ್ಲಿ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿ ಸುಮಂಗಲಾರವರ ಪ್ರಭಾವಳಿಯಲ್ಲಿ ಈ ಶಿಕ್ಷಕರು ತಾವು ಮಾಡಿದ್ದೆಲ್ಲಾ ದೇಶ ಸೇವೆ ಎಂದುಕೊಂಡಿದ್ದಾರೆ. ತಾಲ್ಲೂಕು ಪಂಚಾಯತಿ ವತಿಯಿಂದ ಈ ಬಗ್ಗೆ ಆದೇಶ ಬಂದಿದ್ದರೂ ಸಹ ಕ್ಷೇತ್ರ ಶಿಕ್ಷಣಾಧಿಕಾರಿಗಳು ಕ್ರಮ ಕೈಗೊಳ್ಳದೆ ಈ ದೇಶೋದ್ಧಾರಕ ಶಿಕ್ಷಕರ ಅನ್ಯಾಯದ ಪರ ವಹಿಸಿ ನಿಂತಿದ್ದಾರೆಂದು ಆರೋಪಗಳು ಕೇಳಿಬರುತ್ತಿವೆ.
ಬಿಇಓ ಸುಮಂಗಲಾ ಹೊಸನಗರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾಗ ಅನೇಕ ಆರೋಪಗಳನ್ನು ಎದುರಿಸುತ್ತಿದ್ದರು. ಈ ತಪ್ಪು ಹೆಜ್ಜೆಗಳನ್ನು ತಿದ್ದಿಕೊಳ್ಳಲು ಶಿಕ್ಷಣ ಇಲಾಖೆ ಸುಮಂಗಲಾರವರಿಗೆ ಅವಕಾಶ ನೀಡಿತ್ತು. ಆದರೆ, ಭದ್ರಾವತಿಯಲ್ಲಿಯೇ ಮತ್ತದೇ ತಪ್ಪು ಹೆಜ್ಜೆಗಳನ್ನು ಸುಮಂಗಲಾ ಇಡತೊಡಗಿದ್ದಾರೆ.
ಭದ್ರಾವತಿ ಕ್ಷೇತ್ರ ಶಿಕ್ಷಣಾಧಿಕಾರಿ ಸುಮಂಗಲಾರವರಿಂದ ಆಗುತ್ತಿರುವ ಅನ್ಯಾಯದ ಬಗ್ಗೆ ಕೂಡಲೇ ಸಮಗ್ರ ತನಿಖೆ ಕೈಗೊಳ್ಳಬೇಕು. ಅಲ್ಲದೇ, ಭದ್ರಾವತಿ ಕ್ಷೇತ್ರದಿಂದ ಸುಮಂಗಲಾರವರನ್ನು ಕೂಡಲೇ ವರ್ಗಾಯಿಸಬೇಕು. ಅಲ್ಲಿಯವರೆಗೆ ಯಾವುದೇ ನೆಮ್ಮದಿ ಶಿಕ್ಷಣ ಇಲಾಖೆಗೆ ಇರುವುದಿಲ್ಲ ಎಂದು ಶಿಕ್ಷಕ ಸಮೂಹ ಅಭಿಪ್ರಾಯ ವ್ಯಕ್ತಪಡಿಸಿದೆ.
-
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
Byadgi Chilli Market: ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆ ಮೇಲೆ ಯುದ್ಧದ ಪ್ರಭಾವ, ರಫ್ತು ಸ್ಥಗಿತ -
Gold Price Today: ಆಭರಣ ಪ್ರಿಯರಿಗೆ ಬಿಗ್ ರಿಲೀಫ್: ಬೆಂಗಳೂರಿನಲ್ಲಿ ಚಿನ್ನದ ಬೆಲೆ ದಿಢೀರ್ ಇಳಿಕೆ; ಇಂದಿನ ದರ ಇಲ್ಲಿದೆ -
Horoscope March 9; ಈ ರಾಶಿಯವರ ಅದೃಷ್ಟವೇ ಬದಲಾಗುತ್ತೆ: 12 ರಾಶಿ ಭವಿಷ್ಯ ತಿಳಿಯಿರಿ -
Imd Weather Forecast: ಭಾರೀ ಬಿಸಿಲಿನ ನಡುವೆ ಈ ಭಾಗಗಳಲ್ಲಿ ಮಳೆ: ಐಎಂಡಿ ಮುನ್ಸೂಚನೆ ಇಲ್ಲಿದೆ -
Namma Metro Phase 3 Project: ಮೆಟ್ರೋ 2 ಕಾರಿಡಾರ್ ನಿರ್ಮಾಣಕ್ಕೆ 2031ರ ಹೊಸ ಗಡುವು -
Sensex crash: ಷೇರು ಮಾರುಕಟ್ಟೆಯಲ್ಲಿ ಭಾರಿ ಸಂಚಲನ; ಸೆನ್ಸೆಕ್ಸ್ 2100 ಅಂಕ ಕುಸಿತ -
E-Bus: ಕರ್ನಾಟಕದ ಹೊಸ ಯೋಜನೆಯಡಿ ಗ್ರಾಮೀಣ ಭಾಗಗಳಲ್ಲೂ ಓಡಾಡಲಿವೆ 1950 ಎಲೆಕ್ಟ್ರಿಕ್ ಬಸ್ಗಳು -
Prediction on Donald Trump: ಟ್ರಂಪ್ ಗೆಲುವು, ಇರಾನ್ ಯುದ್ಧ ಭವಿಷ್ಯ: 3 ಭವಿಷ್ಯವಾಣಿಯಲ್ಲಿ 2 ನಿಜ, ಮತ್ತೊಂದೇನು -
ಕರ್ನಾಟಕದಲ್ಲಿ 40 ಡಿಗ್ರಿ ಸೆಲ್ಸಿಯಸ್ ದಾಟಿದೆ ಉಷ್ಣಾಂಶ: ಈಗಿನ್ನೂ ಮಾರ್ಚ್, ಮೇ ಕಥೆ ಹೇಗೆ? ಬಿಸಿಗಾಳಿಗೆ ಬಸವಳಿದ ಜನ -
Sanju Samson: ಟಿ20 ವಿಶ್ವಕಪ್ ಗೆಲುವಿನ ಬಳಿಕ ಕ್ರಿಕೆಟ್ ದೇವರ ಬಗ್ಗೆ ಮನದಾಳದ ಮಾತು ಬಿಚ್ಚಿಟ್ಟ ಸಂಜು ಸ್ಯಾಮ್ಸನ್












Click it and Unblock the Notifications