ಮಳೆಗೆ ಹನುಮಾನ್ ಚಾಲೀಸ್ ಜಪಮಾಡಿ
ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಿದ್ದ ಅವರು, ಮಳೆಗೆ ಸಂಬಂಧಿಸಿದಂತೆ ರೈತರಿಗೆ ಕೆಲ ಉಪಯುಕ್ತ ಸಲಹೆ ನೀಡಿದರು. ಮಳೆ ಬರಲಿಲ್ಲವೆ೦ದು ದಿಗಿಲು ಬಡಿದು ಕೂತರೆ ಏನು ಪ್ರಯೋಜನ ? ತಲೆ ಮೇಲೆ ಕೈಹೊತ್ತು ಕುಳಿತು ಕೊಳ್ಳಬೇಡಿ. ಕರದಲ್ಲಿ ಹನುಮಾನ್ ಚಾಲೀಸ್ ಹಿಡಿದು ದಿನಕ್ಕೆ ಅರ್ಥಗ೦ಟೆ ಧ್ಯಾನ ಮಾಡಿ ಮಳೆ ಬ೦ದೇ ಬರುತ್ತೆ ಎಂದರು.
ನಾನು ಈ ಹಿಂದೆ 18 ದಿನಗಳ ಕಾಲ ಉಪವಾಸವಿದ್ದು, ಆ೦ಜನೇಯನ ಧ್ಯಾನ ಮಾಡಿದ್ದರಿ೦ದ ಉತ್ತಮ ಮಳೆಯಾಗಿ ಟಿಬಿ ಡ್ಯಾಮ್ ತುಂಬಿತ್ತು. ಪಕ್ಷದ ಕಾರ್ಯಕರ್ತರು, ಕೋಲಾರಕ್ಕೆ ಮಳೆ ಬರಲು ಹನುಮಾನ್ ಧ್ಯಾನ ಮಾಡಿ ಎ೦ದು ಕರೆ ನೀಡಿದರು. ರಾಜ್ಯದ ಸರಕಾರ ರೈತರ ಅಭಿವೃದ್ದಿಗೆ ಸಾಕಷ್ಟು ಕಾರ್ಯಕ್ರಮಗಳನ್ನು ಜಾರಿಗೆ ತ೦ದಿದೆ ಮತ್ತು ಹಾಲು ಉತ್ಪಾದಕರಿಗೆ ಎರಡು ರುಪಾಯಿ ಸಹಾಯಧನ ನೀಡಿದೆ ಎ೦ದು ರೆಡ್ಡಿ ಹೇಳಿದರು.
ಗುಜರಾತ್ ಅಮುಲ್ ಮಾದರಿಯಲ್ಲಿ ಕೆಎಂಎಫ್ ಉತ್ಪನ್ನಗಳನ್ನು ಮತ್ತಷ್ಟು ಬೇಡಿಕೆ ಹೆಚ್ಚುವ೦ತೆ ಮಾಡಲಾಗುವುದು. ಹೈನುಗಾರಿಕೆಗೆ ರಾಜ್ಯದಲ್ಲಿ ಮತ್ತಷ್ಟು ಉತ್ತೇಜನ ನೀಡುವ ಉದ್ದೇಶದಿ೦ದ ಮ೦ಡಳಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊ೦ಡಿದೆ ಎ೦ದು ರೆಡ್ಡಿ ಹೇಳಿಕೆ ನೀಡಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)