Get Updates
Get notified of breaking news, exclusive insights, and must-see stories!

ಮೇಡಂ ಕುಮುದಾ ಕೊಲೆಗೈದ ಕಾಮುಕರ ಬಂಧನ

Murdered teacher Kumuda
ರಾಮನಗರ, ಆ. 4 : ಡ್ರಾಪ್ ಕೊಡುವ ನೆಪದಲ್ಲಿ ರಾಮನಗರದ ಶಾಲಾ ಶಿಕ್ಷಕಿ ಕುಮುದಾ ಎಂಬುವವರನ್ನು ಅಪಹರಿಸಿ ಕಾಮದಾಟವಾಡಿ ಆಭರಣಗಳನ್ನ ದೋಚಿ ಕೊಲೆ ಮಾಡಿದ್ದ 8 ಮಂದಿ ಕಾಮುಕರು ರಾಮನಗರ ಪೋಲೀಸರ ಅತಿಥಿಯಾಗಿದ್ದಾರೆ. ದುಷ್ಕರ್ಮಿಗಳ ಬಂಧನದಿಂದ ಕಳೆದ ವರ್ಷ ನಡೆದ ಕುಣಿಗಲ್ ನ ಶಿಕ್ಷಕಿಯ ಕೊಲೆಯಲ್ಲಿಯೂ ಇವರು ಭಾಗಿಯಾಗಿದ್ದರೆಂಬುದು ಬಯಲಾಗಿದೆ.

ಮೂರು ದಿನಗಳ ಹಿಂದೆ ಕುಮುದಾ ನಾಪತ್ತೆಯಾಗಿ ಸೋಮವಾರ ತುಮಕೂರಿನ ಹೊರವಲಯದಲ್ಲಿ ಶವವಾಗಿ ಪತ್ತೆಯಾಗಿದ್ದರು. ಅದೇ ರೀತಿ ಕಳೆದ ವರ್ಷ ಕುಣಿಗಲ್‌ನ ಶಿಕ್ಷಕಿಯೊಬ್ಬರು ಮಾಗಡಿಯ ಸಾವನದುರ್ಗ ಬಳಿ ಶವವಾಗಿ ಪತ್ತೆಯಾಗಿದ್ದರು. ಕಾಮುಕರ ಕಾಮದಾಟಕ್ಕೆ ಎರಡು ತುಂಬಿದ ಜೀವಗಳೇನೊ ಬಲಿಯಾಗಿವೆ ಆದರೆ ಮಾತೃಹೃದಯದ ಪ್ರೀತಿ ಕಳೆದುಕೊಂಡ ಕಂದಮ್ಮಗಳ ಆಕ್ರಂದನ ಹೃದಯ ಹಿಂಡುವಂತಿದೆ.

ಬಂಧಿತರನ್ನು ರಾಮನಗರದ ಮಂಜುನಾಥ, ರವಿ, ರವೀಶ, ನರಸಿಂಹ, ನಾಗೇಶ, ಸುಮಂತ, ರಾಮಕೃಷ್ಣ ಎಂದು ಗುರುತಿಸಲಾಗಿದೆ. ಡ್ರಾಪ್ ನೀಡುವ ನೆಪದಲ್ಲಿ ಇಬ್ಬರು ಅಮಾಯಕ ಶಿಕ್ಷಕಿಯರನ್ನ ಕಾರಿನಲ್ಲಿ ಕರೆದೊಯ್ದು ದುಷ್ಕೃತ್ಯವೆಸಗಿರುವುದು ವಿಚಾರಣೆಯಿಂದ ತಿಳಿದುಬಂದಿದೆ. ಪ್ರಕರಣದ ಜಾಡು ಹತ್ತಿದ್ದ ಸಿಪಿಐ ಧರ್ಮೇಂದ್ರಯ್ಯ. ಬಿಡದಿ ಪಿಎಸ್‌ಯ ಸತ್ಯನಾರಾಯಣ ಆರೋಪಿಗಳನ್ನ ವಿಚಾರಣೆ ನಡೆಸಿದಾಗ ಕಳೆದ ವರ್ಷ ಕೊಲೆಯಾಗಿದ್ದ ಕುಣಿಗಲ್ ಶಿಕ್ಷಕಿ ಸುಜಾತರ ಕೊಲೆ ಪ್ರಕಣವೂ ಬಯಲು ಮಾಡಿದ್ದಾರೆ.

Daughter of Kumuda
ಗುರು ಬ್ರಹ್ಮ...ಗುರು ವಿಷ್ಣು...ಗುರು ದೇವೋಭವ.. ಗುರುಗಳಿಗೆ ಸಮಾಜದಲ್ಲಿ ಪೂಜ್ಯ ಸ್ಥಾನವಿದೆ. ಆದರೆ ರಾಮನಗರದ ಕೆಲವು ಕಾಮುಕರ ಕಾಮದಾಟಕ್ಕೆ ಇಬ್ಬರು ಶಿಕ್ಷಕಿಯರು ಕೊಲೆಯಾಗಿ ಹೋಗಿದ್ದಾರೆ. ಕುಣಿಗಲ್ ತಾಲ್ಲೂಕಿನ ಬ್ಯಾಲದಕೆರೆ ಶಾಲಾ ಶಿಕ್ಷಕಿಯಾಗಿದ್ದ ಸುಜಾತ ಕಳೆದ ವರ್ಷ ಆಗಸ್ಟ್‌ನಲ್ಲಿ ಸಾವನದುರ್ಗ ಅರಣ್ಯ ಪ್ರದೇಶದಲ್ಲಿ ಅತ್ಯಾಚಾರಕ್ಕೊಳಗಾಗಿ ಕೊಲೆಯಾಗಿದ್ದರು. ಅದೇ ರೀತಿ ಮೂರು ದಿನಗಳ ಹಿಂದೆ ನಾಪತ್ತೆಯಾಗಿದ್ದ ರಾಮನಗರ ತಾಲ್ಲೂಕು ಬಸವನಪುರ ಶಾಲಾ ಶಿಕ್ಷಕಿ ಕುಮುದಾ ಕೂಡ ತುಮಕೂರಿನ ಹೊನ್ನುಡಿಕೆ ಬಳಿ ಅತ್ಯಾಚಾರಕ್ಕೊಳಗಾಗಿ ಕೊಲೆಯಾಗಿದ್ದಾರೆ.

ಕಾಮುಕ ಪಡೆಯಲ್ಲಿರುವ ಕೆಲವರಂತೂ ಏನೂ ಆಗದವರಂತೆ ಬಂಡೆಗಲ್ಲಿನಂತೆ ಕುಳಿತಿದ್ದರು. ಇನ್ನೂ ಕೆಲವರು ಮಾಧ್ಯಮಗಳ ಕ್ಯಾಮೆರಾಗಳು ಸುಳಿದಾಡುತ್ತಿದ್ದಂತೆ ಕಣ್ಣಿನಲ್ಲಿ ನೀರಿಡುತ್ತಾ ಮೊಸಳೆ ಕಣ್ಣೀರು ಸುರಿಸುತ್ತಿದ್ದರು. ಇವರ ಬಂಧನದಿಂದ ಕಾಮುಕರ ಕಾಮದಾಟಕ್ಕೆ ಅಂತ್ಯಬಿದ್ದಂತಾಗಿದೆ. ಎರಡು ಕೊಲೆಗಳು ಸಾವರ್ಜನಿಕ ವಲಯದಲ್ಲಿ ಭಾರೀ ಆತಂಕ ಸೃಷ್ಟಿಸಿದ್ದವು. ಮಹಿಳಾ ನೌಕರರು ನೆಮ್ಮದಿಯ ನಿಟ್ಟುಸಿರಿಡುವಂತಾಗಿದೆ.

ಸೋಮವಾರ ಕುಮುದಾ ಕೊಲೆ ಪ್ರಕರಣವನ್ನ ಖಂಡಿಸಿ ಆರೋಪಿಗಳಿಗೆ ಸೂಕ್ತ ಶಿಕ್ಷೆಯಾಗಬೇಕು ಮತ್ತು ಆರೋಪಿಗಳ ಪರ ವಕೀಲರುಗಳು ವಕಾಲತ್ತು ವಹಿಸಬಾರದೆಂದು ಮನವಿ ಮಾಡಿ ಸಾವಿರಾರು ಪ್ರಾಥಮಿಕ ಶಾಲಾ ಶಿಕ್ಷಕರು ಇಂದು ಮೌನ ಮೆರವಣಿಗೆ ನಡೆಸಿ ಅಗಲಿದ ಶಿಕ್ಷಕಿ ಗೌರವ ನಮನ ಸಲ್ಲಿಸಿದರು. ಕಾಮುಕ ಪಡೆ ಕಾನೂನಿನ ಚೌಕಟ್ಟಿನಲ್ಲಿ ಉಗ್ರ ಶಿಕ್ಷೆ ನೀಡಬೇಕು ಇಲ್ಲವಾದಲ್ಲಿ ಮತ್ತೆ ಸಮಾಜದಲ್ಲಿ ಅಮಾನವೀಯವಾದ ಘಟನೆಗಳು ನಡೆಯುತ್ತದೆ. ಆದ್ದರಿಂದ ಕೊಲೆಗೈದಿರುವ ಕೀಚಕ ಪಡೆಗೆ ಸಮಾಜದಲ್ಲಿ ಇಂತಹ ಘಟನೆಗಳು ಮತ್ತೆ ಮರುಕಳಿಸದಂತಹ ರೀತಿಯಲ್ಲಿ ಶಿಕ್ಷೆ ವಿಧಿಸಬೇಕೆಂದು ಶಿಕ್ಷಕರು ಆಗ್ರಹಿಸಿದ್ದಾರೆ.

ಸಾವಿನ ಸುದ್ದಿ ತಿಳಿದ ಶಿಕ್ಷಕಿ ಕುಮುದಾರ ಕುಟುಂಬದ ಸದಸ್ಯರ ಆಕ್ರಂದನ ಕರುಳಿನ ಕುಡಿಗಳ ರೋದನ ಎಲ್ಲರ ಕಣ್ಣಲ್ಲಿ ನೀರಾಡುವಂತೆ ಮಾಡಿತ್ತು. ತಾಯಿಯ ಆಲಿಂಗನಕ್ಕಾಗಿ ಹಾತೊರೆಯುತ್ತಿದ್ದ ಕಂದಮ್ಮಗಳಿಗೆ ಮಾತೃಹೃದಯ ಪ್ರೀತಿ ದೂರವಾದಂತಾಗಿದೆ. ಕೊಲೆಗೀಡಾಗಿರುವ ಕುಮುದಾರ ಇಬ್ಬರು ಕಂದಮ್ಮಗಳಾದ 2 ವರ್ಷದ ಉಜ್ವಲ್ ಮತ್ತು 8 ವರ್ಷದ ಸ್ಪೂರ್ತಿ ಹಾಗೂ ಕುಟುಂಬದ ಸದಸ್ಯರ ನೋವಿನ ಮಾತುಗಳು ಎಲ್ಲರ ಹೃದಯವನ್ನ ಕಲಕಿತ್ತು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+