ನಾಡಗೀತೆ ಮಾದರಿಯಲ್ಲಿ ಉಳುವಾ ಯೋಗಿಗೀತೆ
ಬೆಂಗಳೂರು,
ಜು. 23 : ರಾಷ್ಟ್ರಕವಿ ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ(ಕುವೆಂಪು) ರಚಿಸಿದ 'ನೇಗಿಲ ಹಿಡಿದ ಹೊಲದೊಳು ಹಾಡುತ ಉಳುವಾ ಯೋಗಿಯ ನೋಡಲ್ಲಿ' ಎಂಬ ಗೀತೆಯನ್ನು ಶೀಘ್ರದಲ್ಲಿ ಸರಕಾರ ಅಧಿಕೃತವಾಗಿ ನಾಡಗೀತೆಯಾಗಿ ಮಾನ್ಯತೆ ಮಾಡುವುದಾಗಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹೇಳಿದರು. id="toptextpromo">ಅಗಸ್ಟ್
15 ರಿಂದ ಉಳುವಾ ಯೋಗಿಯ ಗೀತೆಯನ್ನು ಸರಕಾರ ಅಧಿಕೃತವಾಗಿ ನಾಡಗೀತೆ ರೂಪದಲ್ಲಿ ಜಾರಿಗೆ ತರಲಿದ್ದು, ಸ್ವಾತಂತ್ರ್ಯ ದಿನಾಚರಣೆ ಸೇರಿದಂತೆ ಮುಂದಿನ ದಿನಗಳಲ್ಲಿ ಸರಕಾರದ ನೇತೃತ್ವದಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ಈ ರೈತರ ಗೀತೆ ಹಾಡಲಾಗುವುದು ಎಂದರು. ಇದೇ ಅಗಸ್ಟ್ 15 ರಂದು ನಡೆಯುವ ಸ್ವಾತಂತ್ರ್ಯದಿನಾಚರಣೆ ಅಂಗವಾಗಿ ವಿಧಾನಸೌಧದ ಮುಂಭಾಗದಲ್ಲಿ ಏರ್ಪಡಿಸಲಾಗುವ ಕಾರ್ಯಕ್ರಮದಲ್ಲಿ ನಾಡಿನ ಸುಮಾರು 15 ಸಾವಿರ ಗಾಯಕ-ಗಾಯಕಿಯರು ಈ ಹಾಡನ್ನು ಹಾಡಲಿದ್ದು, ಈ ಮೂಲಕ ಕುವೆಂಪು ರಚಿತ ಉಳುವಾ ಯೋಗಿ ನೋಡಲ್ಲಿ ಹಾಡನ್ನು ಅಧಿಕೃತ ಮಾಡಲಾಗುವುದು ಎಂದು ಯಡಿಯೂರಪ್ಪ ವಿವರಿಸಿದರು. id='are-slot-1' class='oiad oi-axt oiadv'> id='top-searched-articles'>(ದಟ್ಸ್
ಕನ್ನಡ ವಾರ್ತೆ)











Click it and Unblock the Notifications