Get Updates
Get notified of breaking news, exclusive insights, and must-see stories!

ಸು.ಕೋರ್ಟ್ ನಲ್ಲಿ ಸರಕಾರಕ್ಕೆ ಹಿನ್ನಡೆ

Visheshwara hegde kageri
ನವದೆಹಲಿ, ಜು. 22 : ಎಲ್ಲಾ ಶಿಕ್ಷಣ ಸಂಸ್ಥೆಗಳಲ್ಲಿ ಕಲಿಕೆ ಮಾಧ್ಯಮವಾಗಿ ಕನ್ನಡವನ್ನು ಕಡ್ಡಾಯಗೊಳಿಸುವ ರಾಜ್ಯ ಸರಕಾರದ ಕ್ರಮಕ್ಕೆ ಸುಪ್ರಿಂ ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ. ಸರಕಾರದ ಆದೇಶ ರದ್ದುಗೊಳಿಸಿದ ಹೈಕೋರ್ಟ್ ಆದೇಶಕ್ಕೆ ತಡೆಯಾಜ್ಞೆ ನೀಡಲು ನಿರಾಕರಿಸುವುದರೊಂದಿಗೆ ಭಾಷಾ ಮಾಧ್ಯಮ ವಿಷಯದಲ್ಲಿ ಮತ್ತೆ ಸರಕಾರ ಮುಖಭಂಗ ಅನುಭವಿಸಿದೆ.

ಮುಖ್ಯ ನ್ಯಾಯಮೂರ್ತಿ ಬಾಲಕೃಷ್ಣನ್, ನ್ಯಾಯಮೂರ್ತಿಗಳಾದ ಸದಾಶಿವಂ ಮತ್ತು ಬಿ ಎಸ್ ಚೌಹಾಣ ಅವರಿದ್ದ ಪೀಠ ರಾಜ್ಯದ ನಿರ್ಧಾರಕ್ಕೆ ಅಸಮಾಧಾನ ವ್ಯಕ್ತ ಪಡಿಸಿದ್ದು, ಮಾತೃಭಾಷೆಯೊಂದನ್ನು ಮಾತ್ರ ಕಲಿತರೆ ಮಕ್ಕಳು ಕ್ಲರ್ಕ್ ಕೂಡಾ ಆಗಲಾರರು. ಹಳ್ಳಿಯಲ್ಲಿ ಓದುವ ವಿಧ್ಯಾರ್ಥಿಗಳು ನಗರದ ವಿಧ್ಯಾರ್ಥಿಗಳ ಜೊತೆ ಸ್ಪರ್ಧಿಸಲಾರರು. ಕಲಿಯಲು ಇಷ್ಟವಿಲ್ಲದ ವಿದ್ಯಾರ್ಥಿಗಳ ಮೇಲೆ ರಾಜ್ಯಗಳು ತಮ್ಮ ಮಾತೃ ಭಾಷೆಯನ್ನು ಹೇರಲು ಮುಂದಾದರೆ ಅದು ಅನುತ್ಪಾದಕ ಕ್ರಮವಾಗುತ್ತದೆ. ಇದರಿಂದ ವಾಸ್ತವ ಜಗತ್ತಿನಲ್ಲಿ ಉಳಿಯಲು ಕಷ್ಟವಾಗುತ್ತದೆ ಎಂದು ಖೇದ ವ್ಯಕ್ತಪಡಿಸಿತು.

(ಏಜನ್ಸೀಸ್)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+