ಸಾತನೂರಿನಲ್ಲಿ ಸದ್ದಿಲ್ಲದ ಕ್ರಾಂತಿ

ಪಾಪ, ಹಳ್ಳಿ ಮನುಷ್ಯ, ಕುರುಚಲು ಗಡ್ಡ. ಹೆಸರು ನಾಗಭೂಷಣ ಅಚಲು. ಕಣ್ಣುಬಿಟ್ಟು ಕಣ್ಣು ತೆಗೆಯುವಷ್ಟರಲ್ಲಿ ಆ ಅಂಗಡಿಯಾತ ನಾಗಭೂಷಣನ ಅರ್ಜಿಯನ್ನು ಅಲ್ಲಿಂದ 40 ಕಿಮೀ ದೂರದಲ್ಲಿರುವ ರಾಜ್ಯ ಸರಕಾರದ ಇಂಟರ್ನೆಟ್ ವಿಳಾಸಕ್ಕೆ ಕಳಿಸಿಬಿಟ್ಟ. ಇದೇನು ಮಹಾ ಚಮತ್ಕಾರವಲ್ಲ. ಆದರೆ, ಗ್ರಾಮೀಣ ಭಾರತಕ್ಕೆ ಮಾತ್ರ ಒಂದು ಕ್ರಾಂತಿಯ ವಿಚಾರ!
ನಾಗಭೂಷಣ ಆದಿ ಕರ್ನಾಟಕ ಜನಾಂಗಕ್ಕೆ ಸೇರಿದವ. ಈ ಜನಾಂಗದವರನ್ನು ಶೆಡ್ಯೂಲ್ಡ್ ಕ್ಯಾಸ್ಟಿಗೆ ಸೇರಿದವರೆಂದು ಕರೆಯುತ್ತಾರೆ. ಮುಂಚೆಲ್ಲ ಅವರನ್ನು ಅಸ್ಪೃಷ್ಯರೆಂದು ಬಣ್ಣಿಸಲಾಗುತ್ತಿತ್ತು. ನಾಗಭೂಷಣನಿಗೆ ಅಬ್ಬಬ್ಬಾ ಎಂದರೆ ವರ್ಷಕ್ಕೆ 5000 ರೂಪಾಯಿ ಆದಾಯ ಬರಬಹುದು. ತನ್ನ ಚೋಟುದ್ದ ಭೂಮಿಯಲ್ಲಿ ಆ ವರ್ಷ ಭತ್ತ, ಕಾಳು ಬೆಳೆದರೆ ಮಾತ್ರ ಎರಡು ಹೊತ್ತು ಊಟ. ಆದರೂ ಅವನು ಚಿಂತಿತನಾಗಿಲ್ಲ. ಅವನಿಗೆ ತನ್ನ ಮಕ್ಕಳ ಭವಿಷ್ಯದ ಬಗ್ಗೆ ಕಣ್ತುಂಬ ಭರವಸೆ ಇದೆ. ತನ್ನ ಮಕ್ಕಳನ್ನು ಶಾಲೆಗೆ ಕಳಿಸಿ ಅವರಿಗೆ ವಿದ್ಯಾಭ್ಯಾಸ ಕೊಡಿಸುವುದಕ್ಕೆ ಆತನಿಗೆ ಈಗ ಅಷ್ಟೇನು ಕಷ್ಟವಾಗದು.
ಏಕೆಂದರೆ, ಕರ್ನಾಟಕದಲ್ಲಿನ ಖಾಸಗಿ ಶಾಲೆಗಳು ಶೆಡ್ಯೂಲ್ಡ್ ಕ್ಯಾಸ್ಟ್ ಮಕ್ಕಳಿಂದ ಶುಲ್ಕ ತೆಗೆದುಕೊಳ್ಳುವುದಿಲ್ಲ. ಆತನ ಇಬ್ಬರೂ ಮಕ್ಕಳು ಶಾಲೆಗೆ ಹೋಗಬಹುದು, ಉಚಿತ ವಿದ್ಯಾಭ್ಯಾಸದ ಸವಲತ್ತುಗಳನ್ನು ಪಡೆಯಬಹುದು. ಆದರೆ, ಒಂದು ಕಂಡೀಷನ್. ಅವರ ಅಪ್ಪ ತನ್ನ ಬಡತನವನ್ನು ಸಾದರಪಡಿಸಲು ಜಾತಿ ಮತ್ತು ಆದಾಯದ ಪ್ರಮಾಣ ಪತ್ರಗಳನ್ನು ಸಿದ್ಧ ಮಾಡಿಟ್ಟುಕೊಳ್ಳಬೇಕು.
ತೀರ ಅಗತ್ಯವಾದ ಇಂಥ ಪ್ರಮಾಣ ಪತ್ರ ಪಡೆಯುವುದಕ್ಕೆ ನಾಗಭೂಷಣ ಹೆಣಗಬೇಗಿತ್ತು. ಇಪ್ಪತ್ತೆಂಟು ಕಿರಿಕಿರಿ, ಅವರಿವರ ಕೈಬೆಚ್ಚಗೆ ಮಾಡಬೇಕಾದ ಕಾಲವೊಂದಿತ್ತು. ಆದರೆ, ಪರಿಸ್ಥಿತಿ ಈಗ ಹಾಗಿಲ್ಲ. ಇಂಟರ್ನೆಟ್ಟಿನ ಅಂಗಡಿಯವನು ನೆರವಿಗೆ ಬಂದನಂತರ ನಾಗಭೂಷನಂತಹವರ ಎಷ್ಟೋ ತಾಪತ್ರಯಗಳು ಕಣ್ಮರೆಯಾಗುತ್ತಿವೆ. ಮುಂದೆ ಓದಿ.....
-
Bengaluru: ಬೆಂಗಳೂರಿನ ಹೋಟೆಲ್ಗಳಲ್ಲಿ ಗ್ರಾಹಕರಿಗೆ ಶಾಕ್: ಸಾಂಬಾರ್ ಬದಲು ಬೇರೆ ಆಯ್ಕೆ - ಪೋಸ್ಟ್ ವೈರಲ್, ಡಿಸಿ ಹೇಳಿದ್ದೇನು -
Sulekere: ಮಂಡ್ಯದಲ್ಲಿ ಸೂಳೇಕೆರೆ ಮರುನಾಮಕರಣ ಚರ್ಚೆ: ಇತಿಹಾಸಕ್ಕೆ ಮಸಿ ಬಳಿಯಬೇಡಿ ಎಂದ ಜಗದೀಶ್ ಕೊಪ್ಪ -
B Khata: ಬಿ ಖಾತಾದಿಂದ ಎ ಖಾತಾ ಪರಿವರ್ತನೆ ಸವಾಲುಗಳು: ವೆಚ್ಚ, ಪ್ರಕ್ರಿಯೆ ಸ್ವಂತ ವಿವರ ಹಂಚಿಕೊಂಡ ಆಸ್ತಿದಾರ ಶ್ರೀನಿವಾಸ ಮಠ -
Rain in Karnataka: ಬಿರು ಬಿಸಿಲಿನ ನಡುವೆ ಬೆಂಗಳೂರು ಸೇರಿ ಕರ್ನಾಟಕದ ಈ ಜಿಲ್ಲೆಗಳಲ್ಲಿ ನಾಲ್ಕು ದಿನ ಮಳೆ: ಐಎಂಡಿ ರಿಪೋರ್ಟ್ -
ವಿಶ್ವಕಪ್ ಕಿರೀಟದ ಹಿಂದೆ ದೈವಬಲ: ಕರಾವಳಿಯ ಅಳಿಯ ಸೂರ್ಯಕುಮಾರ್ ಯಾದವ್ ನಡೆಗೆ ಮೆಚ್ಚುಗೆಗಳ ಸುರಿಮಳೆ -
New Airport: 3 ಜಿಲ್ಲೆ ಜನರ ಅನುಕೂಲಕ್ಕಾಗಿ ಸರ್ಕಾರದ ಮಾಸ್ಟರ್ ಪ್ಲ್ಯಾನ್: ಬಳ್ಳಾರಿ ಬಳಿ ಹೊಸ ಏರ್ಪೋರ್ಟ್ -
KSRTC: ಸಾರಿಗೆ ಲೋಕಕ್ಕೆ 'ಪಲ್ಲಕ್ಕಿ' ಮೆರುಗು: ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ 115 ಹೊಸ ಬಸ್ಗಳ ಲೋಕಾರ್ಪಣೆ -
ಬೆಂಗಳೂರಲ್ಲಿ ಗ್ಯಾಸ್ ಏಜೆನ್ಸಿಗಳ ಭರ್ಜರಿ ದಂಧೆ: ಸಿಲಿಂಡರ್ ಸಿಗದೇ ಗ್ರಾಹಕರು ಕಂಗಾಲು; ಕಾಳಸಂತೆಯಲ್ಲಿ ₹3,000ಕ್ಕೆ ಮಾರಾಟ -
LPG Gas: ಎಲ್ಪಿಜಿ ನಿಯಮಗಳಲ್ಲಿ ಭಾರೀ ಬದಲಾವಣೆ; ಗ್ರಾಹಕರು ದೂರು ನೀಡಲು ಸಹಾಯವಾಣಿ ಸಂಖ್ಯೆಗಳ ಬಿಡುಗಡೆ -
Gold Rate March 13: ಸತತ 3ನೇ ದಿನವೂ ಚಿನ್ನ - ಬೆಳ್ಳಿ ಬೆಲೆ ಭರ್ಜರಿ ಕುಸಿತ, ಎಷ್ಟಾಗಿದೆ ಇಂದಿನ ಬಂಗಾರದ ಬೆಲೆ -
Resort: ಕರ್ನಾಟಕದಲ್ಲಿ ಶುರುವಾಯ್ತು ರೆಸಾರ್ಟ್ ರಾಜಕೀಯ: ‘ಅವರು ನಮ್ಮ ಅತಿಥಿಗಳು’ ಎಂದ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ -
Horoscope March 13: ಈ ರಾಶಿಯವರ ಬದುಕಲ್ಲಿ ಸಕಾರಾತ್ಮಕ ಬೆಳವಣಿಗೆ, ಅಧಿಕ ಲಾಭ; ದಿನ ಭವಿಷ್ಯ












Click it and Unblock the Notifications