ವಿವಿಗಳಲ್ಲಿ ಏಕರೂಪ ಪರೀಕ್ಷೆ : ಲಿಂಬಾವಳಿ
ಬೆಂಗಳೂರು, ಜು. 14 : ವಿಶ್ವವಿದ್ಯಾಲಯಗಳ ಪರೀಕ್ಷಾ ಸುಧಾರಣಾ ಸಮಿತಿ ಸಲ್ಲಿಸಿರುವ ವರದಿ ಮತ್ತು ಶಿಫಾರಸ್ಸುಗಳ ಬಗ್ಗೆ ಸಮಗ್ರವಾಗಿ ಚರ್ಚಿಸಿ ಅವುಗಳ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಅರವಿಂದ ಲಿಂಬಾವಳಿ ತಿಳಿಸಿದರು.
ವಿಧಾನಸೌಧದಲ್ಲಿ ಸೋಮವಾರ ವಿಶ್ವವಿದ್ಯಾಲಯಗಳ ಪರೀಕ್ಷಾ ಸುಧಾರಣಾ ಸಮಿತಿ ಸಲ್ಲಿಸಿದ್ದ ವರದಿಯನ್ನು ಸ್ವೀಕರಿಸಿ ಅವರು ಮಾತನಾಡುತ್ತಿದ್ದರು. ಪರೀಕ್ಷಾ ಪದ್ಧತಿಯಲ್ಲಿ ಸೂಕ್ತ ಬದಲಾವಣೆ ತಂದೇ ತರುತ್ತೇವೆ ಎಂದು ಹೇಳಿದರು. ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯ ಪರೀಕ್ಷಾ ಪ್ರಾಧಿಕಾರದ ರಚನೆ, ಪ್ರಶ್ನೆ ಪತ್ರಿಕೆ ಸಿದ್ಧತೆಯ ಬದಲು ಪ್ರಶ್ನೆಯ ಸಿದ್ಧತೆ. ಬಹುಆಯ್ಕೆಯ ಪ್ರಶ್ನೆಗಳ ಬಳಕೆ, ಸಮಿಸ್ಟರ್ ಪದ್ಧತಿಯನ್ನು ಬಲಗೊಳಿಸುವುದು, ಪರೀಕ್ಷಾ ಪದ್ಧತಿಯನ್ನು ಬಲಗೊಳಿಸುವುದು, ಪರೀಕ್ಷಾ ಏಕರೂಪತೆ ಸೇರಿದಂತೆ 18 ಪ್ರಮುಖ ಶಿಪಾರಸ್ಸುಗಳನ್ನು ಸಮಿತಿ ಮಾಡಿದೆ. ಕುವೆಂಪು ವಿವಿಯ ನಿವೃದ್ದ ಕುಲಪತಿ ಕೆ ಚಿದಾನಂದಗೌಡ ನೇತೃತ್ವದಲ್ಲಿ ಸಮಿತಿಯನ್ನು ರಚಿಸಲಾಗಿತ್ತು.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications