ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತುಣುಕು ಸುದ್ದಿ: ಸಂಪುಟ ಸಭೆ, ಪ್ರಧಾನ ಗುರುದತ್ತ, ದಸರಾ

By Staff
|
Google Oneindia Kannada News

ಸಚಿವ ಸಂಪುಟ ಸಭೆ
ಬೆಂಗಳೂರು, ಜು. 4: ಜುಲೈ6 ರಂದು ಸೋಮವಾರ ಸಂಜೆ 4ಗಂಟೆಗೆ ಸಚಿವ ಸಂಪುಟದ 14ನೇ ಸಭೆಯನ್ನು ವಿಧಾನ ಸೌಧದ 3ನೇ ಮಹಡಿಯಲ್ಲಿರುವ ಸಚಿವ ಸಂಪುಟ ಸಭಾಮಂದಿರದಲ್ಲಿ ಕರೆಯಲಾಗಿದೆ. ಸಭೆಯು ಮುಗಿದ ನಂತರ ಎಂದಿನಂತೆ ಪತ್ರಿಕಾಗೋಷ್ಠಿ ವ್ಯವಸ್ಥೆಗೊಳಿಸಲಾಗಿದೆ.
*****

ಸಚಿವರ ಸ್ಥಾನಮಾನ

ಬೆಂಗಳೂರು, ಜು. 4: ಡಾ ಪ್ರಧಾನ ಗುರುದತ್, ಅಧ್ಯಕ್ಷರು, ಕುವೆಂಪು ಭಾಷಾ ಭಾರತೀಯ ಸಂಸ್ಥೆ, ಬೆಂಗಳೂರು ಇವರಿಗೆ ಸದರಿ ಹುದ್ದೆಯ ಕಾರ್ಯಭಾರವನ್ನು ವಹಿಸಿಕೊಂಡ ದಿನದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಸಚಿವರ ಸ್ಥಾನಮಾನವನ್ನು ನೀಡಲಾಗಿದೆ ಎಂದು ಸಚಿವಾಲಯದ ಪ್ರಕಟಣೆ ತಿಳಿಸಿದೆ.
***
ವಿಶೇಷಾಧಿಕಾರಿಯಾಗಿ ನೇಮಕ

ಮೈಸೂರು, ಜು. 4: ಮೈಸೂರಿನ ಜಿಲ್ಲಾಧಿಕಾರಿ ಅವರನ್ನು 2009 ನೇ ಸಾಲಿನ ದಸರಾ ಮಹೋತ್ಸವ ವಿಶೇಷಾಧಿಕಾರಿಯನ್ನಾಗಿ ತಕ್ಷಣದಿಂದ ಜಾರಿಗೆ ಬರುವಂತೆ ಸರ್ಕಾರವು ನೇಮಿಸಲಾಗಿದೆ.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X