ಆಡ್ವಾಣಿಯಿಂದ ಮತ್ತೊಂದು ರಥಯಾತ್ರೆ

ಪಕ್ಷದ ಕಾರ್ಯಕರ್ತರ ಪಡೆಗೆ ಅವಕಾಶಗಳು ಹಾಗು ಸವಾಲುಗಳೆರಡರ ಕುರಿತು ಅರಿವು ಮೂಡಿಸಲು ಕೆಲವೇ ತಿಂಗಳಲ್ಲಿ ದೇಶಾದ್ಯಂತ ಪ್ರವಾಸ ಮಾಡುವುದಾಗಿ ಹೇಳಿದ್ದಾರೆ. ಎಲ್ಲಾ ರಾಜ್ಯಗಳಿಗೂ ಭೇಟಿ ನೀಡುವ ಹಾಗೂ ದೊಡ್ಡ ರಾಜ್ಯಗಳಲ್ಲಿ ಒಂದಕ್ಕಿಂತ ಹೆಚ್ಚು ಪ್ರದೇಶಗಳಿಗೆ ಭೇಟಿ ನೀಡುವ ಯೋಜನೆ ಆಡ್ವಾಣಿ ಹಮ್ಮಿಕೊಂಡಿದ್ದಾರೆ. 1990 ರಲ್ಲಿ ಸೋಮನಾಥಪುರದಿಂದ ಆಯೋಧ್ಯವರೆಗೆ ಹಮ್ಮಿಕೊಂಡ ರಥಯಾತ್ರೆಯ ಮೂಲಕವೇ ಆಡ್ವಾಣಿ ಪ್ರಸಿದ್ದಿಗೆ ಬಂದಿದ್ದರು.
ಸಾರ್ವಜನಿಕವಾಗಿ ಟೀಕೆಯಲ್ಲಿ ತೊಡಗಿಸಿಕೊಳ್ಳುವುದರಿಂದ ದೂರವಿರಬೇಕು, ಪ್ರಾಮಾಣಿಕವಾಗಿ ಆತ್ಮಾವಲೋಕನಕ್ಕೆ ಪಕ್ಷದ ವೇದಿಕೆಯಲ್ಲೇ ಅವಕಾಶವಿದೆ. ನಾವು ಸೋತಿದ್ದೇವೆ ಎಂಬುವುದನ್ನು ಒಪ್ಪಿಕೊಳ್ಳೋಣ. ಆದರೆ ಪಕ್ಷಕ್ಕೆ ಮತ್ತೆ ತಲೆಯೆತ್ತುವ ಶಕ್ತಿಯಿದೆ. ನಮ್ಮ ದೇಶದ ನಿಜವಾದ ಸ್ಪೂರ್ತಿಯಾಗಿರುವ ಹಿಂದುತ್ವದೊಂದಿಗೆ ಗುರುತಿಸಿಕೊಳ್ಳಲು ಪಕ್ಷ ಹೆಮ್ಮೆ ಪಡುತ್ತದೆ ಎಂದು ಆಡ್ವಾಣಿ ಹೇಳಿದ್ದಾರೆ.
(ಏಜನ್ಸೀಸ್)












Click it and Unblock the Notifications