503174abhishekಆಟೋಗೆ ಡಿಕ್ಕಿ ಹೊಡೆದ ಡಿಸೈರ್ ಕಾರಿಗೆ ಕಲ್ಲೇಟು/cj/pasha/2009/0529-shivamogga-accident-car-stoned.htmlಶಿವಮೊಗ್ಗ,ಮೇ 29 : ಪಾನಮತ್ತರಾಗಿ ಕಾರು ಚಲಾಯಿಸಿಕೊಂಡು ಬಂದ ಇಬ್ಬರು ಯುವಕರು ಆಟೋವೊಂದಕ್ಕೆ ಡಿಕ್ಕಿ ಹೊಡೆದ ಪರಿಣಾಮ ಆಟೋದಲ್ಲಿ ಪ್ರಯಾಣ ಮಾಡುತ್ತಿದ್ದ ನಗರಸಭಾ ಸದಸ್ಯ ಮರಿಯಪ್ಪರವರ ಮಗ ಅಭಿಷೇಕ್ ತೀವ್ರವಾಗಿ ಗಾಯಗೊಂಡಿದ್ದಾರೆ. ಇದರಿಂದ ಉದ್ರಿಕ್ತವಾದ ಗುಂಪೊಂದು ಅಪಘಾತ ಮಾಡಿದ ಕಾರನ್ನೇ ಕಲ್ಲುಗಳನ್ನು ಬೀಸಿ ಜಖಂಗೊಳಿಸಿದ ಘಟನೆ ಗುರುವಾರದಂದು ರಾತ್ರಿ ನಗರದ ಎಲ್.ಎಲ್.ಆರ್ ರಸ್ತೆಯಲ್ಲಿ ನಡೆದಿದೆ.ಮಲ್ಲಿಕಾರ್ಜುನ ನರ್ಸಿಂಗ್ ಹೋಂನ 36985http://kannada.oneindia.com/img/2009/05/29-shivamogga-abhishek1.jpg503174abhishekಇನ್ನೂ ಪತ್ತೆಯಾಗದ ಬಾಲಕ ಅಭಿಷೇಕ್ ಶವ/news/2009/06/02/bbmp-searching-for-abhishek-body-in-drain.htmlಬೆಂಗಳೂರು, ಜೂ.1: ಲಿಂಗರಾಜಪುರದ ಮೋರಿಯಲ್ಲಿ ಭಾನುವಾರ ಕೊಚ್ಚಿ ಹೋದ ಬಾಲಕ ಅಭಿಷೇಕ್ (5) 36 ಗಂಟೆಗಳು ಕಳೆದರೂ ಇನ್ನೂ ಪತ್ತೆಯಾಗಿಲ್ಲ. ಅಗ್ನಿಶಾಮಕ ದಳ, ಬಿಬಿಎಂಪಿ ಹಾಗೂ ಸ್ಥಳೀಯ ಸ್ವಯಂಸೇವಾ ಸಂಸ್ಥೆಗಳು ನಿರಂತರವಾಗಿ ಶೋಧಕಾರ್ಯದಲ್ಲಿ ತೊಡಗಿಕೊಂಡಿವೆ. ಅಭಿಷೇಕ್ ಪೋಷಕರು ಮಾನಸಿಕವಾಗಿ ಆಘಾತಕ್ಕೆ ಒಳಗಾಗಿದ್ದು ಅವರ ನೋವು ಮುಗಿಲು ಮುಟ್ಟಿದೆ. ಬಾಲಕನ ತಂದೆ ಪ್ರಕಾಶ್ ಮತ್ತು ತಾಯಿ ಭಾರತಿ ತೀವ್ರ 37050http://kannada.oneindia.com/img/2009/06/02-abhishek1.jpg503174abhishekಅಭಿಷೇಕ್ ಮನೆಗೆ ಸಿಎಂ ಭೇಟಿ. ಲಕ್ಷ ರು ಪರಿಹಾರ/news/2009/06/05/yeddyurappa-visits-abhisheks-family.htmlಬೆಂಗಳೂರು, ಜೂ. 5 : ಕಳೆದ ಭಾನುವಾರ ಬೆಂಗಳೂರಿನಲ್ಲಿ ಬಿದ್ದ ಭಾರಿ ಮಳೆಯಿಂದ ಮೋರಿಯೊಂದಲ್ಲಿ ನೀರುಪಾಲಾದ ಆರು ವರ್ಷದ ಬಾಲಕ ಅಭಿಷೇಕ್ ಮೃತದೇಹ ಪತ್ತೆಗಾಗಿ ಬಿಬಿಎಂಪಿ ನಡೆಸಿದ ಕಾರ್ಯಾಚರಣೆ ಸಂಪೂರ್ಣ ವಿಫಲವಾಗಿದ್ದು, ಕೈಚೆಲ್ಲಿ ಕುಳಿತಿದೆ. ಈ ಮಧ್ಯ ಶುಕ್ರವಾರ ಮಧ್ಯಾಹ್ನ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಮೃತ ಬಾಲಕನ ಮನೆಗೆ ತೆರಳಿ ಬಾಲಕನ ತಾಯಿ ಸೇರಿದಂತೆ ಕುಟುಂಬ 37152http://kannada.oneindia.com/img/2009/06/05-bsy-abhishek1.jpg503174abhishekಬಿಬಿಎಂಪಿ ಆಯುಕ್ತ ಸುಬ್ರಹ್ಮಣ್ಯ ಎತ್ತ್ತಂಗಡಿ/news/2009/06/12/subramanya-shunted-out-of-bbmp.htmlಬೆಂಗಳೂರು, ಜೂ. 12 : ಕಳೆದ ಕೆಲವುಗಳಿಂದ ಸರಕಾರವನ್ನು ಭಾರಿ ಮುಜುಗರಕ್ಕೆ ಗುರಿಪಡಿಸಿದ್ದ ಬಿಬಿಎಂಪಿ ಆಯುಕ್ತ ಎಸ್ ಸುಬ್ರಮಣ್ಯ ಅವರನ್ನು ಸರಕಾರ ತಕ್ಷಣದಿಂದಲೇ ಜಾರಿಗೆ ಬರುವಂತೆ ಆ ಸ್ಥಾನದಿಂದ ಎತ್ತಂಗಡಿ ಮಾಡಿದೆ. ಭರತ್ ಲಾಲ್ ಮೀನಾ ಅವರನ್ನು ಬಿಬಿಎಂಪಿ ಹೊಸ ಆಯುಕ್ತರಾಗಿ ನೇಮಿಸಿ ಸರಕಾರ ಆದೇಶ ಹೊರಡಿಸಿದೆ.ಬಿಬಿಎಂಪಿ ಚುನಾವಣೆ ಹತ್ತಿರ ಬರುತ್ತಿರುವ ಹಿನ್ನಲೆಯಲ್ಲಿ ಸರಕಾರ ಈ ತ್ವರಿತ 37305http://kannada.oneindia.com/img/2009/06/12-subramanya1.jpg503174abhishekವರವಾಗಿ ಬಂದ ಮಳೆರಾಯ ಯಮನಾಗಿ ಕಂಡ!/literature/my-karnataka/2009/0707-disaster-management-l-revanasiddaiah.htmlಮಳೆಗಾಲದಲ್ಲಿ ಮಳೆ ಬಂದರೆ ರಾಜ್ಯದೆಲ್ಲೆಡೆಯ ಜನತೆ ಸಂಭ್ರಮ ಆಚರಿಸಿದರೆ ಬೆಂಗಳೂರಿನ ಕೊಳೆಗೇರಿಯ ಜನತೆ, ತಗ್ಗುಪ್ರದೇಶದಲ್ಲಿ ವಾಸಿಸುವ ನಾಗರಿಕರು, ಪ್ರತಿನಿತ್ಯ ಕಚೇರಿಗೆ ಸಂಚರಿಸುವ ಜನರು ಶಪಿಸಲು ಪ್ರಾರಂಭಿಸುತ್ತಾರೆ. ಇತ್ತೀಚೆಗೆ ಅಭಿಷೇಕ್ ನಾಪತ್ತೆಯಾದ ಘಟನೆ ಒಂದು ಉದಾಹರಣೆಯಷ್ಟೇ. ಇಂತಹ ಘಟನೆಗಳು ಏಕೆ ಮರುಕಳಿಸುತ್ತವೆ ಎಂಬುದಕ್ಕೆ ನಮ್ಮ ಆಡಳಿತದಲ್ಲಿ ಉತ್ತರವಿಲ್ಲ. ಇದಕ್ಕೆ ನಾವು ಸಿದ್ಧರಾಗಿಲ್ಲವೆಂದಲ್ಲ. ಆದರೆ ಸಾಧನವನ್ನು ಸರಿಯಾಗಿ ಬಳಸಿಕೊಳ್ಳುತ್ತಿಲ್ಲ. ಆದರೆ, 37840http://kannada.oneindia.com/img/2009/07/07-revanasiddaiah1.jpg109562bbmpನೆರೆ: ಐಟಿ ಕಂಪನಿಗಳಿಂದ ಹಫ್ತಾ ವಸೂಲಿ/news/2009/10/21/flood-relief-corporate-fund-government-supari.htmlಬೆಂಗಳೂರು, ಅ. 21 : ಉತ್ತರ ಕರ್ನಾಟಕ ಪ್ರವಾಹ ಪೀಡಿತರ ನೆರವಿಗೆ ಸ್ವಪ್ರೇರಣೆಯಿಂದ ದೇಣಿಗೆ ಕೊಡುವುದು ಒಂದು ವಿಚಾರ, ಬಲವಂತದಿಂದ ಹಣ ಕೀಳುವುದು ಇನ್ನೊಂದು ಪ್ರಮಾದ. ಅಭಿಮಾನದಿಂದ, ಕಳಕಳಿಯಿಂದ ಜನತೆ ಮತ್ತು ನಾನಾ ಸಂಘ ಸಂಸ್ಥೆಗಳು ಹಣ ಸಂಗ್ರಹಿಸಿ ನಿಧಿ ತುಂಬುವ, ತುಂಬುತ್ತಿರುವ ವರದಿಗಳು ಹರಿದು ಬರುತ್ತಿವೆ. ಆದರೆ, ಐಟಿ ಮತ್ತು ಐಟಿಯೇತರ ಕಂಪನಿಗಳಿಂದ ವ್ಯವಸ್ಥಿತವಾಗಿ ಹಣ 39762http://kannada.oneindia.com/img/2009/10/21-yeddyurappa-new3.jpg109562bbmpಮೇಯರ್ ಇನ್ ಕೌನ್ಸಿಲ್ ಕಾಯಿದೆ ಜಾರಿ: ಸುರೇಶ್ /news/2009/10/22/govt-will-amend-council-of-mayor-act-soon-suresh.htmlಬೆಂಗಳೂರು, ಅ. 22 : ರಾಜ್ಯದ ಎಲ್ಲಾ ಮಹಾನಗರ ಪಾಲಿಕೆಗಳಲ್ಲಿ ಮೇಯರ್ ಇನ್ ಕೌನ್ಸಿಲ್ ಕಾಯಿದೆ ಜಾರಿಗೆ ತರುವ ಹಾಗೂ ಮೇಯರ್ ಗಳ ಅಧಿಕಾರವಧಿ ಹೆಚ್ಚಿಸುವ ಬಗ್ಗೆ ಪರಿಶೀಲನೆ ನಡೆಸಲಾಗುವುದು ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಸುರೇಶಕುಮಾರ್ ಹೇಳಿದರು. ಕರ್ನಾಟಕ ಮೇಯರ್ಸ್ ಫೋರಂ ಪದಾಧಿಕಾರಿಗಳು ನೀಡಿದ 11 ಅಂಶಗಳ ಮನವಿಯನ್ನು ಸ್ವೀಕರಿಸಿದ ನಂತರ 39813http://kannada.oneindia.com/img/2009/10/22-suresh-kumar4.jpg109562bbmpತ್ಯಾಜ್ಯ ವಿಲೇವಾರಿಗೆ ಉಚಿತ ಸಹಾಯವಾಣಿ /news/2009/10/25/students-interact-with-meena-on-bbmp-development.htmlಬೆಂಗಳೂರು, ಅ. 25: ಪರಿಸರ ಮಾಲಿನ್ಯ, ಕುಂಠಿತವಾಗಿರುವ ರಸ್ತೆ ದುರಸ್ತಿ ಕಾಮಗಾರಿ, ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆ, ಟ್ರಾಫಿಕ್ ಸಮಸ್ಯೆ ಹೀಗೆ ವಿವಿಧ ವಿಷಯಗಳನ್ನು ಕುರಿತ ಅನೇಕಾನೇಕ ಪ್ರಶ್ನೆಗಳ ಬಾಣವನ್ನು ಬಿಬಿಎಂಪಿ ಆಯುಕ್ತ ಭರತ್ ಲಾಲ್ ಮೀನಾ ಅವರು ಎದುರಿಸಬೇಕಾಯಿತು. ಮಹಾನಗರಪಾಲಿಕೆ ಸಹಭಾಗಿತ್ವದಲ್ಲಿ ಮಲ್ಲೇಶರಂನ ಮಹಾರಾಣಿ ಲಕ್ಷ್ಮೀ ಅಮ್ಮಣ್ಣಿ ಕಾಲೇಜು ಶನಿವಾರ ಆಯೋಜಿಸಿದ್ದ ಪರಿಸರ 39857http://kannada.oneindia.com/img/2009/10/25-bharatlal-meena1e.jpg109562bbmpಕೊತ್ತನೂರು ಗ್ರಾಮದಲ್ಲಿ 250 ಕೋಟಿ ಆಸ್ತಿ ವಶ/news/2009/10/29/bda-recovers-record-property-worth-250-cr.htmlಬೆಂಗಳೂರು, ಅ. 29 : ಆಸ್ತಿ ವಶಪಡಿಸಿಕೊಳ್ಳುವ ತನ್ನ ಅವಿರತ ಕಾರ್ಯಾಚರಣೆಯಲ್ಲಿ ಬಿಡಿಎ ತನ್ನ ಎಲ್ಲ ಹಳೆಯ ದಾಖಲೆಯನ್ನು ಮುರಿದಿದೆ. ಉತ್ತರಹಳ್ಳಿ ಹೋಬಳಿಯ ಕೊತ್ತನೂರು ಗ್ರಾಮದಲ್ಲಿ 250 ಕೋಟಿ ರುಪಾಯಿ ಬೆಲೆಯ ಆಸ್ತಿಯನ್ನು ವಶಪಡಿಸಿಕೊಂಡಿದೆ. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಕಳೆದ 2008ರ ಆಗಸ್ಟ್ ತಿಂಗಳ 21ರಂದು ಕಾಡುಗೊಂಡನಹಳ್ಳಿಯಲ್ಲಿ ವಶಪಡಿಸಿಕೊಂಡ 98 ಕೋಟಿ ರೂಪಾಯಿ ಮೌಲ್ಯದ ಆಸ್ತಿಯೇ 39921http://kannada.oneindia.com/img/2009/10/29-bda1.jpg109562bbmpರಾಜ್ ಪ್ರತಿಮೆ ಸ್ಥಳಾಂತರಕ್ಕೆ ಹೈಕೋರ್ಟ್ ಸೂಚನೆ/movies/raj/2009/29-hc-suggests-bbmp-to-shift-dr-rajkumar-idol.htmlಬೆಂಗಳೂರು ಪುರಭವನದ ಬಳಿ ಇರುವ ಕಿತ್ತೂರು ರಾಣಿ ಚೆನ್ನಮ್ಮ ಪ್ರತಿಮೆ ಬಳಿ ಸ್ಥಾಪಿಸಲು ಉದ್ದೇಶಿಸಿರುವ ಡಾ.ರಾಜ್ ಕುಮಾರ್ ಪ್ರತಿಮೆಯನ್ನು ಮತ್ತೊಂದೆಡೆಗೆ ಸ್ಥಳಾಂತರಿಸಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಉದ್ದೇಶಿಸಿದೆ. ಈ ವಿಷಯವನ್ನು ಕರ್ನಾಟಕ ಹೈಕೋರ್ಟ್ ಗೆ ಬೆಂಗಳೂರು ಮಹಾನಗರ ಪಾಲಿಕೆ ಬುಧವಾರ ತಿಳಿಸಿದೆ.ಈ ಹಿಂದೆ ಡಾ.ರಾಜ್ ಪ್ರತಿಮೆಯನ್ನು ಚೆನ್ನಮ್ಮ ಪ್ರತಿಮೆಯ ಎದುರುಗಡೆ ಸ್ಥಾಪಿಸಲು ಬಿಬಿಎಂಪಿ ಉದ್ದೇಶಿಸಿತ್ತು. ಹೀಗೆ 39925http://kannada.oneindia.com/img/2009/10/29-rajkumar2.jpg375619rainಚನ್ನೆಕಲ್, ಚಂಡೆಮನೆ ಎಂಬ ಮಳೆಗಾಲದ ಜಲಪಾತ/travel/karnataka/falls/2008/0702-chandemane-channekal-near-jog.htmlಆಗಸದಲಿ ಆಷಾಢದ ಕಾರ್ಮೋಡಗಳ ಕವಿಯುತ್ತಿದ್ದಂತೆ ಮಲೆನಾಡುಗಳಲ್ಲಿ ಜಲಪಾತಗಳ ಧುಮ್ಮಿಕ್ಕುವಿಕೆಗೆ ಏನೋ ಆವೇಗ. ಕಣ್ಮನ ತಣಿಸಿಕೊಳ್ಳಲು ಜೋಗಕ್ಕೆ ಧಾವಿಸುವ ಜನರಿಗೆ ಪಕ್ಕದಲ್ಲೇ ಇರುವ ಇನ್ನೆರಡು ಮೋಹಕ ಜಲಧಾರೆಗಳ ಬಗ್ಗೆ ಗೊತ್ತೇ ಇರುವುದಿಲ್ಲ. ಜೋಗದಲ್ಲಿ ಮನಕ್ಕೆ ಆನಂದ ಸಿಕ್ಕರೆ, ಚಂಡೆಮನೆ ಮತ್ತು ಚನ್ನೆಕಲ್ ಜಲಪಾತದಲ್ಲಿ ದೇಹಕ್ಕೂ ಭರ್ಜರಿ ನೈಸರ್ಗಿಕ ಮಸಾಜ್. ಬರಹ : ಆರ್.ಶರ್ಮಾ, ತಲವಾಟ ಚಿತ್ರ : ಅರವಿಂದ 1977http://kannada.oneindia.com/img/2009/07/08-channekal1.jpg375619rainಸಾಬೂದಾಣಿ ವಡಿ ಮಾಡೋಣ ನಡಿ/recipe/snacks/2008/0618-sabudana-vada.htmlಸುಬ್ಬಣ್ಣ, ನೆಲಮಂಗಲ ಅವರು ಬರೆದ "ಸಾಬೂದಾಣಿ ಖಿಚಡಿ" ಓದಿ ಮನ ಮುಂಬೈನಲ್ಲಿ ನೆಲೆಸಿದ್ದ ದಿನಗಳತ್ತ ಓಡಿತು. ಮಹಾರಾಷ್ಟ್ರದಲಿ ಉಪವಾಸಾಚಿ ಭಾಜಣಿ ಸಾಬೂದಾಣ ಖಿಚಡಿ ಅಥವಾ ಸಾಬೂದಾಣಿಚಿ ವಡಿ. ಮುಂಬೈ ವಡಾಪಾವ್ ಅಂತೆಯೇ ಇದು ಕೂಡ ಫೇಮಸ್. ದಕ್ಷಿಣ ಭಾರತದಲ್ಲಿ ಸೀಮೆ ಅಕ್ಕಿ ಅಥವಾ ಸಬ್ಬಕ್ಕಿ ಸಂಡಿಗೆ, ಪಾಯಸಗಳಲ್ಲಿ ಉಪಯುಕ್ತವಾದರೆ ಕೇರಳದಲಿ ಮರಚೀನಿ (ಸಬ್ಬಕ್ಕಿ ಅನ್ನ) ಕೋಳಿ, ಮೀನು 2134http://kannada.oneindia.com/img/2009/08/25-sabudana-vada1.jpg375619rainಐಲಾ ಚಂಡಮಾರುತಕ್ಕೆ ಪ.ಬಂಗಾಲದಲ್ಲಿ35 ಬಲಿ/news/2009/05/26/cyclone-aila-mamata-buddhadeb-visit-affected-areas.htmlಕೋಲ್ಕತ್ತಾ, ಮೇ. 26 : ಪಶ್ಚಿಮ ಬಂಗಾಲದ ಏಳು ಜಿಲ್ಲೆಗಳು ಮತ್ತು ಒರಿಸ್ಸಾದ ಕರಾವಳಿ ತೀರದ ಪ್ರದೇಶಗಳಿಗೆ ಅಪ್ಪಳಿಸಿರುವ ಐಲಾ ಚಂಡಮಾರುತಕ್ಕೆ ಮೃತಪಟ್ಟವರ ಸಂಖ್ಯೆ ಇದೀಗ 35ಕ್ಕೆ ಏರಿದೆ. ಒಂದು ಲಕ್ಷಕ್ಕೂ ಅಧಿಕ ಮಂದಿ ನಿರಾಶ್ರಿತರಾಗಿದ್ದಾರೆ. ಸೋಮವಾರ ಮಧ್ಯಾಹ್ನ ಕೊಲ್ಕತ್ತಾ ನಗರಕ್ಕೆ ಅಪ್ಪಳಿದ ಚಂಡಮಾರುತ ನಗರದ ಬಸ್, ರೈಲು ಹಾಗೂ ವಿಮಾನ ಸಂಚಾರದಲ್ಲಿ ತೀವ್ರ ವ್ಯತ್ಯಯ ಉಂಟಾಗಿದೆ. 36883http://kannada.oneindia.com/img/2009/05/26-cyclone-aila.jpg375619rainಮಳೆ ಬರದಿದ್ದರೆ ವಿದ್ಯುತ್ ದರ ಹೆಚ್ಚಳ : ಈಶ್ವರಪ್ಪ/news/2009/06/24/govt-likely-to-hike-power-price-ks-eshwarappa.htmlಬೆಂಗಳೂರು, 24 : ಈ ತಿಂಗಳು ಮಳೆ ಬರದಿದ್ದರೆ ವಿದ್ಯುತ್ ದರ ಹೆಚ್ಚಿಸಲಾಗುವುದು ಎಂದು ಇಂಧನ ಸಚಿವ ಕೆ ಎಸ್ ಈಶ್ವರಪ್ಪ ಹೇಳಿದರೆ, ಎಲ್ಲವೂ ಭಗವಂತನ ಇಚ್ಛೆ. ನಾವೂ ಆಶಾವಾದಿಗಳು ದೇವರು ಮಳೆ ಕರುಣಿಸುತ್ತಾನೆ ಎಂಬ ಭರವಸೆ ಇದೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹೇಳಿದರು. ದೇಶಾದ್ಯಂತ ಬರಗಾಲದ ಛಾಯೆ ಆವರಿಸಿರುವ ಹಿನ್ನೆಲೆಯಲ್ಲಿ ಇಂಧನ ಮಂತ್ರಿ ಈಶ್ವರಪ್ಪ 37544http://kannada.oneindia.com/img/2009/06/24-eshwarappa2e.jpg375619rainಇಂದಿನಿಂದ ರಾಜ್ಯಾದ್ಯಂತ ಲೋಡ್ ಶೆಡ್ಡಿಂಗ್ ಆರಂಭ/news/2009/06/26/sweat-bear-it-power-cuts-back-in-karnataka.htmlಬೆಂಗಳೂರು, ಜೂ. 26 : ಮಳೆ ಕೊರತೆಯ ಹಿನ್ನೆಲೆಯಲ್ಲಿ ರಾಜ್ಯದ ಜಲಾಶಯಗಳು ಬರಿದಾಗಿರುವುದು ಮತ್ತು ಕೇಂದ್ರ ಗ್ರೀಡ್ ನಿಂದ ನಿಯಮಿತವಾಗಿ ವಿದ್ಯುತ್ ಪೂರೈಕೆ ಆಗದಿರುವುದರಿಂದ ರಾಜ್ಯಾದ್ಯಂತ ಇಂದಿನಿಂದಲೇ ಲೋಡ್ ಶೆಡ್ಡಿಂಗ್ ಜಾರಿಗೆ ಬರಲಿದೆ. ಆದರೆ ಇಂಧನ ಸಚಿವ ಕೆ ಎಸ್ ಈಶ್ವರಪ್ಪ ಲೋಡ್ ಶೆಡ್ಡಿಂಗ್ ಕ್ರಮವನ್ನು ತಳ್ಳಿಹಾಕಿದ್ದಾರೆ.ಈಗಾಗಲೇ ರಾಜಧಾನಿ ಬೆಂಗಳೂರಿನಲ್ಲಿ ಬುಧವಾರದಿಂದಲೇ ಅನಿಮಿತ ಲೋಡ್ ಶೆಡ್ಡಿಂಗ್ ಜಾರಿಗೆ 37594http://kannada.oneindia.com/img/2009/06/26-eshwarappa2e.jpgnews"> 5 ದಿನವಾಯಿತು ಅಭಿಷೇಕ್ ಮೃತದೇಹ ಪತ್ತೆಯಾಗಿಲ್ಲ | Abhishek | BBMP | Fire Station | S Puttaswamy | Rain | Lokayukta | Santosh Hegde | 5 ದಿನವಾಯಿತು ಅಭಿಷೇಕ್ ಮೃತದೇಹ ಪತ್ತೆಯಾಗಿಲ್ಲ - Kannada Oneindia

5 ದಿನವಾಯಿತು ಅಭಿಷೇಕ್ ಮೃತದೇಹ ಪತ್ತೆಯಾಗಿಲ್ಲ

ಬೆಂಗಳೂರು, ಜೂ. 4 : ಕಳೆದ ಭಾನುವಾರ ಮಳೆಯಿಂದಾಗಿ ಲಿಂಗರಾಜಪುರದ ಮೋರಿಯೊಂದರಲ್ಲಿ ತೇಲಿ ಹೋದ ಬಾಲಕ ಅಭಿಷೇಕ್ ಮೃತ ದೇಹ ಐದು ದಿನವಾದರೂ ಪತ್ತೆಯಾಗಿಲ್ಲ. ಪತ್ತೆ ಕಾರ್ಯ ಮುಂದುವರಿಸಿರುವ ಅಗ್ನಿಶಾಮಕ ಮತ್ತು ಬಿಬಿಎಂಪಿ ಅಧಿಕಾರಗಳ ಕಾರ್ಯಾಚರಣೆ ಗುರುವಾರವೂ ವಿಫಲವಾಗಿದೆ. ಮಗುವನ್ನು ಕಳೆದುಕೊಂಡ ತಾಯಿಯ ಅರಣ್ಯರೋದನ ಮುಂದುವರೆದಿದ್ದು, ಮತ ಕೇಳಲು ಬರುವ ರಾಜಕೀಯ ನಾಯಕರು ಮಗು ಕಳೆದುಕೊಂಡ ತಾಯಿ ಸಾಂತ್ವನಕ್ಕೆ ಆಗಮಿಸದಿರುವುದು ವಿಷಾದಕರ ಸಂಗತಿಯೇ ಸರಿ.

ಆದರೆ, ಲೋಕಾಯುಕ್ತ ನ್ಯಾಯಮೂರ್ತಿ ಎಂ ಸಂತೋಷ ಹೆಗ್ಡೆ ಮತ್ತು ಉಪಲೋಕಾಯುಕ್ತ ಪತ್ರಿ ಬಸವನಗೌಡ ಮಾತ್ರ ಮೃತ ಬಾಲಕನ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದ್ದಾರಷ್ಟೇ. ಕರಳು ಬಳ್ಳಿಯನ್ನು ಕಳೆದುಕೊಂಡ ತಾಯಿ ಸಂಬಂಧಪಟ್ಟವರಿಗೆ ಹಿಡಿ ಶಾಪ ಹಾಕುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು. ಮುಖ್ಯಮಂತ್ರಿ ಯಡಿಯೂರಪ್ಪ, ಬೆಂಗಳೂರು ಉಸ್ತುವಾರಿ ಸಚಿವ ಆರ್ ಅಶೋಕ್ ಅವರು ಘಟನೆಗೆ ಸಂಬಂಧಿಸಿದಂತೆ ತುಟಿಪಿಟ್ಟೆನ್ನದಿರುವುದು ಆಶ್ಚರ್ಯ ಮತ್ತು ಕೋಪಕ್ಕೆ ಕಾರಣವಾಗಿದೆ. ಪಕ್ಷದಲ್ಲಿ ಎದ್ದಿರುವ ಬಂಡಾಯ ಮತ್ತು ಭಿನ್ನಾಭಿಪ್ರಾಯ ಯಡಿಯೂರಪ್ಪ ಅವರನ್ನು ಕಿವುಡರನ್ನಾಗಿಸಿರುವುದು ಸುಳ್ಳಲ್ಲ.

ಕಳೆದ ಭಾನುವಾರ ಬೆಂಗಳೂರಿನಲ್ಲಿ ಬಿದ್ದ ಮಳೆಯಿಂದಾಗಿ ಲಿಂಗಾರಾಜಪುರದ ಬಳಿ ತಾಯಿಯ ಜೊತೆಗೆ ಹೊರಬಂದಿದ್ದ ಅಭಿಷೇಕ್ ಮೋರಿಯಲ್ಲಿ ಕೊಚ್ಚಿ ಹೋಗಿದ್ದ. ಮೋರಿಯಲ್ಲಿ ಹೂಳೆತ್ತುವ ಕಾರ್ಯ ನಡೆದಿದೆ. ಇಂದು ಚಂದ್ರಿಕಾ ಸಾಬೂನು ಕಾರ್ಖಾನೆ ಬಳಿಯ ಪೆಟ್ರೋಲ್ ಬಂಕ್ ವರೆಗೂ ಕಾರ್ಯಾಚರಣೆ ನಡೆಸಲಾಗಿತಾದರೂ ಅಭಿಷೇಕ್ ನ ಮೃತದೇಹ ಮಾತ್ರ ಪತ್ತೆಯಾಗಿಲ್ಲ. ಮೊದಲ ಹಂತದಲ್ಲಿ ಅಭಿಷೇಕ್ ಬಿದ್ದ ಮೋರಿಯಿಂದ ನಾಗಾವರ ಕೆರೆವರೆಗೂ ಶೋಧಕಾರ್ಯ ಮಾಡಲಾಗಿತ್ತು. ತೇಲಿ ಹೋದಾಗಿನಿಂದ ಬಿಬಿಎಂಪಿ, ಅಗ್ನಿಶಾಮಕ ದಳಗಳು ಕಾರ್ಯಾಚರಣೆ ಆರಂಭಿಸಿವೆಯಾದರೂ ಫಲಿತಾಂಶ ಮಾತ್ರ ಶೂನ್ಯವಾಗಿದೆ.

ಐದನೇ ದಿನವಾದ ಇಂದು ಲಿಂಗಾರಾಜಪುರದಲ್ಲಿ ಬೆಳಗ್ಗೆಯಿಂದಲೇ ಅಗ್ನಿಶಾಮಕ ದಳ ಮತ್ತು ಅಕ್ಕಪಕ್ಕದ ಸ್ಥಳೀಯರು ಮೃತದೇಹ ಸಿಗಬಹುದು ಎಂಬ ಆಶಯದಿಂದಲೇ ಮತ್ತೊಮ್ಮೆ ಶೋಧ ಕಾರ್ಯಾಚರಣೆ ಆರಂಭಿಸಲಾಯಿತು. ಅನುಮಾನ ಬಂದ ಜಾಗದಲ್ಲಿ ಜಾಗರೂಕತೆಯಿಂದ ಶೋಧನೆ ನಡೆಸಿದರೂ ಪ್ರಯೋಜನವಾಗಲಿಲ್ಲ. ಅಗ್ನಿಶಾಮಕ ಪಡೆಯ ಸುಮಾರು 75 ಮಂದಿ ಹಾಗೂ 15 ಸ್ಥಳೀಯರು ಕಾರ್ಯಾಚರಣೆ ನಡೆಸಿದ್ದಾರೆ ಎಂದು ಬಿಬಿಎಂಪಿ ಪೂರ್ವ ವಲಯದ ಆಯುಕ್ತ ಎಸ್ ಪುಟ್ಟಸ್ವಾಮಿ ತಿಳಿಸಿದ್ದಾರೆ.

ಜನನಾಯಕರ ವಿರುದ್ಧ ತೀವ್ರಗೊಂಡ ಅಸಮಾಧಾನ

ಕಳೆದ ಐದು ದಿನಗಳಿಂದ ಮಗುವನ್ನು ಕಳೆದುಕೊಂಡು ಅಭಿಷೇಕ್ ನ ಕುಟುಂಬ ದುಃಖದ ಮಡುವಿನಲ್ಲಿ ದಿನದೂಡುತ್ತಿದೆ. ಕಳೆದುಕೊಂಡ ಮಗನನ್ನು ಮರಳಿಸಲು ಸಾಧ್ಯವಿಲ್ಲ. ಕನಿಷ್ಟ ಸೌಜನ್ಯಕ್ಕಾದರೂ ಮಗುವಿನ ತಾಯಿಗೆ ಎರಡು ಸಾಂತ್ವನದ ಮಾತಗಳನ್ನು ಹೇಳಲು ಬಾರದ ರಾಜಕೀಯ ನಾಯಕರ ವಿರುದ್ಧ ಜನರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಚುನಾವಣೆ ಬಂತೆಂದರೆ ಮತ ಕೇಳಲು ನಾಮುಂದು ತಾಮುಂದು ಎಂದು ಮನೆಮನೆಗೆ ಸುತ್ತುವ ನಾಯಕರು, ಸಂಕಷ್ಟದಲ್ಲಿರುವ ಜನರ ಕಷ್ಟಕ್ಕೆ ಆಗದಿದ್ದರೆ ಹೇಗೆ ಎಂದು ಜನರು ಆಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

(ದಟ್ಸ್ ಕನ್ನಡ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+