ಸೋನಿಯಾ ಭೇಟಿಯ ಮರ್ಮ ಬಿಟ್ಟುಕೊಟ್ಟ ಎಚ್ಡಿಕೆ!
ಈ ಕುರಿತು ಕಾಂಗ್ರೆಸ್ ಹೈಕಮಾಂಡ್ ನೊಂದಿಗೆ ಚರ್ಚಿಸಲು ಕುಮಾರಸ್ವಾಮಿ ಭಾನುವಾರ ಸಂಜೆ ದೆಹಲಿಗೆ ದೌಡಾಯಿಸಿದ್ದಾರೆ. ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ಡಿ ದೇವೇಗೌಡ ಅವರ ಮನವೊಲಿಸುವ ಪ್ರಯತ್ನ ನಡೆಯುತ್ತಿದೆ. ಹಾಗಾಗಿ ಕುಮಾರಸ್ವಾಮಿ ಈ ವಿಚಾರವನ್ನು ಬಹಿರಂಗ ಪಡಿಸುತ್ತಿಲ್ಲ ಎನ್ನಲಾಗಿದೆ. ಜೆಡಿಎಸ್ ಮುಂದಿನ ನಿಲುವು ಕುರಿತಂತೆ ದೇವೇಗೌಡರೊಂದಿಗೆ ಸಮಾಲೋಚನೆ ನಡೆಸಲಾಗಿದೆ.
ಯುಪಿಎಗೆ ಬೆಂಬಲ ನೀಡಬೇಕೆ ಬೇಡವೆ ಎಂಬ ಬಗ್ಗೆ ಕುಮಾರಸ್ವಾಮಿ ಮತ್ತು ದೇವೇಗೌಡರು ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧ ಎಂದು ಜೆಡಿಎಸ್ ನ ನೂತನ ಸಂಸದ ಚೆಲುವರಾಯ ಸ್ವಾಮಿ ತಿಳಿಸಿದ್ದಾರೆ. ದೇವೇಗೌಡರೊಂದಿಗೆ ಚರ್ಚಿಸಿದ ವಿಚಾರಗಳನ್ನು ಬಹಿರಂಗಪಡಿಸಲು ಅವರು ನಿರಾಕರಿಸಿದರು. 15ನೇ ಲೋಕಸಭೆ ಚುನಾವಣೆಯಲ್ಲಿ 261 ಸ್ಥಾನಗಳನ್ನು ಪಡೆದಿರುವ ಯುಪಿಎ ಒಕ್ಕೂಟಕ್ಕೆ ಇನ್ನೂ11 ಸಂಸದರ ಬೆಂಬಲ ಅಗತ್ಯವಿದೆ. ಮೂರು ಸಂಸದರ ಬಲವನ್ನು ಹೊಂದಿರುವ ಜೆಡಿಎಸ್ ಬೆಂಬಲ ನೀಡುವಂತೆ ಕಾಂಗ್ರೆಸ್ ಕೋರಿದೆ.
ಲೋಕಸಭೆ ಚುನಾವಣೆಗೂ ಮುನ್ನ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ ಅವರನ್ನು ಕುಮಾರಸ್ವಾಮಿ ಭೇಟಿಯಾಗಿದ್ದರು. ಅವರ ಭೇಟಿಯ ಮರ್ಮ ಈಗ ಬಹಿರಂಗವಾದಂತಾಗಿದೆ. ಯುಪಿಎ ಒಕ್ಕೂಟಕ್ಕೆ ಬೆಂಬಲ ವ್ಯಕ್ತಪಡಿಸುವ ಬಗ್ಗೆ ಅದರ ಸಾಧಕ ಬಾಧಕಗಳ ಬಗ್ಗೆ ಜೆಡಿಎಸ್ ಲೆಕ್ಕಾಚಾರ ಹಾಕುತ್ತಿದ್ದು ಶೀಘ್ರದಲ್ಲೇ ಅಂತಿಮ ತೀರ್ಮಾನ ಕೈಗೊಳ್ಳುವ ಸಾಧ್ಯತೆಗಳಿವೆ.
ಮೇ
21ಕ್ಕೆ
ಬಿಜೆಪಿ
ಶಾಸಕಾಂಗ
ಸಭೆ
ಬಿಜೆಪಿ
ಶಾಸಕಾಂಗ
ಪಕ್ಷದ
ಸಭೆಯನ್ನು
ಮೇ
21ಕ್ಕೆ
ಮುಂದೂಡಲಾಗಿದೆ.
ದೆಹಲಿಯಲ್ಲಿ
ಸೋಮವಾರ
(ಮೇ
18)
ಬಿಜೆಪಿ
ಚುನಾವಣಾ
ಸಮಿತಿ
ಸಭೆ
ನಡೆಯಲಿದೆ.
ಮುಖ್ಯಮಂತ್ರಿ
ಬಿ
ಎಸ್
ಯಡಿಯೂರಪ್ಪ,
ಬಿಜೆಪಿ
ರಾಜ್ಯಾಧ್ಯಕ್ಷ
ಸದಾನಂದಗೌಡ,
ಸಂಸದ
ಅನಂತಕುಮಾರ್
ಸಭೆಯಲ್ಲಿ
ಭಾಗವಹಿಸಲಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)
ಮಹಾಚುನಾವಣೆ
2009
ಫಲಿತಾಂಶ
:
ಕ್ಷಣಕ್ಷಣದ
ಸುದ್ದಿ
ಲೋಕಸಭೆ
ಚುನಾವಣೆ
ಲೇಖನಗಳಿಗೆ
ಇಲ್ಲಿ
ಕ್ಲಿಕ್ಕಿಸಿ