ಚಿತ್ರದುರ್ಗ ಗೆದ್ದವರು ಬಿದ್ದವರ ವಿವರಗಳು
ಜನಾರ್ಧನಸ್ವಾಮಿಯವರು 1,35,656 ಮತಗಳ ಅಂತರದಿಂದ ಜಯಶೀಲರಾಗಿದ್ದಾರೆ. ಇವರ ಪ್ರತಿಸ್ಪರ್ಧಿಯಾದ ಭಾರತೀಯ ಕಾಂಗ್ರೇಸ್ ಪಕ್ಷದ ಅಭ್ಯರ್ಥಿ ಡಾ;ಬಿ.ತಿಪ್ಪೇಸ್ವಾಮಿಯವರು 2,35,306 ಮತಗಳನ್ನು ಪಡೆದಿದ್ದಾರೆ. ಪರಿಶಿಷ್ಟ ಜಾತಿಗೆ ಮೀಸಲಾದ ಈ ಕ್ಷೇತ್ರದಲ್ಲಿ 11ಅಭ್ಯರ್ಥಿಗಳು ಚುನಾವಣೆಗೆ ಸ್ಪರ್ಧಿಸಿದ್ದರು. ಲೋಕಸಭಾ ಕ್ಷೇತ್ರವು ಜಿಲ್ಲೆಯ 6 ವಿಧಾನಸಭಾ ಕ್ಷೇತ್ರಗಳು ಸೇರಿದಂತೆ ತುಮಕೂರು ಜಿಲ್ಲೆಯ ಶಿರಾ, ಪಾವಗಡ ಕ್ಷೇತ್ರಗಳನ್ನು ಒಳಗೊಂಡಿದೆ.
ಕ್ಷೇತ್ರದಲ್ಲಿ 15,33,844ಮತದಾರರಿದ್ದು ಏಪ್ರಿಲ್ 23 ರಂದು ನಡೆದ ಮತದಾನದಲ್ಲಿ8,36,127 ಮತದಾರರು ಮತ ಚಲಾಯಿಸಿದ್ದರು. ಬಿ.ಜೆ.ಪಿ. ಮತ್ತು ಕಾಂಗ್ರೇಸ್ ಪಕ್ಷದ ಅಭ್ಯರ್ಥಿಗಳನ್ನು ಹೊರತುಪಡಿಸಿ ಜಾತ್ಯಾತೀತ ಜನತಾದಳದ ಎಂ.ರತ್ನಾಕರ್ 1,46,030,ಮತ್ತು ಬಹುಜನ ಸಮಾಜವಾದಿ ಪಕ್ಷದ ಎಂ.ಜಯಣ್ಣ 28,713, ರಾಷ್ಟ್ರೀಯ ಜನತಾದಳದ ಶಶಿಶೇಖರ್ ನಾಯಕ್ 16,258, ಮತ್ತು ಪಕ್ಷೇತರರಾದ ಎಂ.ಕುಂಬಯ್ಯ 4123,ಗಣೇಶ3727, ಕೆ.ಹೆಚ್.ದುರ್ಗಸಿಂಹ5333, ರಾಮಚಂದ್ರಪ್ಪ 4591,ಬಿ.ಸುಜಾತ 5393ಹಾಗೂ ಹನುಮಂತಪ್ಪ ತೇಗನೂರು 15,373 ಮತಗಳನ್ನು ಪಡೆದಿದ್ದಾರೆ. 1081 ಅಂಚೆ ಮತಪತ್ರಗಳು ಬಂದಿದೆ ಇದರಲ್ಲಿ ೩೧೮ ಮತಗಳು ತಿರಸ್ಕೃತಗೊಂಡಿವೆ.
(ದಟ್ಸ್ ಕನ್ನಡ ವಾರ್ತೆ)
ಮಹಾಚುನಾವಣೆ
2009
ಫಲಿತಾಂಶ
:
ಕ್ಷಣಕ್ಷಣದ
ಸುದ್ದಿ
ಲೋಕಸಭೆ
ಚುನಾವಣೆ
ಲೇಖನಗಳಿಗೆ
ಇಲ್ಲಿ
ಕ್ಲಿಕ್ಕಿಸಿ