ಕುಮಾರಸ್ವಾಮಿ, ಸದಾನಂದಗೌಡ ಮುನ್ನಡೆ
ಬೆಂಗಳೂರು, ಮೇ. 16 : ಮತಎಣಿಕೆ ಆರಂಭವಾಗಿದೆ. ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಜೆಡಿಎಸ್ ಆಭ್ಯರ್ಥಿ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಆರಂಭಿಕ ಮುನ್ನೆಡೆ ಕಂಡುಕೊಂಡಿದ್ದು, 3149 ಮತಗಳ ಮುನ್ನೆಡೆ ಪಡೆದಿದ್ದಾರೆ. ಮೈಸೂರಿನಲ್ಲಿ ಬಿಜೆಪಿ ಅಭ್ಯರ್ಥಿ ಸಿ ಎಚ್ ವಿಜಯಶಂಕರ್ ಅವರು ಆರಂಭದಲ್ಲಿ ಮುನ್ನಡೆ ಕಾಯ್ದುಕೊಂಡಿದ್ದಾರೆ.
ಉತ್ತರ ಕನ್ನಡದಲ್ಲಿ ಬಿಜೆಪಿ ಅನಂತಕುಮಾರ್ ಹೆಗಡೆ ಮುನ್ನೆಡೆ ಸಾಧಿಸಿದ್ದಾರೆ. ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಡಿ ವಿ ಸದಾನಂದಗೌಡ, ಮಂಡ್ಯದಲ್ಲಿ ಜೆಡಿಎಸ್ ಅಭ್ಯರ್ಥಿ ಚೆಲುವರಾಯಸ್ವಾಮಿ 2700 ಮತಗಳ ಮುನ್ನಡೆ, ದಾವಣಗೆರೆ ಕಾಂಗ್ರೆಸ್, ಬೀದರ್ ಕ್ಷೇತ್ರದಲ್ಲಿ ಮಾಜಿ ಮುಖ್ಯಮಂತ್ರಿ ಧರ್ಮಸಿಂಗ್ 613 ಮತಗಳ ಮುನ್ನಡೆ, ಧಾರವಾಡ ಮತ್ತು ಚಿತ್ರದುರ್ಗದಲ್ಲಿ ಬಿಜೆಪಿ ಮುನ್ನಡೆ ಪಡೆದಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)
ಲೋಕಸಭೆ ಚುನಾವಣೆ2009 ತಾಜಾ ಸುದ್ದಿಗಳು
ಲೋಕಸಭೆ ಚುನಾವಣೆ ಗೆದ್ದವರು ಬಿದ್ದವರು












Click it and Unblock the Notifications