ಅಫ್ಜಲ್ ನನ್ನು ಗಲ್ಲಿಗೇರಿಸಲು ಭಾರತಕ್ಕೆ ಶಕ್ತಿಯಿಲ್ಲ

Afzal guru
ನವದೆಹಲಿ, ಮೇ. 13 : ಸಂಸತ್ ಮೇಲೆ ದಾಳಿ ನಡೆಸಿದ ಉಗ್ರ ಅಫ್ಜಲ್ ಗುರುವನ್ನು ನೇಣಿಗೇರಿಸಲು ಕಾಂಗ್ರೆಸ್ ಬಿಜೆಪಿ ಪಕ್ಷಗಳು ರಾಜಕೀಯ ಮಾಡತೊಡಗಿದ್ದರೆ, ನನ್ನ ಪತಿಯನ್ನು ಗಲ್ಲಿಗೇರಿಸಲು ಭಾರತದ ಯಾವ ಶಕ್ತಿಯಿಂದಲೂ ಸಾಧ್ಯವಿಲ್ಲ ಎಂದು ಅಫ್ಜಲ್ ಗುರು ಪತ್ನಿ ತಬಸಮ್ ಗುರು ಹೇಳಿದ್ದಾರೆ.

ಕಾಶ್ಮೀರ ಮೂಲದ ರೈಸಿಂಗ್ ಪತ್ರಿಕೆಗೆ ಸಂದರ್ಶನ ನೀಡಿದ ಅವರು, ರಾಜಕೀಯ ಉದ್ದೇಶಕ್ಕಾಗಿ ರಾಜಕೀಯ ಪಕ್ಷಗಳು ಏನು ಬೇಕಾದರೂ ಮಾಡಬಹುದು. ಆದರೆ, ಒಬ್ಬ ಮುಗ್ಧ ಮನುಷ್ಯನನ್ನು ಗಲ್ಲಿಗೇರಿಸುವ ಹುಂಬತನ ಅವುಗಳಿಗೆ ಇಲ್ಲ. ನನ್ನ ಪತಿಯನ್ನು ಸಂಸತ್ ದಾಳಿಯ ಪ್ರಕರಣದಲ್ಲಿ ಸಿಕ್ಕಿಸಲಾಗಿದೆ ಎಂದು ತಬಸಮ್ ಗುರು ಸಮರ್ಥಿಸಿಕೊಂಡಿದ್ದಾರೆ.

ಅಫ್ಜಲ್ ಗುರುನನ್ನು ಗಲ್ಲಿಗೇರಿಸುವಂತೆ ಬಿಜೆಪಿ ನಾಯಕ ಎಲ್ ಕೆ ಅಡ್ವಾಣಿ ಮತ್ತು ಗುಜರಾತ ಮುಖ್ಯಮಂತ್ರಿ ನರೇಂದ್ರ ಮೋದಿ ಪದೆಪದೇ ಒತ್ತಾಯಿಸುತ್ತಿದ್ದಾರೆ. ಆದರೆ, ಕಾಂಗ್ರೆಸ್ ಪಕ್ಷ ಗಲ್ಲಿಗೇರಿಸಲು ಮನಸ್ಸು ಮಾಡುತ್ತಿಲ್ಲ. ಜಮ್ಮು-ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ಧುಲ್ ಅವರು ಅಫ್ಜಲ್ ಗುರುನನ್ನು ಗಲ್ಲಿಗೇರಿಸಲು ಒತ್ತಾಯಿಸಿದರೆ, ಕ್ಷಣಾರ್ಧದಲ್ಲಿ ಅವರ ಸರಕಾರ ಪತನಗೊಳ್ಳಲಿದೆ. ಇದಕ್ಕೆ ಇತಿಹಾಸ ಪಾಠ ಎಂದು ಅವರು, 1884ರಲ್ಲಿ ಜಮ್ಮು ಕಾಶ್ಮೀರ ಲಿಬರೇಷನ್ ಫ್ರಂಟ್ ಮುಖ್ಯಸ್ಥ ಮಖ್ಬುಲ್ ಭಟ್ ಅವರನ್ನು ಗಲ್ಲಿಗೇರಿಸಲಾಯಿತು. ಅಂದು ದಿಲ್ಲಿಯಲ್ಲಿ ಕಾಂಗ್ರೆಸ್ ಸರಕಾರವಿತ್ತು. ಅಂದು ಏನಾಯಿತು ಎನ್ನುವುದು ಇಡೀ ಜಗತ್ತಿಗೆ ಗೊತ್ತಿದೆ ಎಂದು ತಬಸಮ್ ಹೇಳಿದರು.

(ಏಜನ್ಸೀಸ್)

ಅಫ್ಜಲ್ ಗುರು ಸಲ್ಲಿಸಿದ್ದ ರಿಟ್ ಅರ್ಜಿ ವಜಾ
ಅಫ್ಜಲ್ ಗುರುನನ್ನು ಗಲ್ಲಿಗೇರಿಸಬೇಕೆ ? ಕಾಂಗ್ರೆಸ್

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+