ನರೇಂದ್ರ ಮೋದಿ ಕೊಲೆಗಾರ, ಲಾಲು
ಸೋಮವಾರ ಸಂಜೆ ಚಂಡೀಗಢ್ ಲೋಕಸಭೆ ಕ್ಷೇತ್ರದ ಅಭ್ಯರ್ಥಿ ಹಫೀಜ್ ಅನ್ವರ್ ಉಲ್ ಹಕ್ ಪರ ಪ್ರಚಾರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಅಡ್ವಾಣಿ ಕನಸು ನನಸಾಗುವುದಿಲ್ಲ ಎಂದರು. 2002ರಲ್ಲಿ ಗುಜರಾತ ಹತ್ಯಾಕಾಂಡಕ್ಕೆ ಸಂಬಂಧಿಸಿದಂತೆ ನರೇಂದ್ರ ಮೋದಿ ತೀವ್ರ ದಾಳಿ ನಡೆಸಿದ ಲಾಲು, ಮೋದಿ ನೂರಾರು ಮಂದಿಯನ್ನು ಹತ್ಯೆ ಮಾಡಿದ ವ್ಯಕ್ತಿ. ಆತನನ್ನು ಕೊಲೆಗಾರ ಅಂದರೂ ತಪ್ಪಿಲ್ಲ. ಇದೇ ಕಾರಣಕ್ಕೆ ಸುಪ್ರೀಂಕೋರ್ಟ್ ಹತ್ಯಾಕಾಂಡಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲು ವಿಶೇಷ ಸಮಿತಿಯೊಂದನ್ನು ರಚಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೋಮುವಾದಿ ಶಕ್ತಿಗಳನ್ನು ಅಧಿಕಾರದಿಂದ ದೂರವಿಡಲು ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷ ಹಾಗೂ ಲೋಕಜನ ಶಕ್ತಿ ಪಕ್ಷಗಳೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಲಾಗಿದೆ. ಕೇಂದ್ರದಲ್ಲಿ ಬಿಜೆಪಿ ಅಧಿಕಾರ ಹಿಡಿಯುವುದು ಅಸಾಧ್ಯದ ಮಾತು. ಬಿಜೆಪಿ ಪ್ರಧಾನಮಂತ್ರಿ ಹುದ್ದೆಯ ಅಭ್ಯರ್ಥಿ ಎಲ್ ಕೆ ಅಡ್ವಾಣಿ ಅವರು ಪ್ರಧಾನಿ ಆಗುವುದು ಕನಸಿನ ಮಾತು ಎಂದು ಆರ್ ಜೆಡಿ ಮುಖ್ಯಸ್ಥ ಲಾಲು ಪ್ರಸಾದ ಯಾದವ್ ಹೇಳಿದ್ದಾರೆ.
ಬಿಹಾರ್ ದಲ್ಲಿ ಕಳೆದ ಲೋಕಸಭೆ ಚುನಾವಣೆಯಲ್ಲಿ ಅಡ್ವಾಣಿ ನಾಗಾಲೋಟಕ್ಕೆ ಕಡಿವಾಣ ಹಾಕಿದ್ದೇವು, ಈ ಸಾರಿಯೂ ಅದರಲ್ಲಿ ನಾವು ಯಶಸ್ವಿಯಾಗುತ್ತೇವೆ. ಬಿಹಾರ್ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಮೋದಿಯೊಂದಿಗೆ ಲೂಧಿಯಾನಾದಲ್ಲಿ ವೇದಿಕೆ ಹಂಚಿಕೊಂಡಿದ್ದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಅವರು, ನಿತೀಶ್ ಬಣ್ಣ ಬಯಲಾಗಿದೆ ಎಂದು ಟೀಕಿಸಿದರು.
(ಏಜನ್ಸೀಸ್)
ಪೂರಕ
ಓದಿಗೆ:
ಅಡ್ವಾಣಿ
ಪ್ರಧಾನಿ
ಆಗಲ್ಲ,
ಕೋಡಿಮಠ
ಶ್ರೀಗಳು
2010ಕ್ಕೆ
ಮತ್ತೆ
ಲೋಕಸಭೆ
ಚುನಾವಣೆ
ಲೂಧಿಯಾನಾದಲ್ಲಿ
ಎನ್
ಡಿಎ
ಶಕ್ತಿ
ಪ್ರದರ್ಶನ