ಕ್ಯಾಪ್ಟನ್ ವೇದಿಕೆ ಇದೀಗ ನಾಗರಿಕ ಶಕ್ತಿ
ಹೆಬ್ಬಾಳ ಬಳಿಯ ಜೈನ್ ಹೆರಿಟೇಜ್ ಶಾಲೆಯ ಸಭಾಂಗಣದಲ್ಲಿ ಭಾನುವಾರ ನಡೆದ ಸಭೆಯಲ್ಲಿ ವೈದ್ಯರು, ಶಿಕ್ಷಕರು, ಪೈಲೆಟ್ ಗಳು, ಸಾಫ್ಟ್ ವೇರ್ ಇಂಜಿನಿಯರ್ ಗಳು ಸೇರಿದಂತೆ ವಿವಿಧ ಕ್ಷೇತ್ರದ ಅನೇಕ ಮಂದಿ ಪಾಲ್ಗೊಂಡಿದ್ದರು. ರಾಜಧಾನಿ ಸೇರಿದಂತೆ ನಾಡಿನ ವಿವಿಧ ಸಮಸ್ಯೆಗಳ ಬಗ್ಗೆ ಅಧ್ಯಯನದ ಮೂಲಕ ಪರಿಹಾರೋಪಾಯಗಳನ್ನು ಕಂಡು ಹಿಡಿಯುವುದು ಸಂಘಟನೆಯ ಮುಖ್ಯ ಉದ್ದೇಶವಾಗಿದೆ. ಪಕ್ಷಾತೀತ ಸಂಘಟನೆಯಾದ ನಾಗರಿಕ ವೇದಿಕೆ ವತಿಯಿಂದ ಯಾವುದೇ ಪ್ರತಿಭಟನೆ ನಡೆಸಬಾರದು. ಬದಲಿಗೆ ಸಮಸ್ಯೆಗಳ ಬಗ್ಗೆ ಸರಕಾರಕ್ಕೆ ಪದೇಪದೇ ಮನವರಿಕೆ ಮಾಡಿಕೊಡಬೇಕು ಎಂದು ಸಭೆಯಲ್ಲಿ ತೀರ್ಮಾನಿಸಲಾಯಿತು.
ಶಿಕ್ಷಣ, ಸಾರ್ವಜನಿಕ ಸೇವೆ, ಆಡಳಿತದಲ್ಲಿ ದಕ್ಷತೆ, ರಾಷ್ಟ್ರದ ಏಕತೆ ಹಾಗೂ ಸಾರ್ವಜನಿಕ ನೀತಿ ಈ ಐದು ವಿಷಯಗಳ ಮೇಲೆ ಅಧ್ಯಯನ ತಂಡಗಳನ್ನು ರಚಿಸಲಾಯಿತು. ಇನ್ ಫೋಸಿಸ್ ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥ ಟಿ ವಿ ಮೋಹನ್ ದಾಸ್ ಪೈ, ಉದ್ಯಮಿ ಅಭಯ ಜೈನ್, ಗೂಗಲ್ ರಿಸರ್ಚ್ ಮುಖ್ಯ ಕಾರ್ಯನಿರ್ವಾಹಣ ಅಧಿಕಾರಿ ಪ್ರಸಾದ್ ರಾಮ್ ಮತ್ತಿತರರು ಉಪಸ್ಥಿತರಿದ್ದರು.
(ದಟ್ಸ್ ಕನ್ನಡ ವಾರ್ತೆ)