ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಉಗ್ರ ಪ್ರಭಾಕರನ್ ಭಾರತಕ್ಕೆ ಹಸ್ತಾಂತರ : ಲಂಕಾ
ಖಾಸಗಿ ವಾಹಿನಿಯೊಂದಕ್ಕೆ ಸಂದರ್ಶನ ನೀಡಿರುವ ಅವರು, ತಮಿಳು ವ್ಯಾಘ್ರರ ಕಥೆ ಬಹುತೇಕ ಮುಗಿದಿದೆ. ಶೀಘ್ರದಲ್ಲಿ ಅದರ ಮುಖ್ಯಸ್ಥ ಪ್ರಭಾಕರನ್ ಅವರನ್ನು ಬಂಧಿಸಲಾಗುವುದು ಎಂದರು. ಪ್ರಭಾಕರನ್ ಅವರನ್ನು ಭಾರತಕ್ಕೆ ಹಸ್ತಾಂತರಿಸಲು ಲಂಕಾ ಸರಕಾರ ಸಿದ್ಧವಿದೆ. ಅದಕ್ಕೂ ಮುಂಚೆ ಲಂಕಾದಲ್ಲಿ ಅವರ ಮೇಲಿರುವ ಎಲ್ಲ ಪ್ರಕರಣಗಳ ವಿಚಾರಣೆ ನಡೆಸಲಾಗುವುದು ಎಂದು ರಾಜಪಕ್ಷ್ಸೆ ತಿಳಿಸಿದರು. ಕೊಲಂಬೊ ಪ್ರೇಮದಾಸ ವಿಮಾನ ನಿಲ್ದಾಣದ ಮೇಲೆ ವೈಮಾನಿಕ ದಾಳಿ ಸೇರಿ ಅನೇಕ ಭಯೋತ್ಪಾದನಾ ಕೃತ್ಯಗಳನ್ನು ಪ್ರಭಾಕರನ್ ಎದುರಿಸುತ್ತಿದ್ದಾರೆ.
ಭಾರತ ಮಾಜಿ ಪ್ರಧಾನಿ ರಾಜೀವ ಗಾಂಧಿ ದೊಡ್ಡ ನಾಯಕರು. ಅಂತಹ ನಾಯಕರನ್ನು ಭಯಾನಕವಾಗಿ ಹತ್ಯೆ ಮಾಡಿರುವ ಆರೋಪ ಪ್ರಭಾಕರನ್ ಮೇಲಿದೆ. ಅವರ ವಿರುದ್ದ ಭಾರತದಲ್ಲಿಯೂ ಅನೇಕ ಪ್ರಕರಣಗಳು ದಾಖಲಾಗಿವೆ. ಈ ಹಿನ್ನೆಲೆಯಲ್ಲಿ ಲಂಕಾದಲ್ಲಿ ದಾಖಲಾಗಿರುವ ಪ್ರಕರಣಗಳ ವಿಚಾರಣೆಯ ನಂತರ ಪ್ರಭಾಕರನ್ ಅವರನ್ನು ಭಾರತಕ್ಕೆ ಹಸ್ತಾಂತರಿಸಲಾಗುವುದು ಎಂದು ರಾಜಪಕ್ಷ್ಸೆ ಹೇಳಿದರು.
(ದಟ್ಸ್ ಕನ್ನಡ ವಾರ್ತೆ)
ಎಲ್ ಟಿಟಿಇ 100 ಕೋ ರು ಸಹಾಯಧನ
Comments
ಭಾರತ india ltte ಪ್ರಭಾಕರನ್ prabhakaran mahinda rajapaksa ತಮಿಳುನಾಡು tamil nadu rajiv gandhi srilankan tamils
Story first published: Tuesday, April 28, 2009, 11:47 [IST]