ಸಾಹಿತಿ ದೇಶ ಕುಲಕರ್ಣಿ ನಿಧನಕ್ಕೆ ಸಂತಾಪ

ಬೆಂಗಳೂರು, ಏ. 26: ಕನ್ನಡದ ಹಿರಿಯ ಕವಿ, ಕಥೆಗಾರ ಹಾಗೂ ವಿಮರ್ಶಕರಾಗಿ ಹೆಸರು ಮಾಡಿದ 71 ವರ್ಷ ವಯಸ್ಸಿನ ದೇಶ ಕುಲಕರ್ಣಿ ಅವರ ನಿಧನದಿಂದ ಕನ್ನಡ ಸಾಹಿತ್ಯ ಲೋಕ ಪ್ರತಿಭಾನ್ವಿತ ಬರಹಗಾರರೊಬ್ಬರನ್ನು ಕಳೆದುಕೊಂಡಂತಾಗಿದೆ.

7 ಕವನ ಸಂಕಲನಗಳನ್ನು ಪ್ರಕಟಿಸಿರುವ ಇವರ ಕೂಡಿಕೊಂಡ ಸಾಲು ಕವನ ಸಂಕಲನ 1999ನೇ ಸಾಲಿನ ಸಾಹಿತ್ಯ ಅಕಾಡೆಮಿಯ ಪುಸ್ತಕ ಬಹುಮಾನ ಪಡೆದುಕೊಂಡಿದೆ. ಇದಲ್ಲದೆ 2 ಕಥಾ ಸಂಕಲನಗಳು, 1 ನಾಟಕ ಮತ್ತು 3 ವಿಮರ್ಶಾ ಗ್ರಂಥಗಳು ಹಾಗೂ ಎರಡು ಸಂಪಾದಿತ ಕೃತಿಗಳನ್ನು ಪ್ರಕಟಿಸಿರುವ ಇವರು ಕನ್ನಡ ಮತ್ತು ಇಂಗ್ಲೀಷ್ ಎರಡೂ ಭಾಷೆಗಳಲ್ಲಿ ಆಳವಾದ ಅಭ್ಯಾಸ ಮಾಡಿದ್ದರು. ದೇಶ ಕುಲಕರ್ಣಿ ಸರಳ ಸಜ್ಜನಿಕೆಯ ವ್ಯಕ್ತಿತ್ವ ಹೊಂದಿದವರು. ಇವರ ನಿಧನಕ್ಕೆ ಕರ್ನಾಟಕ ಸಾಹಿತ್ಯ ಅಕಾಡೆಮಿಯು ಸಂತಾಪ ಸೂಚಿಸಿದೆ.

(ದಟ್ಸ್ ಕನ್ನಡ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+