ಮಲಬಾರಿ ಪರ ವಾದಿಸಿದ್ದ ವಕೀಲ ಖಾಸಿಂ ಹತ್ಯೆ

Rashid Malabari
ಮಂಗಳೂರು, ಏ.10: ಇತ್ತೀಚೆಗೆ ಬಂಧನಕ್ಕೊಳಗಾಗಿದ್ದ ರಷೀದ್ ಮಲಬಾರಿ(ದಾವೂದ್ ಮತ್ತು ಛೋಟಾ ಶಕೀಲ್ ಬಂಟ) ಪರ ವಾದ ಮಾಡಿದ್ದ ವಕೀಲ ನೌಶಾದ್ ಖಾಸಿಂ(37)ರನ್ನು ದುಷ್ಕರ್ಮಿಗಳು ಗುರುವಾರ ರಾತ್ರಿ ಗುಂಡಿಟ್ಟು ಹತ್ಯೆ ಮಾಡಿದ್ದಾರೆ.

ಮಂಗಳೂರಿನ ಸ್ಟಾರಕ್ ರಸ್ತೆಯ ತನ್ನ ಫ್ಲ್ಯಾಟ್ ನಿಂದ ಖಾಸಿಂ ಅವರು ರಾತ್ರಿ ಸುಮಾರು 9.10 ವೇಳೆಗೆ ಫಳ್ನೀರ್ ರಸ್ತೆ ಕಡೆಗೆ ನಡೆದುಕೊಂಡು ಬರುತ್ತಿದ್ದರು. ಆಗ ದುಷ್ಕರ್ಮಿಗಳು ಅವರ ಮೇಲೆ ಗುಂಡಿನ ದಾಳಿ ನಡೆಸಿ ಕತ್ತಲಲ್ಲಿ ಪರಾರಿಯಾದರೆಂದು ಪ್ರತ್ಯಕ್ಷ ದರ್ಶಿಗಳು ಪೊಲೀಸರಿಗೆ ತಿಳಿಸಿದ್ದಾರೆ. ಗುಂಡೇಟಿನ ಬಳಿಕ ಖಾಸಿಂ ಅವರು ಸ್ವಲ್ಪ ದೂರ ಓಡಿಹೋಗಿ ಇನ್ನೊಂದು ಫ್ಲ್ಯಾಟ್ ನ ಮೆಟ್ಟಿಲೇರುವ ಯತ್ನ ನಡೆಸಿ ಕುಸಿದು ಬಿದ್ದು ಅಲ್ಲೇ ಮೃತಪಟ್ಟರು. ಸ್ಥಳಕ್ಕೆ ಧಾವಿಸಿದ ಪೊಲೀಸರು ಖಾಸಿಂ ಅವರನ್ನು ಆಸ್ಪತ್ರೆಗೆ ಒಯ್ದರು. ಹತ್ಯೆ ನಡೆದ ಸ್ಥಳದಲ್ಲಿ ಐದಾರು ಗುಂಡುಗಳು ಕಂಡುಬಂದಿವೆ.

ಖಾಸಿಂ ಮೂಲತಃ ಭಟ್ಕಳದವರು. ಇವರಿಗೆ ಪತ್ನಿ ಮತ್ತು ಇಬ್ಬರು ಮಕ್ಕಳಿದ್ದಾರೆ. ಪತ್ನಿ ಸಹ ಕಾನೂನು ಪದವೀಧರೆ. ಮಂಗಳೂರು ಮತ್ತು ಉಡುಪಿಯಲ್ಲಿ ಖಾಸಿಂ ಅವರು ವಕೀಲಿ ವೃತ್ತಿನಡೆಸುತ್ತಿದ್ದರು. ಉಳ್ಳಾಲ ಮತ್ತು ಪಣಂಬೂರಿನ ಪೊಲೀಸ್ ಕಸ್ಟಡಿಯಲ್ಲಿದ್ದ ಮಲಬಾರಿ ಪರವಾಗಿ ಅವರು ವಾದಿಸುತ್ತಿದ್ದರು. ಮಲಬಾರಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತ್ತು.

ಬೈಕಂಪಾಡಿಯಲ್ಲಿ ಜೋಡಿ ಕೊಲೆ, ಛೋಟಾ ರಾಜನ್ ಹತ್ಯೆ ಯತ್ನ, ಕರಾವಳಿಯಲ್ಲಿ ಅಶಾಂತಿ ಸೃಷ್ಟಿ ಸಿದ ಆರೋಪಗಳು ಮಲಬಾರಿ ಮೇಲಿವೆ. ಹತ್ಯೆಯಾದ ಸ್ಥಳದಲ್ಲಿ ಖಾಸಿಂ ಅವರ ಮೊಬೈಲ್, ಪರ್ಸ್, ಪೆನ್ ಇತ್ಯಾದಿ ವಸ್ತುಗಳು ರಕ್ತಸಿಕ್ತವಾಗಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು.

(ದಟ್ಸ್ ಕನ್ನಡ ವಾರ್ತೆ)

ಛೋಟಾ ಶಕೀಲ್ ನ ಐವರು ಸಹಚರರ ಬಂಧನ
ಡಿ ಗ್ಯಾಂಗ್ ನ ಛೋಟಾ ಶಕೀಲ್ ನಿಂದ ಬೆದರಿಕೆ ಕರೆ
ವರುಣ್ ಗಾಂಧಿ ಹತ್ಯೆಗೆ ಛೋಟಾ ಶಕೀಲ್ ಸಂಚು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+